ಹೊನ್ನಾವರ : ತಾಲೂಕಿನ ಗುಂಡಬಾಳಾದ ಆರೋಗ್ಯ ಮಾತಾ ಪ್ರೌಢಶಾಲೆಯಲ್ಲಿ ‘ಚಿಗುರು’ ಇಕೋ ಕ್ಲಬ್ ಹಾಗೂ ‘ರಾಮನ್ ವಿಜ್ಞಾನ ಸಂಘ’ದ ಅಡಿಯಲ್ಲಿ ಶಾಲಾ ವನಮಹೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಸಂಚಾಲಕರಾದ ವಂ. ಫಾ|| ಎಡ್ವಿನ್ ಡಿ’ಸೋಜಾರವರು ಗಿಡಮರಗಳು ಮನುಕುಲಕ್ಕೆ ನೀಡಿದ ಅಪಾರ ಕೊಡುಗೆಗಳ ಕುರಿತು ತಿಳಿಸಿ ಅವುಗಳನ್ನು ಪ್ರೀತಿಸಿ ಬೆಳೆಸುವಂತೆ ತಿಳಿಸಿದರು. ಅತಿಥಿಗಳಾಗಿ ಅನುಗ್ರಹ ಕಾನ್ವೆಂಟ್ನ ಸುಪಿರೀಯರ್ ಸಿ|| ಸುಮನಾರವರು ಆಗಮಿಸಿದ್ದರು. ವೇದಿಕೆಯಲ್ಲಿ ಶಾಲಾ ಮುಖ್ಯಾಧ್ಯಾಪಕರಾದ ವಿಲ್ಸನ್ ಡಿ. ಲೂಯಿಸ್ರವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಾಲಾ ಮುಖ್ಯಮಂತ್ರಿಯಾದ ಕು. ಜೊನಿಟನ್ ಲೋಬೊ ಸ್ವಾಗತಿಸಿದರೆ, ಇಕೋ ಕ್ಲಬ್ನ ಅಧ್ಯಕ್ಷರಾದ ಕು. ಜೀವರಾಜ ಗೌಡ ವಂದಿಸಿದರು. ಕಾರ್ಯದರ್ಶಿಯಾದ ಕು. ಶ್ರೀನಿಧಿ ನಾಯ್ಕ ನಿರೂಪಿಸಿದಳು. ಶಾಲಾ ಮೈದಾನದ ಅಂಚಿನಲ್ಲಿ ಅತಿಥಿಗಳು ಸಾಂಕೇತಿಕವಾಗಿ ಗಿಡ ನೆಡುವುದರ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು.
Leave a Comment