ಹೊನ್ನಾವರ: ‘ರಕ್ತದಾನದ ಮಹತ್ವ ಮತ್ತು ಏಡ್ಸ್ ನೀಯಂತ್ರಣ’ ಎನ್ನುವ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಕಾಲೇಜಿನ ರೆಡ್ ರಿಬ್ಬನ್ ಘಟಕದ ವತಿಯಿಂದ À ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು
. ಉಪನ್ಯಾಸಕರಾಗಿ ಆಗಮಿಸಿದ ಐ.ಸಿ.ಟಿ.ಸಿ ವಿಭಾಗದ ಆಪ್ತ ಸಮಾಲೋಚಕರಾದ ವಿನಾಯಕ ಪಟಗಾರ್ ಮಾತನಾಡಿ ಭಾರತದಲ್ಲಿ ಇಂದು ಏಡ್ಸ್ ಪ್ರಮಾಣ ಕ್ಷೀಣಿಸಿದರೂ ಪೂರ್ಣ ಪ್ರಮಾಣದಲ್ಲಿ ತೊಡೆದು ಹಾಕಲು ಸಾಧ್ಯವಾಗುತ್ತಿಲ್ಲ, ಇದು ಹೆಚ್ಚಿನ ಪ್ರಮಾಣದಲ್ಲಿ ಯುವಜನರಲ್ಲಿ ಕಂಡುಬರುತ್ತಿದ್ದು, ಅವರಿಗೆ ಸುಸಂಸ್ಕøತ ನಡವಳಿಕೆ ಕಲಿಸುವ ಮತ್ತು ರಚನಾತ್ಮಕ ಕೆಲಸದಲ್ಲಿ ಆಸಕ್ತಿ ಹುಟ್ಟಿಸುವ ಅಗತ್ಯತೆ ಇದೆ ಜೊತೆಗೆ ಇಂದು ಹಲವಾರು ರೋಗಿಗಳಿಗೆ ರಕ್ತದ ತುರ್ತು ಅವಶ್ಯಕತೆ ಇದ್ದು ಸ್ವಪ್ರೇರಣೆಯಿಂದ ರಕ್ತದಾನ ಮಾಡುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಮಂಗಲಾ ಬಿ. ನಾಯಕ್ ಮಾತನಾಡಿ ಏಡ್ಸ್ ಮುಕ್ತ ಭಾರತ ನಿರ್ಮಿಸಲು ವಿದ್ಯಾವಂತರಾದ ನಾವೆಲ್ಲ ಜಾಗೃತರಾಗಿ ಇತರರಿಗೆ ಈ ಕುರಿತಂತೆ ಮಾಹಿತಿ ನೀಡಬೇಕಾಗಿ ಕರೆನಿಡಿದರು. ರೆಡ್ ರಿಬ್ಬನ್ ಘಟಕದ ಸಂಯೋಜನಾಧಿಕಾರಿಗಳಾದ ಪ್ರೊ. ವಿಶ್ವನಾಥ್ ಎಸ್. ನಾಯ್ಕ ಮಾತನಾಡಿ ಏಡ್ಸ್ ನಂತಹ ಮಾರಣಾಂತಿಕ ರೋಗಗಳನ್ನು ತಡೆಗಟ್ಟಲು ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅದನ್ನು ಯಶಸ್ವಿ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಇದು ಪ್ರಜ್ಞವಂತರಾದ ನಮ್ಮೆಲ್ಲರ ಕರ್ತವ್ಯ ಕೂಡ ಎಂದು ಅಭಿಪ್ರಾಯ ಪಟ್ಟರು. ಈ ಕಾರ್ಯಕ್ರಮಕ್ಕೆ ಪೂರಕವಾಗಿ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆ ಮತ್ತು ಬಿತ್ತಿಚಿತ್ರ ರಚನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಪ್ರಶಸ್ತಿ ವಿತರಿಸಲಾಯಿತು. ಸರ್ವರನ್ನು ಕು. ಸುಸ್ಮಿತಾ ಮೇಸ್ತ ಸ್ವಾಗತಿಸಿದರು, ಕು.ಸ್ನೇಹಾ ಆಚಾರಿ ವಂದಿಸಿದರು ಮತ್ತು ಕು.ಅಪೂರ್ವ ಭಾಂದೆಕರ್ ಕಾರ್ಯಕ್ರಮ ನಿರೂಪಿಸಿರು.
Leave a Comment