ಹೊನ್ನಾವರ: ಕೇವಲ ಸರ್ಕಾರದ ಅನುದಾನವನ್ನು ಬಳಸಿಕೊಂಡು ಶಿಕ್ಷಣ ಸಂಸ್ಥೆಯನ್ನು ಸಂಪೂರ್ಣವಾಗಿ ಅಭಿವೃದ್ದಿ ಪಡಿಸಲು ಸಾಧ್ಯವಿಲ್ಲ. ಜನಪ್ರತಿನಿಧಿಗಳ, ದಾನಿಗಳ, ಊರಿನವರ ಸಹಕಾರ ಪಡೆದುಕೊಂಡು ಅಭಿವೃದ್ದಿ ಪಡಿಸಬೇಕು ಎಂದು ಶಾಸಕ ಸುನೀಲ್ ನಾಯ್ಕ ಅಭಿಪ್ರಾಯಿಸಿದರು.
ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡಕಾರದಲ್ಲಿ ಗುರುವಾರÀ ಸಂಪ್ರಭಾ ಗ್ರಾಮೀಣಾಭಿವೃದ್ದಿ ಸಂಸ್ಥೆ ಮೂಡ್ಕಣಿ ಇವರ ಸಹಭಾಗಿತ್ವದಲ್ಲಿ 6 ನೇ ವರ್ಷದ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಪ್ರಭಾ ಗ್ರಾಮೀಣಾಭಿವೃದ್ದಿ ಸಂಸ್ಥೆ ಒಂದು ಜನಪರವಾದ ಕೆಲಸ ಹಮ್ಮಿಕೊಂಡಿದೆ. ಈ ಒಂದು ಸಂಸ್ಥೆ ನಿರಂತರವಾಗಿ ನಡೆಯಲಿ ಎಂದು ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು. ಶಾಸಕನಾದ ಮೇಲೆ ಮೊದಲು ಸಂಕಲ್ಪ ಮಾಡಿಕೊಂಡಿದ್ದು ನನ್ನ ಕ್ಷೇತ್ರದಿಂದ ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವುದಾಗಿದೆ. ಈ ಶಾಲೆಗೆ ಮೂಲಭೂತ ಸೌಕರ್ಯದ ಅವಶ್ಯಕತೆಯನ್ನು ಮುಂದಿನ ದಿನಗಳಲ್ಲಿ ಮಾಡಿಕೊಡುತ್ತೇನೆ ಈಗಾಗಲೆ ಶಾಲಾ ದುರಸ್ತಿಗಾಗಿ 1 ಲಕ್ಷ ಅನುದಾನವನ್ನು ನೀಡಿದ್ದೇನೆ ಶಿಕ್ಷಕರು ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರಯುತ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಶಾಲೆಯ 78 ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಪ್ರಭಾ ಗ್ರಾಮೀಣಾಭಿವೃದ್ದಿ ಸಂಸ್ಥೆ ಹಾಗೂ ಶಾಲಾ ಎಸ.ಡಿ.ಎಮ್.ಸಿ ಶಿಕ್ಷಕ ವೃಂದ ದಿಂದ ಶಾಸಕರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ರಾಜು ನಾಯ್ಕ ದಾನಿಗಳಾದ ವಿನಾಯಕ ನಾಯ್ಕ, ಕೇಶವ ನಾಯ್ಕ ಬಳಕೂರ, ಗಜಾನನ ಹೆಗಡೆ, ಜಯಂತ ನಾಯ್ಕ , ಈರಾ ಹಳ್ಳೇರ, ಮಂಜುನಾಥ ನಾಯ್ಕ ಗೇರಸೊಪ್ಪಾ , ರಮೇಶ ತುಂಬೊಳ್ಳಿ, ದಯಾನಂದ ನಾಯ್ಕ ಇದ್ದರು. ಮುಖ್ಯಧ್ಯಾಪಕರಾದ ಶ್ರೀಧರ ದಿಕ್ಷಿತ ಸ್ವಾಗತಿಸಿದರು.ಜಯಾ ಶ್ಯಾನಭಾಗ ನಿರೂಪಿಸಿದರು.
Leave a Comment