ಹೊನ್ನಾವರ: ಹೊನ್ನಾವರ ಸಿವಿಲ್ ಕೋರ್ಟನಲ್ಲಿ ನಡೆದ ಅದಾಲತ್ನಲ್ಲಿ ರಾಜಿ ಮೂಲಕ 6 ಮೋಟಾರ್ ಅಪಘಾತ ವಿಮಾ ಪರಿಹಾರ ಪ್ರಕರಣಗಳು ಇತ್ಯರ್ಥಗೊಂಡು ಒಟ್ಟು ರೂ. 20 ಲಕ್ಷ 40 ಸಾವಿರ ರೂಪಾಯಿ ಪರಿಹಾರ ಹಣ ವಿತರಿಸಲು ತೀರ್ಮಾನಿಸಲಾಯಿತು.
ಯುನೈಟೆಡ್ ಇಂಡಿಯಾ ಜನರಲ್ ಇನ್ಸೂರೆನ್ಸ್ ಕಂಪನಿಯ ಡಿವಿಜನಲ್ ಮೆನೇಜರ್ ಎಲ್.ಎನ್. ಮುರಳೀಧರ, ಅಧಿಕಾರಿಗಳಾದ ಗ್ಲೆನ್ ಫರ್ನಾಂಡಿಸ್, ಉಲ್ಲಾಸ ನಾಯ್ಕ, ವಿಮಾ ಕಂಪನಿಯ ವಕೀಲರಾದ ಎಮ್.ಎಲ್. ನಾಯ್ಕ, ಆರ್.ಎಸ್. ಕಾಮತ್, ಎಸ್.ಎಂ. ಭಾಗ್ವತ್, ಪಿ.ಎಸ್. ಭಟ್ ಉಪಸ್ಥಿತರಿದ್ದರು. ಹಿರಿಯ ನ್ಯಾಯಾಧೀಶ ಎಮ್.ವಿ. ಚೆನ್ನಕೇಶವ ರೆಡ್ಡಿಯವರ ಉಪಸ್ಥಿತಿಯಲ್ಲಿ ರಾಜೀ ಸಂಧಾನ ನಡೆಯಿತು. ಸಂಧಾನಕಾರರಾಗಿ ವಕೀಲರಾದ ಸುರೇಶ ಅಡಿ ಹಾಜರಿದ್ದರು.
Leave a Comment