ಹಳಿಯಾಳ:- ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಹಿಂದೂಳಿದಿರುವ ಮರಾಠಾ ಸಮುದಾಯವನ್ನು ಈ ಹಿಂದಿನ ಯಾವ ಸರ್ಕಾರಗಳು ಪ್ರವರ್ಗ 3ಬಿಯಿಂದ 2ಎಗೆ ಸೇರ್ಪಡೆಗೊಳಿಸಿಲ್ಲ. ಪ್ರಸ್ತುತ ಸಮ್ಮಿಶ್ರ ಸರ್ಕಾರವು ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಮರಾಠಾ ಸಮಾಜದ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಸಮಾಜದ ಬೇಡಿಕೆ ಈಡೇರುವ ವರೆಗೆ ಹೋರಾಟ ಮುಂದುವರೆಸಲಾಗುವುದು ಎಂದು ಘೋಷಿಸಿದ್ದಾರೆ. ಪಟ್ಟಣದ ತಮ್ಮ ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದೆ ಶಂಕ್ರಪ್ಪಾ ನೇತೃತ್ವದ ಆಯೋಗ ಮರಾಠಾ ಸಮುದಾಯ ವಾಸಿಸುವ ಪ್ರದೇಶದಲ್ಲಿ ಅಧ್ಯಯನ ನಡೆಸಿ ಮರಾಠರನ್ನು 2ಎಗೆ ಸೇರಿಸುವ ಬೇಡಿಕೆ ಸೂಕ್ತವಾಗಿದೆ ಎಂದು ಹೇಳಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಆದರೇ ಆ ಬಳಿಕ ಕಾಂಗ್ರೇಸ್ ಸರ್ಕಾರ ಕೂಡ ಬೇಡಿಕೆ ಈಡೇರಿಸಿಲ್ಲ ಸದ್ಯ ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಕಾಂಗ್ರೇಸ್ ಮತ್ತು ಜೆಡಿಎಸ್ ಎರಡು ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಮರಾಠರನ್ನು 2ಎಗೆ ಸೇರಿಸುವುದಾಗಿ ಹೇಳಿದ್ದರೂ ಈವರೆಗೆ ಈ ವಿಷಯದ ಬಗ್ಗೆ ಮಾತನಾಡದೆ ಮೌನ ತಾಳಿರುವುದು ಮರಾಠರ ಹೋರಾಟಕ್ಕೆ ಬೆಲೆ ಇಲ್ಲವೇ ಎಂದು ತೀವೃ ಅಸಮಾಧಾನ ಹೋರ ಹಾಕಿದರು. “ಏಕ ಮರಾಠಾ ಲಾಖ್ ಮರಾಠಾ” ಮೌನ ಕ್ರಾಂತಿಯ ಮೂಲಕ ಸರ್ಕಾರದ ಗಮನ ಸೆಳೆಯಲಾಗಿತ್ತು ಆದರೇ ಲಕ್ಷಾಂತರ ಕನ್ನಡಿಗ ಮರಾಠಿಗರ ಮೌನ ಹೋರಾಟ ಹಾಗೂ ತಾವು ವಿಧಾನ ಪರಿಷತ್ನಲ್ಲಿ ಹಲವಾರು ಬಾರಿ ಪ್ರಶ್ನೇ ಮಾಡಿದ್ದರು ಸಹ ಸರ್ಕಾರದ ಕಿವಿಗೆ ಬಿದ್ದಂತೆ ಕಾಣುತ್ತಿಲ್ಲ. ಇನ್ನೂ ಮುಂದೆ ಹೋರಾಟವನ್ನು ತೀವೃಗೊಳಿಸಲಾಗುವುದು ಅದಕ್ಕೂ ಮುನ್ನವೇ ಮರಾಠರ ಧ್ವನಿಗೆ ಓಗೊಟ್ಟು ಪ್ರವರ್ಗ 2ಎಗೆ ಸೇರಿಸುವಂತೆ ಘೋಟ್ನೇಕರ ಆಗ್ರಹಿಸಿದರು. ಫಸಲ್ ಬಿಮಾ ಯೋಜನೆಯಡಿಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ 28ಕೋಟಿ 66ಲಕ್ಷ ರೂ. ಬೆಳೆ ವಿಮೆ ಬಿಡುಗಡೆಯಾಗಿದ್ದು. ಹಳಿಯಾಳ ಕ್ಷೇತ್ರಕ್ಕೆ 17ಕೋಟಿ 41ಲಕ್ಷ ರೂ. ಮಂಜೂರಿಯಾಗಿ ಈಗಾಗಲೇ ಫಲಾನುಭವಿ ಎಲ್ಲ ರೈತರ ಖಾತೆಗಳಿಗೆ ಹಣ ಜಮಾ ಆಗಿದೆ ಎಂದು ತಿಳಿಸಿರುವ ಜಿಲ್ಲಾ ಮಧ್ಯವರ್ತಿ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರು ಆಗಿರುವ ಎಸ್.ಎಲ್.ಘೋಟ್ನೇಕರ ಇದು ಕೇವಲ ಭತ್ತದ ಫಸಲಿನ ಪರಿಹಾರವಾಗಿದ್ದು ಸಂಕಷ್ಟದಲ್ಲಿರುವ ರೈತನಿಗೆ ಸ್ವಲ್ಪ ಮಟ್ಟಿಗೆ ನೀರಾಳರನ್ನಾಗಿಸಿದೆ ಎಂದಿದ್ದಾರೆ. ಮಾಜಿ ಸಿಎಮ್ ಸಿದ್ದರಾಮಯ್ಯ ಸರ್ಕಾರದ ಸಾಲ ಮನ್ನಾದ ಕೆಡಿಸಿಸಿ ಬ್ಯಾಂಕ್ಗೆ ಬರಬೇಕಾದ 300ಕೋಟಿ ರೂ. ಬಾಕಿ ಮೊತ್ತ ತಮ್ಮ ಸತತ ಪ್ರಯತ್ನದಿಂದ ಈಗಾಗಲೇ ಹಣಕಾಸು ಇಲಾಖೆಯಿಂದ 1ಸಾವಿರ ಕೋಟಿ ಬಿಡುಗಡೆಗೊಳಿಸಲಾಗಿದೆ. ಆದರೇ ಅದನ್ನು ತಡೆಹಿಡಿಯಲಾಗಿದ್ದು ಕೂಡಲೇ ಸಂಬಂಧಪಟ್ಟ ಮಂತ್ರಿಗಳು ಕ್ರಮ ಕೈಗೊಂಡು ಅಪೇಕ್ಷ ಬ್ಯಾಂಕ್ಗೆ ಹಣ ಜಮಾ ಮಾಡಬೇಕು. ಇಲ್ಲವಾದಲ್ಲಿ ಸಹಕಾರಿ ಸಂಘಗಳಿಂದ ಪ್ರತಿಭಟನೆ ಎದುರಿಸಬೇಕಾಗಬಹುದು ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ವಿ.ಪ.ಸದಸ್ಯ ಘೋಟ್ನೇಕರ ನೀಡಿದರು. ಇತ್ತೀಚೆಗೆ ಗ್ರಾಮಸ್ಥರ ಸಹಕಾರದಿಂದ ಮಧ್ಯಪ್ರದೇಶ ಮೂಲದ ಅಂತರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಹಳಿಯಾಳ ಪೋಲಿಸರ ಕಾರ್ಯಕ್ಕೆ ಅಭಿನಂದಿಸಿರುವ ಘೋಟ್ನೇಕರ ಅವರು ಇನ್ನೂ ಮುಂದೆಯೂ ಪೋಲಿಸರು ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸಲಿ ಎಂದು ಕರೆ ನಿಡಿದ್ದಾರೆ. ಸುದ್ದಿಗೊಷ್ಠಿಯಲ್ಲಿ ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ, ಅಶೋಕ ಮೇಟಿ, ಬಾಬು ಮಿರಾಶಿ, ಅಶೋಕ ಘೊಟ್ನೇಕರ ಇದ್ದರು.
Leave a Comment