ಹೊನ್ನಾವರ: ಇಲ್ಲಿನ ಪ.ಪಂ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ನೀಲಕಂಠ ನಾಯ್ಕ ಪುನರ್ ಆಯ್ಕೆಯಾಗಿದ್ದಾರೆ. ಈ ಅವಧಿಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನಾಗೇಶ್ ಮೇಸ್ತ ಹಾಗೂ ನೀಲಕಂಠ ನಾಯ್ಕ ಚುನಾವಣೆಯ ಕಣದಲ್ಲಿದ್ದರು. ನೀಲಕಂಠ ನಾಯ್ಕ ಬೆಂಬಲಿಸಿ ಸದಸ್ಯರಾದ ರವೀಂದ್ರ ನಾಯ್ಕ, ಸುರೇಶ್ ಎಸ್.ಮೇಸ್ತ, ಸಿ.ಜಿ ನಾಯ್ಕ, ಶೀಲಾ ಹೊನ್ನಾವರ, ಜೈನಾಬಿ ಇಸ್ಮಾಯಿಲ್ ಸಾಬ್, ತಾರಾ ಕುಮಾರಸ್ವಾಮಿ,ಜಮಿಲಾಬಿ ಶೆಖ್,ನೀಲಕಂಠ ನಾಯ್ಕ, ಸೇರಿ ಎಂಟು ಮತಗಳನ್ನು ಪಡೆದು ಗೆಲವು ಸಾಧಿಸಿದರು. ನಾಗೇಶ್ ಮೇಸ್ತ ಪರವಾಗಿ ತುಳಸಿದಾಸ್ ಪುಲ್ಕರ್, ಬಾಲಕೃಷ್ಣ ಬಾಳೇರಿ, ಸುರೇಶ್ ಶೇಟ್, ಮಹಾಲಕ್ಮೀ ಹರಿಜನ್, ಉದಯ್ ನಾಯ್ಕ, ದಾಮೋದರ ಮೇಸ್ತ ಹಾಗೂ ನಾಗೇಶ್ ಮೇಸ್ತರ ಮತ ಸೇರಿ ಎಳು ಮತಗಳನ್ನು ಪಡೆದರು. ಸದಸ್ಯರು ಕೈ ಎತ್ತುವ ಮೂಲಕ ಮತ ಚಲಾಯಿಸಿದರು. ಒಂದು ಮತಗಳ ಅಂತರದಿಂದ ನೀಲಕಂಠ ನಾಯ್ಕ ಜಯಭೇರಿ ಬಾರಿಸಿದರು. ಸ್ಥಾಯಿ ಸಮಿತಿ ಅದ್ಯಕ್ಷ ಸ್ಥಾನಕ್ಕೆ ಬಿ.ಜೆ.ಪಿ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಎರ್ಪಟಿತ್ತು. ಪ.ಪಂ ಸದಸ್ಯೆ ಜೋಸ್ಬೀನ್ ಡಯಾಸ್ ಸಭೆಗೆ ಆಗಮಿಸದರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೋಳ್ಳದೇ ಸಭೆಯಿಂದ ಹೊರ ನಡೆದದ್ದು ವಿಷೇಶವಾಗಿತ್ತು. ಚುನಾವಣೆ ಅಧಿಕಾರಿಯಾಗಿ ಪ.ಪಂ ಮುಖ್ಯಾಧಿಕಾರಿ ಆರ್.ಎಮ್ ಪಾಟೀಲ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಪ.ಪಂ ಅಧ್ಯಕ್ಷೆ ರಾಜಶ್ರೀ ನಾಯ್ಕ ನೀಲಕಂಠ ನಾಯ್ಕ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಾಗಿ ಘೊಷೀಸಿದರು. ಪ.ಪಂ ಉಪಾಧ್ಯಕ್ಷೆ ಶರಾವತಿ ಮೇಸ್ತ ಸಭೆಯಲ್ಲಿ ಉಪಸ್ಥಿತರಿದ್ದರು.
Leave a Comment