ಹೊನ್ನಾವರ: ತಾಲೂಕಿನ ಅಗ್ರಹಾರ ಕ್ರಾಸ್ ಸಮೀಪ ಕೇಶವ ದೇವಸ್ಥಾನದ ಎದುರಿಗೆ ಒಸಿ ದಂದೆ ನಡೆಸುತ್ತಿದ್ದ ವೇಳೆ ಪೋಲಿಸರು ದಾಳಿ ನಡೆಸಿದ ಘಟನೆ ನಡೆದಿದೆ.
ಓಸಿ ದಂದೆ ನಡೆಸುತಿದ್ದ ಆರೋಪಿತ ವ್ಯಕ್ತಿ ಸುಬ್ರಾಯ್ ಗೊಯ್ದು ಗೌಡ ಇತನು ಕೇಶವ ದೇವಾಲಯದ ಎದುರಿನ ಸಾರ್ವಜನಿಕ ಸ್ಥಳದಲ್ಲಿ ನಿಂತು 10 ರೂಪಾಯಿಗೆ 800 ರೂಪಾಯಿ ಕೋಡುವುದಾಗಿ ಆಮಿಶವೊಡ್ಡಿ ಒಸಿ,ಮಟ್ಕಾ ಜೂಗಾರಾಟ ನಡೆಸುತ್ತಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಪಿ.ಎಸ್.ಐ ಸಂತೋಷ್ ಕಾಯ್ಕಿಣಿ ನೇತ್ರತ್ವದ ತಂಡ ದಾಳಿ ನಡೆಸಿ ಆರೋಪಿತ ವ್ಯಕ್ತಿಯಿಂದ 1620, ಓಸಿ ಪಟ್ಟಿ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment