ಹಳಿಯಾಳ : ಇಂದು ಭಾರತ ದೇಶ ಜಗತ್ತಿನಲ್ಲೇ ಪ್ರಭಾವಿ ರಾಷ್ಟ್ರವಾಗಿ, ಅಭಿವೃದ್ದಿಯಲ್ಲಿ ಮುಂಚುಣಿಯಲ್ಲಿ ಸಾಗುತ್ತಿದೆ. ಆದರೇ ದೇಶಕ್ಕೆ ಮಾರಕವಾಗಿರುವ ಭಯೋತ್ಪಾದನೆಯನ್ನು ತಡೆಯಲು, ಯುವ ಶಕ್ತಿ ದುಶ್ಚಟಗಳಿಂದ ದೂರವಿರಬೇಕು ಹಾಗೂ ಸರ್ವರು ಪರಸ್ಪರರಲ್ಲಿರುವ ದ್ವೇಷ ಭಾವನೆಯನ್ನು ಮರೆತು ಎಲ್ಲರೂ ಒಂದಾಗಿ ದೇಶಕ್ಕಾಗಿ ಏನಾದರೂ ಸಾಧಿಸಿ ತೊರಿಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಕರೆ ನೀಡಿದರು.
ಪಟ್ಟಣದ ಮಿನಿ ವಿಧಾನಸೌಧ, ತಾಲೂಕ ಕಚೇರಿ ಎದುರು ನಡೆದ 72ನೇ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ ವಿದ್ಯಾಧರ ಗುಳಗುಳಿ ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ನೀಡುತ್ತಾ ದೇಶದ ಅಭಿವೃದ್ದಿಗೆ ದೇಶ ರಕ್ಷಣೆಗೆ ಯುವಕರು ಸಜ್ಜಾಗಬೇಕು, ದುಶ್ಚಟಗಳಿಂದ ಯುವಕರು ದೂರವಿರಬೇಕು ಎಂದು ಕರೆ ನೀಡಿದರು.
ಐತಿಹಾಸಿಕ ಕೋಟೆಯ ಮೇಲೆ ಧ್ವಜಾರೋಹಣ:- ತಾಲೂಕಾ ಕಚೇರಿ ಧ್ವಜಾರೋಹಣ ನಂತರ ಪೋಲಿಸ್, ಗೃಹ ರಕ್ಷಕ ದಳ, ಎನ್.ಸಿಸಿ., ಸ್ಕೌಟ್ ಗೈಡ್ಸ್ ,ವಿದ್ಯಾರ್ಥಿಗಳು ಹಾಗೂ ಇತರರು ನಗರದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಿ ಐತಿಹಾಸಿಕ ಶ್ರೀ ಛತ್ರಪತಿ ಶಿವಾಜಿ ಕೊಟೆ ಪ್ರದೇಶಕ್ಕೆ ತೆರಳಿ ದೇಶದ ಅತಿದೊಡ್ಡ ರಾಷ್ಟ್ರಧ್ವಜಗಳಲ್ಲಿ ಒಂದಾದ “ 21 ಅಡಿ ಅಗಲ ಹಾಗೂ 14 ಅಡಿ ಎತ್ತರ” ಅಳತೆಯ ರಾಷ್ಟ್ರಧ್ವಜವನ್ನು ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ ಆರೋಹಣ ಮಾಡಿ ಸ್ವಾತಂತ್ರೋತ್ಸವದ ಸಂದೇಶ ನೀಡಿ ಶುಭಾಶಯ ಕೋರಿದರು.
72ನೇ ಸ್ವಾತಂತ್ರ್ಯ ದಿನೋತ್ಸವವನ್ನು ಹಳಿಯಾಳ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗಗಳಲ್ಲಿ ಸಂಭ್ರಮ-ಸಡಗರದಿಂದ ಆಚರಿಸಲಾಯಿತು. ಪಟ್ಟಣದಲ್ಲಿ ಕಾಂಗ್ರೇಸ್ ಕಚೇರಿ, ಕ್ರೀಡಾಭವನ, ಲಾಯನ್ಸ್ ಕ್ಲಬ್, ಬ್ಯಾಂಕ್ಗಳು, ವಿವಿಧ ಸಂಘ ಸಂಸ್ಥೆಗಳು, ತಾಲೂಕ ಪಂಚಾಯತ, ಪುರಸಭೆ, ಆಸ್ಪತ್ರೆ, ಸಾರ್ವಜನೀಕರು ವಿವಿಧ ಪ್ರದೇಶಗಳಲ್ಲಿ ಧ್ವಜಾರೋಹಣ ನೆರವೆರಿಸಿ ಸ್ವಾತಂತ್ರೋತ್ಸವ ಆಚರಿಸಿದರು.
ಕಾಮುಕನೊರ್ವನನ್ನು ಹಾಗೂ ಅಂತರಾಜ್ಯ ಕಳ್ಳರನ್ನು ಹಿಡಿಯುವಲ್ಲಿ ಪ್ರಾಣದ ಹಂಗು ತೊರೆದು ಹೊರಾಡಿದ ಹಳಿಯಾಳ ಪೋಲಿಸ್ ಠಾಣೆಯ ಮುಖ್ಯಪೇದೆ ಅಶೋಕ ಹುಬ್ಬಳ್ಳಿ ಅವರನ್ನು ಕಾರ್ಯಕ್ರಮದಲ್ಲಿ ಶೌರ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಬಳಿಕ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಗಣ್ಯರಿಂದ ಬಹುಮಾನ ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ, ತಾಲೂಕ ಪಂಚಾಯತ ಅಧ್ಯಕ್ಷೆ ರೀಟಾ ಸಿದ್ದಿ, ಬಿಜೆಪಿ ಮುಖಂಡ ಮಂಗೇಶ ದೇಶಪಾಂಡೆ, ಜೀಜಾಮಾತಾ ಮರಾಠಾ ಮಹಿಳಾ ಸಂಘದ ಅಧ್ಯಕ್ಷೆ ಮಂಗಲಾ ಕಶೀಲಕರ, ಜಿ.ಪಂ ಸದಸ್ಯ ಕೃಷ್ಣಾ ಪಾಟೀಲ್, ಕರ್ನಾಟಕ ರಕ್ಷಣಾ ವೇದಿಕೆ, ಜಯಕರ್ನಾಟಕ ಸಂಘಟನೆ, ತಾಪಂ, ಪುರಸಬೆ ಸದಸ್ಯರು. ತಾಲೂಕಾಡಳಿತದ ಎಲ್ಲ ಅದಿಕಾರಿ, ಸಿಬ್ಬಂದಿಗಳು, ಶೀಕ್ಷಕ ವೃಂದದವರು ಇದ್ದರು.
Leave a Comment