ಹೊನ್ನಾವರ:”ಓದು ಮನುಷ್ಯನ ವ್ಯಕ್ತಿತ್ವಕ್ಕೆ ನಿರ್ಧಿಷ್ಟ ದೃಷ್ಟಿಕೋನ ನೀಡುವ ಜೊತೆಗೆ ಸುಸಂಸ್ಕøತ ಹಾಗೂ ಸಭ್ಯ ನಾಗರಿಕ ಸಮಾಜ ರೂಪಿಸಲು ನೆರವಾಗುತ್ತದೆ’ ಎಂದು ಇತಿಹಾಸ ಪ್ರಾಧ್ಯಾಪಕ ಪ್ರೊ.ಜಿ.ಎಸ್.ಹೆಗಡೆ ಅಭಿಪ್ರಾಯಪಟ್ಟರು.
ಸರ್ಕಾರಿ ಹಿ.ಪ್ರಾ.ಶಾಲೆ ಸ್ಥಿತಿಗಾರ,ಎಸ್.ಡಿ.ಎಂ. ಕಾಲೇಜಿನ ಎನ್.ಎಸ್.ಎಸ್. ಘಟಕ,ಕನ್ನಡ ಸಾಹಿತ್ಯ ಪರಿಷತ್ ಘಟಕ ಹಾಗೂ ಹೊನ್ನಾವರ ತಾಲೂಕಾ ಪತ್ರಕರ್ತರ ಸಂಘ ಇವುಗಳ ಅಶ್ರಯದಲ್ಲಿ ಸ್ಥಿತಿಗಾರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ “ಓದುವ ದಿನಾಚರಣೆ’ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
“ಬರವಣಿಗೆ ಹಾಗೂ ಓದಿನ ಆವಿಷ್ಕಾರದಿಂದ ಜಗತ್ತು ಪ್ರಗತಿ ಹೊಂದಲು ಸಾಧ್ಯವಾಯಿತು’ ಎಂದು ಅವರು ಹೇಳಿದರು.
ಗ್ರಾಮ ಪಂಚಾಯತ ಸದಸ್ಯೆ ಶಶಿಕಲಾ ಆಚಾರಿ ಮಾತನಾಡಿ”ಜ್ಞಾನಕ್ಕಿಂತ ಮಿಗಿಲಾದ ಸಂಗತಿ ಬದುಕಿನಲ್ಲಿ ಬೇರೊಂದಿಲ್ಲ.ಓದು ನಿತ್ಯದ ಕಾಯಕವಾಗಬೇಕು.ಬಾಲ್ಯದಲ್ಲಿ ಓದಿನ ಆಸಕ್ತಿ ಮೂಡಿಸುವಲ್ಲಿ ಶಾಲೆಗಳ ಪಾತ್ರ ಮಹತ್ವದಿದ್ದು ಹಳ್ಳಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುವಂತಾಗಲು ಸರ್ಕಾರಿ ಶಾಲೆಗಳ ಶಿಕ್ಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ಇತರರಿಗೆ ಮಾದರಿಯಾಗಬೇಕು’ ಎಂದು ಹೇಳಿದರು.
ಇಂಗ್ಲಿಷ್ ಪ್ರಾಧ್ಯಾಪಕ ಪ್ರೊ.ಎಂ.ಜಿ.ಹೆಗಡೆ ಮಾತನಾಡಿ,’ನಿಖರ ಮಾಹಿತಿ ನೀಡುವ ಜೊತೆಗೆ ವಿವಿಧ ವಿಷಯಗಳ ಕುರಿತಾದ ಜ್ಞಾನವನ್ನು ದಿನನಿತ್ಯ ಕಡಿಮೆ ದರದಲ್ಲಿ ಪುಸ್ತಿಕೆಗಳ ರೂಪದಲ್ಲಿ ನೀಡುತ್ತಿರುವ ಪತ್ರಿಕೆಗಳು ಸಮಾಜವನ್ನು ರೂಪಿಸುವಲ್ಲಿ ಬಹಳಷ್ಟು ಕೊಡುಗೆ ನೀಡಿವೆ’ ಎಂದು ಶ್ಲಾಘಿಸಿದರು.
ಕನ್ನಡ ಪ್ರಾಧ್ಯಾಪಕ ಪ್ರೊ.ನಾಗರಾಜ ಹೆಗಡೆ ಅಪಗಾಲ ಮಾತನಾಡಿ,”ಸಾಮಾಜಿಕ ಜಾಲತಾಣಗಳಿಂದ ಅರ್ಧಂಬರ್ಧ ವಿಷಯ ಜ್ಞಾನ ಉಂಟಾಗುತ್ತದೆ.ಉತ್ತಮ ಸಾಹಿತ್ಯ ಪುಸ್ತಕಗಳ ಓದು ಜೀವನ ಪ್ರೀತಿಯನ್ನು ಹೆಚ್ಚಿಸುತ್ತದೆ’ ಎಂದು ಹೇಳಿದರು.
ಸಿಆರ್ಪಿ ವಿನಾಯಕ ಹೆಗಡೆ ಮಾತನಾಡಿ,”ಶಿಕ್ಷಣದಲ್ಲಿ ನಲಿ-ಕಲಿ ಪದ್ಧತಿ ಅಳವಡಿಸಿರುವುದರಿಂದ ವಿದ್ಯಾರ್ಥಿಗಳಲ್ಲಿ ಓದಿನ ಕುರಿತು ಆಸಕ್ತಿ ಹೆಚ್ಚಿದೆ’ ಎಂದು ಪ್ರತಿಪಾದಿಸಿದರು.
ಪ್ರೊ.ಪ್ರಶಾಂತ ಹೆಗಡೆ ಮೂಡಲಮನೆ ಮಾತನಾಡಿದರು.
ಎಸ್ಡಿಎಂಸಿ ಅಧ್ಯಕ್ಷ ಕೃಷ್ಣ ಆಚಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಎಸ್ಡಿಎಂಸಿ ಸದಸ್ಯೆ ಮಮತಾ ಹೆಗಡೆ,ನಿವೃತ್ತ ಉಪನ್ಯಾಸಕ ಎಲ್.ವಿ.ಭಟ್ಟ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಎನ್.ವಿ.ಭಟ್ಟ ಸ್ವಾಗತಿಸಿದರು.ಬಿಂದು ಅವಧಾನಿ ನಿರೂಪಿಸಿದರು.ಹಿರಿಯ ಶಿಕ್ಷಕ ಎಂ.ಎಸ್.ಹೆಗಡೆ ವಂದಿಸಿದರು.
ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗಾಗಿ ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿತ್ತು.ನಾಗರಾಜ ಹೆಗಡೆ ಅಪಗಾಲ ಶಾಲೆಗೆ ಪುಸ್ತಕಗಳನ್ನು ದೇಣಿಗೆಯಾಗಿ ನೀಡಿದರು.
Leave a Comment