ಹಳಿಯಾಳ:- ಜನಸಂಖ್ಯಾ ಸ್ಪೋಟವು ಇಂದು ಅನೇಕ ಸಮಸ್ಯಗಳಿಗೆ ಕಾರಣವಾಗಿದ್ದು, ಜನಸಂಖ್ಯಾ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಳ್ಳುತ್ತಿದೆ. ಕುಟುಂಬ ಕಲ್ಯಾಣ ವಿಧಾನಗಳನ್ನು ಬಳಸುವ ಮುಖಾಂತರ ಚಿಕ್ಕ ಕುಟುಂಬ ಹೊಂದಿ ಬೆಳೆಯುತ್ತಿರುವ ಜನಸಂಖ್ಯೆ ನಿಯಂತ್ರಿಸಲು ಕೈಜೊಡಿಸುವಂತೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಕರೆ ನೀಡಿದರು. ಗುರುವಾರ ಹಳಿಯಾಳ ಆರೋಗ್ಯ ಇಲಾಖೆ ಮತ್ತು ಸರಕಾರಿ ಶಿವಾಜಿ ಪದವಿ ಪೂರ್ವ ಕಾಲೇಜ ಜಂಟಿ ಆಶ್ರಯದಲ್ಲಿ ಶಿವಾಜಿ ವಿದ್ಯಾಲಯದ ಸಭಾಭವನದಲ್ಲಿ ನಡೆದ ತಾಲೂಕಾ ಮಟ್ಟದ 2018ರ ವಿಶ್ವ ಜನಸಂಖ್ಯಾ ದಿನಾಚಾರಣೆ ಕಾರ್ಯಕ್ರಮ ಹಾಗೂ ತಾಲೂಕಾ ಮಟ್ಟದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಾಲೇಜಿನ ಉಪನ್ಯಾಸಕ ಆರ್.ಸಿ.ಹೆಗಡೆ ಜನಸಂಖ್ಯಾ ಸ್ಥಿರತೆ ಕುರಿತು ಉಪನ್ಯಾಸ ನೀಡಿದರು. ತಾಲೂಕಿನಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದ ಆರೋಗ್ಯ ಕಾರ್ಯಕರ್ತೆ ವಿದ್ಯಾ ಕೆ ನಾಯ್ಕ ಮತ್ತು ಆಶಾ ಕಾರ್ಯಕರ್ತೆಯಾದ ಸುನಂದಾ ಭೋಸಲೆ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ|| ರಮೇಶ ಕದಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜನಸಂಖ್ಯಾ ನಿಯಂತ್ರಣಕ್ಕೆ ವಿವಿಧ ಕಾರ್ಯಕ್ರಮಗಳ ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಸದಸ್ಯ ಕೃಷ್ಣಾ ನಾರಾಯಣ ಪಾಟೀಲ, ಪುರಸಭೆ ಉಪಧ್ಯಾಕ್ಷ ಅರುಣ ಬೊಬಾಟೆ, ವೈದ್ಯಾಧಿಕಾರಿ ಡಾ|| ಮಂಜುಳಾ ಮುದಕಣ್ಣವರ, ಉಪನ್ಯಾಸಕ ವಿಠ್ಠಲ, ಪ್ರಕಾಶ ಇದ್ದರು.
Leave a Comment