ಹೊನ್ನವರದ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಎಸ್ ಡಿ ಎಮ್ ಕಾಲೇಜಿನ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಯಸಸ್ಸು ಗಳಿಸುವ ಬಗ್ಗೆ ಎರಡು ದಿನಗಳ ವಿಸೇಷ ಕಾರ್ಯಗಾರ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಎಸ್ ಡಿ ಎಮ್ ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ಕ್ರಷ್ಣ ಮೂರ್ತಿ ಭಟ್ಟ ಶಿವಾನಿ ಮಾತನಾಡಿ ಸಾಮಾನ್ಯವಾದ ಒಂದು ವಾಹನದ ನಿರ್ವಹಣೆಗೆ ಒಂದು ಮಾದರಿ ಇರುತ್ತದೆ. ಆದರೆ ಮನುಷ್ಯ ಜೀವನ ನಡೆಸಲು ಯಾವುದೇ ಕ್ರಮ ಬದ್ದವಾದ ಮಾರ್ಗ ಇರುವುದಿಲ್ಲಾ.ಇದರಿಂದ ಆತನು ಅನೇಕ ತೊಂದರೆಗೊಳಪಡುತ್ತಾನೆ. ಇ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಯಶಸ್ಸು ಪಡಯಲು ಇಂತಹ ಕಾರ್ಯಗಾರ ಹಮ್ಮಿಕೊಂಡಿದ್ದೇವೆ. ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರ್ಗದರ್ಶನ ನೀಡುತ್ತಿರುವ ಡಬ್ಲ್ಯು ಯು ಸಿ ಮ್ ಸಂಸ್ಥೆಯ ಮಾರ್ಗದರ್ಶನದ ಈ ಕಾರ್ಯಗಾರವು ಉತ್ತಮ ಸಹಕಾರಿಯಾಗಲಿದೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಶ ಸಾಲೇಹಿತ್ತಲ ಮಾತನಾಡಿ ಡಬ್ಲ್ಯು.ವಾಯ್.ಸಿಮ್ ವಿದ್ಯಾರ್ಥಿಗಳಿಗೆ ಹೊಸ ಜೀವನ ನೀಡುವಂತಹ ಅದ್ಬುತವಾದ ಅಂತರಾಷ್ಟ್ರೀಯ ಸಂಸ್ಥೆ. ಕಳೆದ ನಾಲ್ಕೈದು ವರ್ಷಗಳಿಂದ ಪ್ರಯತ್ನಿಸುತ್ತಿದ್ದರು ಇ ವರ್ಷ ಅವಕಾಶ ಒದಗಿ ಬಂದಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿ ಎಸ್ ಡಿ ಎಮ್ ಕಾಲೇಜಿನ ಪ್ರಾಚಾರ್ಯರಾದ ವಿಜಯ ಲಕ್ಷೀ ನಾಯ್ಕರವರು ಮಾತನಾಡಿದರು.
ಕಾರ್ಯಗಾರ ನಡೆಸಿಕೊಟ್ಟ ಡಬ್ಲ್ಯು.ವಾಯ್.ಸಿಮ್ ಸಂಸ್ಥೆಯ ಮಾರ್ಗದರ್ಶಕ ಮನುಜೀಯ ಮಾತನಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಯುವಕರನ್ನು ಯಸಸ್ಸಿನತ್ತ ಕೊಂಡೊಯ್ಯಲು ಕಾರ್ಯನಿರ್ವಹಿಸುವಂತಹ ಸಂಸ್ಥೆ. ಲಕ್ಷಾಂತರ ವಿದ್ರ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದರು.
ಬಿ. ಎ,ಬಿಕಾಂ, ಬಿ ಎಸ್ಸಿ ವಿದ್ರ್ಯಾರ್ಥಿಳು ಕಾರ್ಯಗಾರದಲ್ಲಿ ಭಾಗವಹಿಸಿದ್ದರು. ಅ0ತಿಮದಲ್ಲಿ ಕಾರ್ಯಗಾರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಲಯನ್ಸ್ ಕಾರ್ಯದರ್ಶಿ ಪ್ರೋ ಸುರೇಶ ನಾಯ್ಕ, ಲಯನ್ಸ್ ಖಜಾಂಚಿ ಯೋಗೇಶ ರಾಯ್ಕ ಉಪಸ್ಥಿತರಿದ್ದರು. ವೆಂಕಟೇಶ ಮೇಸ್ತ ಪರಿಚಯಿಸಿದರು. ಪ್ರಸಾಂತ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಹಾಗೂ ಲಾಯನ್ಸ್ ಸದಸ್ಯರು ಈ ಸಭೆಯಲ್ಲಿ ಉಪಸ್ಥಿತರಿದ್ದರು.
Leave a Comment