ಹಳಿಯಾಳ:- 72ನೇ ಸ್ವಾತಂತ್ರೋತ್ಸವ ಅಂಗವಾಗಿ ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆದು. 72 ಯುನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ.
ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆ ನೇತೃತ್ವದಲ್ಲಿ, ಹಳಿಯಾಳ ತಾಲೂಕಾಡಳಿತ, ಶೀಕ್ಷಣ ಇಲಾಖೆ, ಸರ್ಕಾರಿ ಆಸ್ಪತ್ರೆ, ಐಎಮ್ಎ ಬ್ಲಡ್ ಬ್ಯಾಂಕ್ ಶಿರಸಿ, ತಾಲೂಕಾ ವೀರಶೈವ ಮಹಾಸಂಘ, ಲಾಯನ್ಸ್ ಕ್ಲಬ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ಘಟಕದವರ ಸಂಯುಕ್ತಾಶ್ರಯದಲ್ಲಿ ನಡೆದ ಈ ಶಿಬಿರದಲ್ಲಿ ಸಾರ್ವಜನೀಕರು ಹಾಗೂ ರಕ್ಷಣಾ ವೇದಿಕೆಯವರು ರಕ್ತದಾನ ಮಾಡಿದರು.
ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಕಾರ್ಯಕ್ರಮ ಉಧ್ಘಾಟಿಸಿ ರಕ್ತದಾನದ ಮಹತ್ವವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಬಿಇಓ ಸಮೀರಮ್ಮದ ಮುಲ್ಲಾ, ತಾಪಂ ಇಓ ಮಹೇಶ ಕುರಿಯವರ, ತಾಲೂಕಾ ವೈದ್ಯಾಧಿಕಾರಿ ಡಾ.ರಮೇಶ ಕದಂ, ಡಾ.ಗುರುಪ್ರಸಾದ,ದೇಶಪಾಂಡೆ ಆರ್ಸೆಟಿ ನಿರ್ದೇಶಕ ನಿತ್ಯಾನಂದ ವೈದ್ಯ, ರಕ್ಷಣಾ ವೇದಿಕೆಯ ಬಸವರಾಜ ಬೆಂಡಿಗೇರಿಮಠ ಇತರರು ಇದ್ದರು.
Leave a Comment