ಹೊನ್ನಾವರ: ತಾಲೂಕಿನ ಚಂದಾವರದ ಚಂದಾವರ-ಕಡ್ನೀರು ರಸ್ತೆಯ ಪಕ್ಕದ ಅರಣ್ಯದಲ್ಲಿ ಅಂದರ್ ಬಾಹರ್ ಆಡುತ್ತಿದ್ದ ಆರೋಪಿಗಳು ಅಂದರ್ ಆದ ಪ್ರಕರಣ À ನಡೆದಿದೆ.
ಚಂದಾವರ-ಕಡ್ನೀರು ಅರಣ್ಯದಲ್ಲಿ ಜೂಜಾಡುತ್ತಿದ್ದಾಗ 33,400 ರೂ ಹಣ, ಮೂರು ಮೊಬೈಲ್ ಸೇರಿದಂತೆ ಜೂಜಾಟಕ್ಕೆ ಬಳಸಿದ್ದ ಇಸ್ಟಿಟ್ ಎಲೆಗಳು ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಸ್ಪಿಟ್ ಎಲೆಗಳ ಮೇಲೆ ಹಣವನ್ನು ಪಂತಕಟ್ಟಿ ಅಂದರ್ ಬಾಹರ್ ಜೂಜಾಟವಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂದಿಸಲಾಗಿದೆ.ಬಂದಿತ ಆರೋಪಿತರು ಕುಮಟಾ ಅಳ್ವೇಕೋಡಿಯ ನಿವಾಸಿ ನಾಗೆಶ ಮಾಸ್ತಿ ನಾಯ್ಕ, ಹೊನ್ನಾವರ ತಾಲೂಕಿನ ಹಳದಿಪುರ ನಿವಾಸಿ ಚಂದ್ರಕಾಂತ ಡಿಂಗಾ ಖಾರ್ವಿ, ಸಾಲಿಕೇರಿಯ ಶಿವಾನಂದ ವಾಮನ ನಾಯ್ಕ, ಹೊದಿಕೆ ಶಿರುರಿನ ವೇಂಕಟೇಶ ಲಕ್ಷ್ಮಣ ಭಂಡಾರಿ, ಇನ್ನುಳಿದಂತೆ ಆರೋಪಿತÀ ಚಂದಾವರದ ಕಿರಣ ಬಾಡ್ಲರ್ ಸೇರಿದಂತೆ ಇನ್ನಿತರರು ದಾಳಿ ವೇಳೆ ತಪ್ಪಿಸಿಕೊಂಡು ಒಡಿಹೋಗಿದ್ದು ಶೋಧ ಕಾರ್ಯ ನಡೆದಿದೆ. ಪಿಎಸ್ಐ ಆನಮದ ಮೂರ್ತಿ ಹಾಗೂ ಸಿಬ್ಬಂದಿಗಳ ನೆತ್ರತ್ವದಲ್ಲಿ ದಾಳಿ ನಡೆದಿದೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment