ಗೇರಸೊಪ್ಪಾ: ಗೇರಸೋಪ್ಪಾ-ಹೊನ್ನಾವರ ಮಾರ್ಗವಾಗಿ ಚಲಿಸುವ ಟೆಂಪೋಗಳ ಚಾಲಕ ಹಾಗೂ ಮಾಲಕರ ಸಂಘದ ಕಚೇರಿಯಲ್ಲಿ 72ನೇ ಸ್ವಾಂತ್ರ್ಯೋತ್ಸವ ವಿಜೃಂಭಣೆಯಿಂದ ನಡೆಯಿತು. ಸ್ಥಳೀಯ ಪ್ರೌಢಶಾಲೆಯ ಶಿಕ್ಷಕ ಡಾ.ಸುರೇಶ ತಾಂಡೇಲ್ ಧ್ವಜಾರೋಹಣ ನೆರವೇರಿಸಿದರು. ಜಿಲ್ಲೆಯ ಕರಾವಳಿಯ ಪ್ರದೇಶದಲ್ಲಿ ಪ್ರಪ್ರಥಮವಾಗಿ ಕಚೇರಿ ನಿರ್ಮಿಸಿಕೊಂಡು ಸಂಘದ ಚಟುವಟಿಕೆಯನ್ನು, ಶಿಸ್ತುಬದ್ಧವಾಗಿ ಸಂಘಟಿಸುತ್ತಿರುವ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು. ದೇಶಪ್ರೇಮ ಸಾರುವ ಧ್ವಜಾರೋಹಣ ಕಾರ್ಯಕ್ರಮವನ್ನು ಏರ್ಪಡಿಸಿ ಸಿಹಿ ವಿತರಿಸುತ್ತಿರುವುದನ್ನು ಸ್ಮರಿಸಿಕೊಂಡರು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಶ್ರೀಧರ ನಾಯ್ಕ, ಹಾಗೂ ನಾಗರಾಜ ಮೇಸ್ತ, ಗಣಪತಿ ತಿಮ್ಮಪ್ಪ ನಾಯ್ಕ, ರಾಮಚಂದ್ರ ನಾಯ್ಕ, ಅಂತೋನಿ ಮತ್ತು ದಯಾನಂದ ಮಾದೇವ ನಾಯ್ಕ ಇವರಿಗೆ ದಕ್ಷ ಸೇವೆಗಾಗಿ ಸನ್ಮಾನಿಸಲಾಯಿತು. ಊರನಾಗರಿಕರು, ಶಾಲಾ ವಿದ್ಯಾರ್ಥಿಗಳು, ಸಂಘದ ಅಧ್ಯಕ್ಷ ಶ್ರೀಧರ ನಾಯ್ಕ, ಉಪಾಧ್ಯಕ್ಷ ಮನೋಹರ ನಾಯ್ಕ, ಕಾರ್ಯದರ್ಶಿ ಮಂತು ಲೋಪಿಸ್ ಮತ್ತಿತರ ಎಲ್ಲಾ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Leave a Comment