ಹಳಿಯಾಳ:- ಭಾರತ ದೇಶ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದಲ್ಲಿ ಪ್ರಗತಿ ಹೊಂದುತ್ತಿದೆ. ವಿದ್ಯಾರ್ಥಿಗಳು ತಮ್ಮ ಆಲೋಚನಾ ಶಕ್ತಿಯನ್ನು ವಿಶಾಲಗೊಳಿಸಿ ಹೊಸ ಹೊಸ ಆವಿಷ್ಕಾರಗಳಿಗೆ ನಾಂದಿ ಹಾಡಬೇಕೆಂದು ಡಿ.ಪಿ.ಐ.ಟಿ.ಐನ ಪ್ರಾಚಾರ್ಯ ದಿನೇಶ ಆರ್ ನಾಯ್ಕ ಕರೆ ನೀಡಿದರು. ಪಟ್ಟಣದ ವಿಆರ್. ಡಿ. ಎಮ್ ಟ್ರಸ್ಟನ್ ವಿ.ವಿ.ಡಿ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯಲ್ಲಿ ‘’ಪೈ ಅಪ್ರೊಷಿಮೆಶನ್ ದಿನಾಚರಣೆಯ’’ ಅಂಗವಾಗಿ ನಡೆದ ವಿಜ್ಞಾನ ಮತ್ತು ಗಣಿತ ಮಾದರಿಗಳ ವಸ್ತು ಪ್ರದರ್ಶನ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು. ಪ್ರಾಂಶುಪಾಲ ಡಾ.ಸಿ.ಬಿ ಪಾಟೀಲ ಮಾತನಾಡಿ ಪೈ ದಿನದ ವಿಶೇಷತೆ, ಮಹತ್ವ, ಮತ್ತು ಗಣಿತದ ಹಲವಾರು ಸಂಕೇತಗಳ ಉಪಯೋಗ ತಿಳಿಸುತ್ತಾ, ವಿದ್ಯಾರ್ಥಿಗಳು ಹೊಸ ಹೊಸ ವಸ್ತುಗಳ ಆವಿಷ್ಕಾರಗಳತ್ತ ತಮ್ಮ ಗಮನಹರಿಸಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು. ವಸ್ತು ಪ್ರದರ್ಶನದಲ್ಲಿ ಶಾಲೆಯ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಜ್ಞಾನ ಹಾಗೂ ಗಣಿತದ ಮಾದರಿಗಳನ್ನು ಸರಳ ಮತ್ತು ನಿರುಪಯುಕ್ತ ವಸ್ತುಗಳನ್ನು ಬಳಸಿ ಮಾದರಿಗಳನ್ನು ತಯಾರಿಸಿ ಅವುಗಳ ಉಪಯೋಗ ಮತ್ತು ಕಾರ್ಯ ದಕ್ಷತೆಯ ಕುರಿತು ವಿವರಿಸಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿ ಬ್ರೆವಿನ ಪರ್ನಾಂಡಿಸ್ ಮತ್ತು ವಿಶ್ವನಾಥ ಹುಬ್ಬಳ್ಳಿ, ವಿಜ್ಞಾನ ಮತ್ತು ಗಣಿತದ ವಸ್ತು ಪ್ರದರ್ಶನದ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿನಿ ತನಿಷ್ಕಾ ಕಲಾಲ ಕಾರ್ಯಕ್ರಮ ನಿರ್ವಹಿಸಿದಳು.
Leave a Comment