ಹೊನ್ನಾವರ : ತಾಲೂಕಿನ ಮಾವಿನಕುರ್ವಾ ಭಟ್ಟರಕೇರಿಯ ರಾಮಚಂದ್ರ ಕೇಶವ ಭಟ್ (88) ಇವರು ಸೋಮವಾರ ಹೃದಯಾಘಾತದಿಂದ ನಿಧನರಾದರು. ಊರಿನಲ್ಲಿ ಕಿಟ್ಟಿ ಭಟ್ಟರೆಂದೇ ಚಿರಪರಿಚಿತರಾದ ಇವರು ಗ್ರಾಮ ದೇವರಾದ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಹಾಗೂ ನವದುರ್ಗಾ ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ಅರ್ಚಕರಾಗಿ ಸೇವೆ ಸಲ್ಲಿಸಿ, ಹಿರಿಯರಾಗಿ ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು.
ಇವರ ನಿಧನಕ್ಕೆ ದೇವಾಲಯದ ಆಡಳಿತ ಮಂಡಳಿಯ ಸದಸ್ಯರು,ಊರಿನವರು ಕಂಬನಿ ಮಿಡಿದಿದ್ದಾರೆ. ಇವರು ನಾಲ್ವರು ಪುತ್ರರು, ಇರ್ವರು ಪುತ್ರಿಯರನ್ನು ಅಗಲಿದ್ದಾರೆ.
Leave a Comment