ಹೊನ್ನಾವರ: ದೇಶದಲ್ಲಿ ಹಿಂದಿನಿಂದಲೂ ಸಮಾಜವನ್ನು ವಿಘಟಿಸುವ ಕಾರ್ಯ ಶಿಕ್ಷಿತರಿಂದಲೇ ನಡೆಯುತ್ತಿದೆ. ಇಂದಿನ ಶಿಕ್ಷಿತ ವಿದ್ಯಾರ್ಥಿಗಳು ಹಣ ಗಳಿಕೆಗೆ ಪ್ರಥಮ ಆದ್ಯತೆ ನೀಡಿ ಅದನ್ನು ಅನುಭವಿಸಲು ಸಮಯವಿಲ್ಲದೇ ತೊಳಲಾಡುತ್ತಿದ್ದಾರೆ ಎಂದು ನಿವೃತ್ತ ಪ್ರಾಚಾರ್ಯ ವಿಶ್ವನಾಥ ಹಂಪಿಹೊಳಿ ಅಭಿಪ್ರಾಯಿಸಿದರು.
ಪಟ್ಟಣದ ಅರ್ಬನ್ ಬ್ಯಾಂಕ್ನ ಎಂ. ಏ. ಕಿಣಿ ಮತ್ತು ಎಲ್. ಕೆ. ಶ್ಯಾನಭಾಗ ಶ್ರೋಫ್ಹಾಲ್ನಲ್ಲಿ À ನಡೆದ 2018ನೇ ಸಾಲಿನ ಪ್ರತಿಭಾ ಪುರಸ್ಕಾರ
ಕಾರ್ಯಕ್ರಮದ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು. 99 ವರ್ಷUಳ ಗ್ರಾಹಕ ಸೇವೆಯೊಂದಿಗೆ ಶತಮಾನೋತ್ಸವದ ಹೊಸ್ತಿಲಲ್ಲಿರುವ ಬ್ಯಾಂಕು ಹೀಗೆ ಇನ್ನೂ ಹೆಚ್ಚಿನ ಪ್ರತಿಭೆಗಳನ್ನು ಪ್ರೋತ್ಸಾಹಿಸಲಿ, ಪ್ರತಿಯೊಬ್ಬರಿಗೆ 3 ಋಣಗಳಿವೆ-ದೇವ ಋಣ, ಋಷಿ ಋಣ, ಪಿತೃ ಋಣ ಇನ್ನೊಂದು ಸಮಾಜದ ಋಣ ಇದೆ ಎಂದರು. ಬ್ಯಾಂಕ್ ಅಂತಹ ಸಮಾಜದ ಋಣವನ್ನು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಮೂಲಕ ತೀರಿಸಲು ಪ್ರಯತ್ನಿಸುತ್ತಿದೆ ಎಂದರು. “ಸಹಕಾರವೇ ಜೀವನ” ಎಂಬ ಧ್ಯೇಯದೊಂದಿಗೆ ಬ್ಯಾಂಕು ಮುನ್ನಡೆಯುತ್ತಿದೆ. ಸಮಾಜದಲ್ಲಿ ಸಹಕಾರವಿದ್ದರೂ ಸಹಯೋಗದ ಅವಶ್ಯಕತೆ ಇದೆ. ಸಹಯೋಗದೊಂದಿಗೆ ಮುನ್ನಡೆಯಬೇಕು ವಿದ್ಯಾರ್ಥಿಗಳು ನಮ್ಮ ಸಂಸ್ಕøತಿಯ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಪ್ರಥಮ ಸ್ಥಾನ ಪಡೆದ ಇಬ್ಬರನ್ನು, ತಾಲೂಕಿನಲ್ಲಿ ಮೊದಲ 3 ಸ್ಥಾನ ಪಡೆದ 3 ವಿದ್ಯಾರ್ಥಿಗಳ ಸಹಿತ ವಿವಿಧ ವರ್ಗಗಳಲ್ಲಿ ಪ್ರಥಮ ಬಂದವರನ್ನು, ಕ್ರೀಡೆ ಮತ್ತು ಕಲಾ ವಿಭಾಗದಲ್ಲಿ ಪಥಮ ಸ್ಥಾನÀ ಪಡೆದವರನ್ನು, ವಿಷೆಶ ಸಾಧನೆ ಮಾಡಿದ ವಿದ್ಯಾರ್ಥಿUಳನ್ನು ಸಾದನೆ ಮಾಡಿ ಸಮಾಜದಲ್ಲಿ ಗುರುತಿಸಿಕೊಂಡವರನ್ನು ಹಾಗೂ ಬ್ಯಾಂಕ್ ಸಿಬ್ಬಂದಿUಳ ಮಕ್ಕಳಿಗೆ ಒಟ್ಟೂ 35 ಪ್ರತಿಭಾವಂತರಿಗೆ ನಗದು ನೀಡಿ ಪ್ರೋತ್ಸಾಹಿಸಲಾಯಿತು. ಸಾಂಸ್ಕøತಿಕ ಕಾಮಿಡಿ ಕ್ಷೇತ್ರದಲ್ಲಿ “ಅದ್ವಿತೀಯ ಪ್ರತಿಬೆ”s ಎನಿಸಿಕೊಂಡ ಜೈದೀಪ ಶ್ರೀರಾಮ ಪ್ರ¨Àುs ಹಾಗೂ ಮೇ 2017 ರಲ್ಲಿ ಎಮ್.ಎಸ್.ಸಿ ಭೌತಶಾ¸øÀ್ತ ಪರೀಕ್ಷೆಂiುÀ ಲ್ಲಿ ಅತೀ ಹೆಚ್ಚು ಅಂಕ ಗಳಿಸಿ 4 ಬಂಗಾರದ ಪದಕಗಳನ್ನು ಪಡೆದ ಸ್ಮಿತಾ ಗಜಾನನ ನಾಯ್ಕ ಇವರನ್ನು ಪುರಸ್ಕರಿಸಿದರು.
ಬ್ಯಾಂಕಿನ ಅಧ್ಯಕ್ಷ ರಾಘವ ಬಾಳೇರಿ ಮಾತನಾಡಿ “ಮಾನವತೆಯ ತತ್ವ”ದ ಬಗ್ಗೆ ಎಲ್ಲರಿಗೂ ಮನದಟ್ಟು ಮಾಡಿದರು. “ಏನಾದರೂ ಆಗು ಮೊದಲು ಮಾನವನಾಗು” ಎಂಬ ಕವಿವಾಣಿಯಂತೇ ಒಬ್ಬ ವ್ಯಕ್ತಿಯು ಎಷ್ಟೆ ಉನ್ನತ ಸ್ಥಾನಕ್ಕೆ ಏರಿದರೂ ಸಹ ಅವನು ಮನುಷ್ಯ ಚಿಂತನವನ್ನು ಹೊಂದಿರಬೇಕು ಎಂದು ಕಿವಿಮಾತು ಹೇಳಿದರು.
ಪಟ್ಟಣದ ಬಾಯ್ಸ್ ಮೊಡೆಲ್ ಸ್ಕೂಲ್ ಮುಖ್ಯಾದ್ಯಾಪಕ ವಿಷ್ಣುಮೂರ್ತಿ ಪುಟ್ಟು ಯಾಜಿಯವರು ಬ್ಯಾಂಕಿನ ಪುರಸ್ಕಾರವನ್ನು ಪ್ರಶಂಸಿಸಿ ಮಾತನಾಡುತ್ತಾ ಬ್ಯಾಂಕಿಂಗ್ ಚೌಕಟ್ಟು ಮೀರಿಯೂ ಸಹ ಸಿಬ್ಬಂದಿಗಳ ಕಾರ್ಯನಿರ್ವಹಣೆ ಶ್ಲಾಘನೀಯ ಎಂದರು. ಸಮಾಜಮುಖಿಯಾಗಿ ಬ್ಯಾಂಕ್ ಪ್ರತಿಭೆಯನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಮಾಡಿದೆ. ಸಹಕಾರ ಹಾಗೂ ಪ್ರೋತ್ಸಾಹವನ್ನು ಬೆಳೆಸುತ್ತಾ ಹೋಗಬೇಕು ಎಂದರು. ಕಾರ್ಯಕ್ರಮದ ಮೊದಲು ಶ್ರೀಕಾಂತ ಪಟಗಾರ, ಹೊಲನಗದ್ದೆ, ಕುಮಟಾ ಮತ್ತು ಸಂಗಡಿಗರಿಂದ ಸಂಗೀತ ಕಾರ್ಯಕ್ರಮವು ಎಲ್ಲ ಸಭಿಕರನ್ನು ಮನೋಲ್ಲಾಸಗೊಳಿಸಿತು. ಬ್ಯಾಂಕಿನ ನಿರ್ದೇಶಕರಾದ ವಸಂತ ಹನುಮಂತ ಕರ್ಕಿಕರರವರು ಅತಿಥಿಗಳನ್ನು ಪರಿಚಯಿಸಿದರು. ಎಸ್.ಟಿ.ಭಟ್ಟ ಬುರ್ಡೆ, ಧನಂಜಯ ಪೈ ಹಾಗೂ ಮಂಜರಿ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ವ್ಯವಸ್ಥಾ¥ಕ ರಾಜೀವ ಶ್ಯಾನಭಾಗ ಆಭಾರ ಮನ್ನಿಸಿದರು.
Leave a Comment