ಹಳಿಯಾಳ: ಶ್ರೀ ಗಣೇಶೊತ್ಸವದ ಹಬ್ಬದ ಆಚರಣೆಯ ಅಂಗವಾಗಿ ಪಟ್ಟಣ ಹಾಗೂ ಗ್ರಾಮಿಣ ಭಾಗದಲ್ಲಿ ಗುರುವಾರ ಜನರು ಶ್ರೀ ಗಣಪತಿಯ ವಿಗ್ರಹವನ್ನು ಅಲಂಕೃತ ವಾಹನದಲ್ಲಿ ವಾದ್ಯವೃಂದೊಡನೆ ಪಟಾಕ್ಷಿ ಹಾರಿಸುತ್ತ ಗಣಪತಿ ಬಪ್ಪಾ ಮೊರಯಾ ಎಂದು ಘೋಷಣೆ ಕುಗೂತ್ತಾ ಸಂಬ್ರಮಿಸುತ್ತ ತಮ್ಮ ನಿವಾಸದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜೆಯನ್ನು ಭಕ್ತಿ ಭಾವದಿಂದ ನೆರವೇಸಿದರು
ಸಚಿವ ಆರ್.ವಿ.ದೇಶಪಾಂಡೆ ತಮ್ಮ ಕುಟುಂಬದವರೊಡಣೆ ಜನಪ್ರತಿನಿಧಿ, ಕಾರ್ಯಕರ್ತರು ಹಾಗೂ ಸಾರ್ವಜನಿಕರೊಂದಿಗೆ ತಮ್ಮ ನಿವಾಸದಲ್ಲಿ ಪ್ರತಿಷ್ಠಾಪಿಸಲಾಗುವ ಗಣಪತಿಯನ್ನು ಮೆರವಣಿಗೆಯಲ್ಲಿ ತಂದು ಎಲ್ಲರೊಡಣೆ ಪೂಜೆ ಸಲ್ಲಿಸಿದರು. ಶುಕ್ರವಾರ ಪಟ್ಟಣದ ತುಳಜಾಭವಾನಿ ದೇವಸ್ಥಾನದಲ್ಲಿ ಎಲ್ಲರಿಗೂ ಶುಭವಾಗಲಿ ಎಂದು ಸಚಿವ ದೇಶಪಾಂಡೆ ದಂಪತಿಗಳು ಗಣಹೋಮವನ್ನು ನೆರೆವೇರಿಸಿದರು
ಈ ಸಂದರ್ಭದಲ್ಲಿ ಸಚಿವರ ಧರ್ಮಪತ್ನಿ ರಾಧಾಬಾಯಿ ದೇಶಪಾಂಡೆ, ಪುತ್ರರಾದ ಪ್ರಸಾದ ದೇಶಪಾಂಡೆ, ಪ್ರಶಾಂತ ದೇಶಪಾಂಡೆ, ಸೊಸೆಯಂದಿರು, ಮೊಮ್ಮಕ್ಕಳು, ವಿ.ಪ. ಸದಸ್ಯ ಎಸ್.ಎಲ್.ಘೋಟ್ನೆಕರ ಜಿ.ಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯ ಕೃಷ್ಣಾ ಪಾಟೀಲ್ ಬ್ಲಾಕ ಅಧ್ಯಕ್ಷ ಸುಭಾಸ ಕೋರ್ವೆಕರ, ಸಂಜು ಮಿಸಾಳಿ, ಉಮೇಶ ಬೋಳಶೆಟ್ಟಿ ಸತ್ಯಜೀತ್ ಗಿರಿ ಪುರಸಭೆ ಸದಸ್ಯರಾದ ಸುರೇಶ ತಳವಾರ ಅನೀಲ ಚವ್ಹಾಣ, ಶಂಕರ ಬೆಳಗಾಂವಕರ ಮುಂತಾದವರು ಪಾಲ್ಗೊಂಡಿದ್ದರು.
Leave a Comment