ಹೊನ್ನಾವರ . ಜನತಾ ವಿದ್ಯಾಲಯ ಕಾಸರಕೋಡ ಶಾಲೆಯಲ್ಲಿ ವಿ.ಎಸ್.ಎಸ್ ಸಂಘ, ಕೆಳಗಿನೂರ ಇವರು ಶಾಲೆಯಲ್ಲಿ ಕಲಿಯುತ್ತಿರುವ 118 ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಕೂಲ್ ಬ್ಯಾಗನ್ನು ವಿತರಿಸಿದರು.
ಈ ಕಾರ್ಯಕ್ರಮಕ್ಕೆ ಆಗಮಿಸಿದ ವಿ.ಎಸ್.ಎಸ್. ಸಂಘದ ಅಧ್ಯಕ್ಷರಾದ ಗಣಪಯ್ಯ ಗೌಡರವರು ವಿದ್ಯಾರ್ಥಿಗಳಾದವರು ಉತ್ತಮ ಅಂಕದೊಡನೆ ಉತ್ತೀರ್ಣರಾಗಬೇಕು ಅದೇ ನಮಗೆ ನೀವು ನೀಡುವ ಪ್ರತಿಫಲವಾಗಿದೆ. ಸಮಾಜಕ್ಕೆ ಉತ್ತಮ ಪ್ರಜೆಗಳಾಗಬೇಕಾದ ನೀವು ಉತ್ತಮ ಶಿಕ್ಷಣ ಪಡೆದಲ್ಲಿ ಮಾತ್ರ ಸಾಧ್ಯ. ಅದು ಈ ಶಾಲೆಯಿಂದ ಆಗುತ್ತಿದೆ. ಶಾಲೆಗೆ ಹೆಮ್ಮೆಯನ್ನು ತರಬೇಕು ಎಂದು ಬ್ಯಾಗವಿತರಣೆ ಸಮಾರಂಭದಲ್ಲಿ ಮಾತನಾಡಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ರಾಮಚಂದ್ರ ರಘುವೀರ ಮೇಸ್ತ, ನಿರ್ದೇಶಕರಾದ ಅಣ್ಣಪ್ಪ ನರಸ ಗೌಡ, ಕಾರ್ಯದರ್ಶಿಯಾದ ಅರುಣ ಎನ್. ನಾಯ್ಕ ಹಾಗೂ ಮುಖ್ಯಾಧ್ಯಾಪಕರಾದ ಫಿಲೋಮಿನಾ ರೋಡ್ರಗೀಸ್ ಉಪಸ್ಥಿತರಿದ್ದರು.
Leave a Comment