ಹೊನ್ನಾವರ .ನೀವು ನನ್ನನ್ನು ಆರಿಸಿ ಕಳುಹಿಸಿದ್ದು ನಿಮ್ಮ ಧ್ವನಿಯಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಸೇವೆಯ ಮಾಡಲು ಬಂದವ ವಿನಃ ದರ್ಪ ರಾಜಕಾರಣ, ಲೂಟಿ ಮಾಡುವ, ಜನರ ದಾರಿ ತಪ್ಪಿಸುವ ಕೆಲಸಕ್ಕೆ ಬಂದವ ನಾನಲ್ಲ ಎಂದು ಭಟ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ ಹೇಳಿದರು.
ಹೊನ್ನಾವರ ತಾಲೂಕಿನ ಖರ್ವಾ ಗ್ರಾಮ ಪಂಚಾಂಯತಿ ವ್ಯಾಪ್ತಿಯ 113 ಕುಟುಂಬಗಳಿಗೆ ಉಜ್ವಲ ಯೋಜನೆಯಡಿಯಲ್ಲಿ ಮಂಜೂರಾದ ಗ್ಯಾಸ ವಿತರಣೆ ಕಾರ್ಯಕ್ರಮ ಖರ್ವಾ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಾಸಕ ಸುನಿಲ್ ನಾಯ್ಕ ಮಾತನಾಡಿ, ಪ್ರಧಾನಿ ನರೇಂದ್ರಮೋದಿಯವರು ಉಜ್ವಲ ಯೋಜನೆಯಡಿ ಉಚಿತ ಗ್ಯಾಸ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಆರಂಭಿಸಿದ್ದಾರೆ. ಸಾಕಷ್ಟು ಮಹಿಳೆಯರ ಸಂಕಷ್ಠ ಅರಿತು ಈ ಸೌಲಭ್ಯವನ್ನು ಉಚಿತವಾಗಿ ನೀಡುತ್ತಿದ್ದಾರೆ ಎಂದು ಅನುಸರಿಸಬೇಕಾದ ಸುರಕ್ಷತಾ ಕ್ರಮದ ಕುರಿತು ವಿವರಿಸಿದರು. ಊರಿನ ಮೂಲಭೂತ ಸೌಕರ್ಯಗಳಿಗೆ,ಸಮಸ್ಯೆಗಳಿಗೆ ಒತ್ತುಕೊಡುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. ಪ್ರತಿ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 1 ರಿಂದ ಆಯುಸ್ಮಾನ್ ಭಾರತ್ ಯೋಜನೆ ಹೆಸರಿನಲ್ಲಿ ಬಯೋಮೆಟ್ರಿಕ್ ಕಾರ್ಡ ನೀಡುವ ಕುರಿತು ಹಾಗು ಅದರ ಪ್ರಯೋಜನದ ಕುರಿತು ಸಾರ್ವಜನಿಕರಿಗೆ ಸಂಕ್ಷಿಪ್ತವಾಗಿ ವಿವರಿಸಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ವಿನಂತಿಸಿದರು.
:ಸುನಿಲ್ ನಾಯ್ಕ, ಶಾಸಕ
ನಂತರ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಿಬ್ಬಂದಿಗಳ ವತಿಯಿಂದ ಶಾಸಕ ಸುನಿಲ್ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು
ಬಿಜೆಪಿ ತಾಲೂಕಾ ಅದ್ಯಕ್ಷ ಸುಬ್ರಾಯ್ ನಾಯ್ಕ ಮಾತನಾಡಿ ಕಳೆದ ನಾಲ್ಕು ವರ್ಷಗಳಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಶಾಸಕ ಸುನಿಲ್ ನಾಯ್ಕರವರು ಕೇಂದ್ರ ಸರ್ಕಾರದ ಇಂತಹ ಅನೇಕ ಯೋಜನೆಗಳನ್ನು ಅರ್ಹ ಪಲಾನುಭವಿಗಳಿಗೆ ತಲುಪಿಸಬೇಕೆನ್ನುವ ಉದ್ದೇಶವನ್ನು ಹೊಂದಿದ್ದಾರೆ. ಅದರಲ್ಲಿ ಮುಖ್ಯವಾಗಿ ಮಹಿಳೆಯರ ಸ್ವಾಶ್ತ್ಯ ಕಾಪಾಡುವಲ್ಲಿ ಒಂದು ಉತ್ತಮ ಯೋಜನೆ ಉಜ್ವಲ ಗ್ಯಾಸ್ ಯೋಜನೆಯಾಗಿದೆ ಎಂದರು.
ಬೈಟ್2: ಸುಬ್ರಾಯ್ ನಾಯ್ಕ, ಬಿಜೆಪಿ ತಾಲೂಕಾ ಅದ್ಯಕ್ಷ
ನಂತರ ಅರ್ಹ ಪಲಾನುಭವಿಗಳಿಗೆ ಉಚಿತ ಗ್ಯಾಸ್ ಹಾಗೂ ಪರಿಕರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಾಬ್ಲಾ ನಾಯ್ಕÀು, ಉಪಾಧ್ಯಕ್ಷೆ ಮಾದೇವಿ ಹೆಗಡೆ, ಪಂಚಾಯತ ಅಭಿವೃದ್ದಿ ಅಧಿಕಾರಿ ಉದಯ್ ಖಾರ್ವಿ, ಸದಸ್ಯರಾದ ವೇಂಕಟೆಶ ನಾಯ್ಕ,ರಾಮಾ ಗೌಡ, ಕಾಂತಪ್ಪ ಶಾನ್ಬಾಗ್,ಮೊಹನ್ ಡಾಯಸ್, ನಾಗರಾಜ ಮೇಸ್ತ, ಶಾರದಾ ನಾಯ್ಕ,ನೇತ್ರಾವತಿ ನಾಯ್ಕ, ನಾಗರತ್ನ ಹಳ್ಳೆರ,ಆಶಾ ಗೌಡ ಉಪಸ್ಥಿತರಿದ್ದರು.
Leave a Comment