ಹಳಿಯಾಳ:- ತಾಲೂಕಿನಾದ್ಯಂತ ವಿವಿಧ ನೆಟವರ್ಕ ಕಂಪೆನಿಗಳು ಸಲ್ಲಿಸುತ್ತಿರುವ ಅಸಮರ್ಪಕ ಸೇವೆಯನ್ನು ವಿರೋಧಿಸಿ ಶುಕ್ರವಾರ ದಿ.27ರಂದು ಹಳಿಯಾಳ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ಘಟಕ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ ತಿಳಿಸಿದರು. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಗ್ರಾಹಕರÀ ಜೊತೆಗೂಡಿ ಸಂಘಟನೆಯ ನೇತೃತ್ವದಲ್ಲಿ ದಿ.27 ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಸಂಗೋಳ್ಳಿ ರಾಯಣ್ಣ(ಅರ್ಬನ್) ವೃತ್ತದಿಂದ ಪ್ರತಿಭಟನೆ ಪ್ರಾರಂಭಿಸಲಾಗುವುದು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಆಯಾ ನೆಟವರ್ಕ ಕಂಪೆನಿಗಳ ಕರೆನ್ಸಿ ವಿತರಕರಿಗೆ ಮನವಿ ಸಲ್ಲಿಸಲಾಗುವುದು ಬಳಿಕ ರಾಜ ಏಜೆನ್ಸಿ ಎದುರು ಧರಣಿ ನಡೆಸಲಾಗುವುದೆಂದು ತಿಳಿಸಲಾಗಿದೆ. ಬಿಎಸ್ಎನ್ಎಲ್, ವೊಡಾಪೋನ್, ಐಡಿಯಾ, ಡೊಕೊಮೊ ನೆಟವರ್ಕ ಕಂಪೆನಿಗಳು ಸೇರಿದಂತೆ ಪ್ರಮುಖವಾಗಿ ಏರಟೆಲ್ ಕಂಪೆನಿಯವರು ಹಳಿಯಾಳ ಭಾಗದಲ್ಲಿ 4ಜಿ ಸೇವೆ ಎಂದು ಹೇಳಿ 2ಜಿ ಗಿಂತ ಕೆಳಮಟ್ಟದ ಅಸಮರ್ಪಕ ಸೇವೆ ಒದಗಿಸೂವ ಮೂಲಕ ಗ್ರಾಹಕರನ್ನು ದೊಚುತ್ತಿದ್ದಾರೆಂದು ಅವರು ಆರೋಪಿಸಿದ್ದಾರೆ. ಶ್ರೀ ರಾಜ ಏಜೆನ್ಸಿ ಹಳಿಯಾಳ ಹಾಗೂ ಏರಟೆಲ್.ಲಿ.ಮಂಗಳೂರು ಹಳಿಯಾಳ ಭಾಗದ ಮುಖ್ಯಸ್ಥ ಮೊಹಮ್ಮದ ರಫಿ ಎನ್ನುವವರಿಗೆ ಹಳಿಯಾಳ ಭಾಗದಲ್ಲಿ ಏರಟೆಲ್ ಸೇವೆಯ ಬಗ್ಗೆ ಮಾಹಿತಿಗಳನ್ನು ಕೊರಿ ದಿ.24-07-2018 ರಂದು ಇಮೇಲ್ ಮಾಡಲಾಗಿದೆ. ಅಲ್ಲದೇ ಹಳಿಯಾಳದ ರಾಜ ಏಜೆನ್ಸಿ ಅವರಿಗೆ ಲಿಖಿತ ಪತ್ರದ ಮೂಲಕ ಮಾಹಿತಿಯನ್ನು ಕೇಳಲಾಗಿತ್ತು. ಆದರೇ ಅವರು ಹಾಗೂ ಮಂಗಳೂರಿನ ಕಚೇರಿಯವರು ಯಾವುದೇ ಉತ್ತರ ನೀಡದೆ ಇರುವುದರಿಂದ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದ್ದು ರಾಜ ಏಜೆನ್ಸಿ ಕಚೇರಿ ಎದುರು ಲಿಖಿತ ಉತ್ತರ ನೀಡುವವರೆಗೆ ಧರಣಿ ನಡೆಸಲಾಗುವುದು ಎಂದು ಬಸವರಾಜ ಮಾಹಿತಿ ನೀಡಿದ್ದಾರೆ.
Leave a Comment