ಹಳಿಯಾಳ : ಗ್ರಾಮಾಂತರ ಭಾಗದ ಯುವತಿಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ಪ್ರೇಮ ಸಲ್ಲಾಪ ನಡೆಸಿ ಬಳಿಕ ಆಕೆಯನ್ನು ತೊರೆದು, ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿದ ಆರೋಪಿಗೆ ಹಳಿಯಾಳದ ಜೆಎಮ್ಎಫ್ಸಿ ನ್ಯಾಯಾಲಯವು 5 ಸಾವಿರ ರೂ ದಂಡ ಹಾಗೂ 6 ತಿಂಗಳ ಕಾಲ ಸಾಧಾ ಕಾರಾಗೃಹವಾಸ ಶೀಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ತಾಲೂಕಿನ ಕಲಘಟಗಿ ರಸ್ತೆಯಲ್ಲಿರುವ ಜನಗಾ ಗ್ರಾಮದ ಸಂತೋಷ ಪೀತಾಂಬರ ಬಿರ್ಜೆ ಎನ್ನುವವನೇ ಶಿಕ್ಷೆಗೆ ಗುರಿಯಾದ ಆರೋಪಿಯಾಗಿದ್ದಾನೆ. ಇತ 2010 ರಲ್ಲಿ ತಾಲೂಕಿನ ಮತ್ತೊಂದು ಗ್ರಾಮದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಪ್ರೀತಿಸಿ ನಂಬಿಕೆ ದ್ರೋಹ ಮಾಡಿದ್ದನು. ನ್ಯಾಯಾಲಯದ ಈ ಹಿಂದಿನ ಎಪಿಪಿಯಾದ ಗೀತಾ ಗೋರವರ ಅವರು ಸಾಕ್ಷಿಗಳ ವಿಚಾರಣೆಯನ್ನು ನಡೆಸಿದ್ದರು.
ಪ್ರಸ್ತುತ ಇರುವ ಸರ್ಕಾರಿ ಸಹಾಯಕ ಅಭಿಯೋಜಕ ಅಜಿತ ಜನಗೌಡ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ಹಳಿಯಾಳ ಜೆಎಮ್ಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ಸನದಿ ಆರೋಪ-ಪ್ರತ್ಯಾರೋಪಗಳು, ಸಾಕ್ಷೀಗಳ ವಿಚಾರಣೆ ಆಲಿಸಿ ಅಂತಿಮವಾಗಿ ಆರೋಪಿಗೆ 6 ತಿಂಗಳು ಸಾಧಾ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
Leave a Comment