ಹೊನ್ನಾವರ: ಪ್ರವಾಹದಿಂದ ಸಂತ್ರಸ್ತರಾಗಿರುವ ಕೊಡಗು ಜಿಲ್ಲೆಯ ನಿರಾಶ್ರಿತರಿಗೆ ಇಲ್ಲಿಯ ಎಸ್.ಡಿ.ಎಂ. ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಆರ್ಥಿಕ ನೆರವು ನೀಡಿದ್ದಾರೆ.
ಕಾಲೇಜಿನ ವಿದ್ಯಾರ್ಥಿ ಒಕ್ಕೂಟ ಹಾಗೂ ಎಬಿವಿಪಿ ಘಟಕಗಳ ವತಿಯಿಂದ ಪ್ರವಾಹ ಸಂತ್ರಸ್ತರಿಗಾಗಿ ವಿದ್ಯಾರ್ಥಿಗಳಿಂದ ದೇಣಿಗೆ ರೂಪದಲ್ಲಿಒಟ್ಟೂ ರೂ.27675 ಅನ್ನು ಸಂಗ್ರಹಿಸಲಾಗಿತ್ತು.ಹೀಗೆ ಸಂಗ್ರಹಿಸಲಾದ ಹಣವನ್ನು ಪದವಿ ಕಾಲೇಜಿನ ಪ್ರಾಚಾರ್ಯೆ ಡಾ.ವಿಜಯಲಕ್ಷ್ಮೀ ನಾಯ್ಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್ಎಸ್ಎಸ್) ತಾಲೂಕಾ ಪ್ರಬೋಧನ ಪ್ರಮುಖ ವಿಶ್ವನಾಥ ನಾಯಕ ಹಾಗೂ ತಾಲೂಕಾ ವ್ಯವಸ್ಥಾಪಕ ಪ್ರಮುಖ ರಾಮಚಂದ್ರ ಕಾಮತ ಅವರಿಗೆ ಗುರುವಾರ ಕಾಲೇಜಿನಲ್ಲಿ ಹಸ್ತಾಂತರಿಸಿದರು.
ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಂ.ಎಚ್.ಭಟ್ಟ,ವಿದ್ಯಾರ್ಥಿ ಒಕ್ಕೂಟದ ಕಾರ್ಯದರ್ಶಿಗಳಾದ ನಿಖಿಲೇಶ ವಾಳ್ಕೆ ಹಾಗೂ ಮಂಜುನಾಥ ಸಾಳೆಹಿತ್ತಲ್ ಈ ಸಂದರ್ಭದಲ್ಲಿ ಹಾಜರಿದ್ದರು.
Leave a Comment