ಹಳಿಯಾಳ: ಇಂದಿನ ಯಾಂತ್ರಿಕ ಬದುಕಿನಲ್ಲಿ ಮನಸ್ಸು ಕಲುಷಿತಗೊಂಡು ಅಶಾಂತಿಯಿಂದ ಕೂಡಿದ್ದು ಒತ್ತಡ ಮುಕ್ತ ಜೀವನಕ್ಕಾಗಿ ರಾಜಯೋಗ ಸಹಕಾರಿಯಾಗಿದೆ ಎಂದು ಹಾನಗಲ್ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬಿ.ಕೆ ಶೈಲಾಜಿ ಅಕ್ಕ ಹೇಳಿದರು.
ಪಟ್ಟಣದ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಪುರಸಭೆಯ ನೂತನ ಸದಸ್ಯರಿಗೆ ಹಮ್ಮಿಕೊಂಡ ಈಶ್ವರೀಯ ಸನ್ಮಾನ ಹಾಗೂ ಸ್ನೇಹ ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಳಿಯಾಳ ಪುರಸಭೆಯ ನೂತನ 23 ವಾರ್ಡನ ಚುನಾಯಿತ ಎಲ್ಲಾ ಸದಸ್ಯರಿಗೆ ಈಶ್ವರೀಯ ಸನ್ಮಾನವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಚಿಬ್ಬಲಗೇರಿಯ ಪ್ರೀತಿ ಶಿಂಧೆ ಹಾಗೂ ತಂಡದವರಿಂದ “ಅರಿವು” ಎಂಬ ನಾಟಕ ಹಾಗೂ ದುರ್ಗಾ ನಾಟ್ಯ ಕೇಂದ್ರದಿಂದ ಭರತ ನಾಟ್ಯ ಪ್ರದರ್ಶನಗೊಂಡಿತು.
ಈಶ್ವರೀಯ ವಿದ್ಯಾಲಯದ ಬಿ.ಕೆ ಲಕ್ಷ್ಮೀಅಕ್ಕ, ಶಿಕ್ಷಕ ಸಿದ್ದಪ್ಪ ಬಿರಾದಾರ ಹಾಗೂ ರಾಜಯೋಗಿನಿ ಡಾ: ಬಿ.ಕೆ ಪದ್ಮಕ್ಕ ಕಾರ್ಯಕ್ರಮ ನಿರ್ವಹಿಸಿದರು.
Leave a Comment