• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ತಾಲೂಕ ಕೇಂದ್ರ ಹಳಿಯಾಳ ಪಟ್ಟಣದ ಕಿಲ್ಲಾ ಪ್ರದೇಶದಲ್ಲಿ ಅಶ್ವಾರೂಢ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ; ನಾವು ಜೈಲಿಗೆ ಹೋಗಲು ಸಿದ್ಧ ಸಾರ್ವಜನಿಕರ ಹೇಳಿಕೆ

September 19, 2018 by Yogaraj SK 1 Comment

Killa ,shivaji statue pratistapane

ಹಳಿಯಾಳ:- ಪಟ್ಟಣದ ಯಡೋಗಾ ರಸ್ತೆಯಲ್ಲಿರುವ ಕಿಲ್ಲಾ ಪ್ರದೇಶದ ವೃತ್ತದಲ್ಲಿ ಶ್ರೀ ಛತ್ರಪತಿ ಶೀವಾಜಿ ಮಹಾರಾಜರ ಅಶ್ವಾರೂಢ ಶಿವಾಜಿ ಪುಥ್ಥಳಿಯನ್ನು ಮಂಗಳವಾರ ರಾತ್ರಿ ಪ್ರತಿಷ್ಠಾಪಿಸಲಾಗಿದೆ.
ಕಳೆದ 5-6 ತಿಂಗಳಿನಿಂದ ಮೂರ್ತಿ ಸ್ಥಾಪನೆಗೆ ಅವಕಾಶ ಕೋರಿ ಈ ಭಾಗದ ಜನ ಸಂಬಂಧಪಟ್ಟ ಇಲಾಖೆಗಳೊಂದಿಗೆ ಪತ್ರ ವ್ಯವಹಾರ ನಡೆಸಿದ್ದರು. ಅಲ್ಲದೇ ಮನವಿ ನೀಡಿದ್ದರು ಸ್ಪಂದಿಸದ ಇಲಾಖೆಗಳು ಮೂರ್ತೀ ಪ್ರತಿಷ್ಠಾಪನೆಗೆ ಅವಕಾಶ ನೀರಾಕರಿಸಿದ್ದವು ಎನ್ನಲಾಗಿದೆ. ಆದರೇ ಇದರಲ್ಲಿ ರಾಜಕೀಯ ಬೆರೆತಿದೆ ಎಂದು ಅರಿತ ಆ ಭಾಗದ ನೂರಾರು ಯುವಕರು, ಮಹಿಳೆಯರು ಮಂಗಳವಾರ ರಾತ್ರಿ ಒಮ್ಮೆಲೆ ಸಭೆ ಸೇರಿ ಸುಮಾರು 800 ಕೆಜಿ ಭಾರದ ಮೂರ್ತಿಯನ್ನು ಹೊತ್ತು ಶೀವಾಜಿ ಪಿಠದಲ್ಲಿ ಸ್ಥಾಪಿಸಿಯೇ ಬಿಟ್ಟರು.
ಮೂರ್ತಿ ಸ್ಥಾಪಿಸುವ ಸಂದರ್ಭದಲ್ಲಿ ಇದನ್ನು ತಡೆಯಲು ಮುಂದಾದ ಪೋಲಿಸರೊಂದಿಗೆ ಮಾತಿನ ಚಕಮಕಿ ನಡೆದು ನೂಕಾಟ ತಳ್ಳಾಟವು ನಡೆಯಿತು. ಇದರಿಂದ ಮಹಿಳೆಯರಿಗೆ ಗಾಯಗಳಾಗಿವೆ ಎಂದು ಜನರು ಮಾಧ್ಯಮಗಳ ಮುಂದೆ ಹೇಳಿದರು.
ಮಹಾನ್ ರಾಷ್ಟ್ರಪುರುಷ, ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶೀವಾಜಿ ಮಹಾರಾಜರ ಪುಥ್ಥಳಿ ಸ್ಥಾಪನೆಯನ್ನು ನಾವು ಮಾಡಿದ್ದೇವೆ. ನಮ್ಮ ಆರಾಧ್ಯ ದೈವ ಶಿವಾಜಿ ಮಹಾರಾಜರಾಗಿದ್ದು ಪುಥ್ಥಳಿ ಪ್ರತಿಷ್ಠಾಪನೆ ಸಂಬಂಧಪಟ್ಟಂತೆ ನಮ್ಮ ವಿರುದ್ದ ಯಾವುದೇ ಪ್ರಕರಣ ದಾಖಲಾದರೂ ನಾವು ಅದನ್ನು ಎದುರಿಸಲು ಸಿದ್ದ, ಜೈಲಿಗೆ ಹೋಗಲು ಸಿದ್ದ ಎಂದು ಈ ಭಾಗದ ಜನರು ಒಕ್ಕೋರಲಿನಿಂದ ಮಾಧ್ಯಮದ ಮುಂದೆ ಹೇಳಿದರು.
ಪ್ರಕರಣ ದಾಖಲು :- ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಳಿಯಾಳ ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ ಅವರು ಉಚ್ಚ ನ್ಯಾಯಾಲಯದ ಆದೇಶದಂತೆ ಸರ್ಕಾರಿ ಸ್ಥಳದಲ್ಲಿ ಮೂರ್ತಿ ಸ್ಥಾಪನೆಗೆ ಅವಕಾಶವಿಲ್ಲದಿದ್ದರು. ದೇಸಾಯಿಗಲ್ಲಿ, ಶೆಟ್ಟಿಗಲ್ಲಿ, ಕಿಲ್ಲಾ ಪ್ರದೇಶದ ಸುಮಾರು 300-500 ಜನ ಸಾರ್ವಜನೀಕರು ಹಾಗೂ ಮಹಿಳೆಯರು ಸರ್ಕಾರಿ ಜಾಗೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ಇವರ ಮೇಲೆ ಕ್ರಮ ಕೈಗೊಳ್ಳುವಂತೆ ಹಳಿಯಾಳ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಇನ್ನೂ ಪೋಲಿಸ್ ಇಲಾಖೆಯವರು ಕೂಡ ಪರವಾನಿಗೆ ಇಲ್ಲದೇ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸಂದರ್ಭದಲ್ಲಿ ಇದನ್ನು ತಡೆಯಲು ಹೋದ ಪೋಲಿಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಮಹಿಳೆಯರು ಹಾಗೂ ಸಾರ್ವಜನೀಕರ ಮೇಲೆ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಪೋಲಿಸ್ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.
ಪ್ರಕರಣ ಪೋಲಿಸ್ ಮಹಾನಿರ್ದೇಶಕರ ವರೆಗೂ ಹೋಗಿದ್ದು ಬುಧವಾರ ಎಎಸ್ಪಿ ಬ್ಯಾಕೋಡ, ಡಿವೈಎಸ್ಪಿ ಮೋಹನದಾಸ ಹಳಿಯಾಳಕ್ಕೆ ಭೆಟಿ ನೀಡಿದ್ದು ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂದಿನ ಕ್ರಮಕ್ಕೆ ಆದೇಶಿಸಿದ್ದಾರೆಂದು ಪೋಲಿಸ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ವೇಳೆ ನಡೆದ ಘಟನೆ ಹಾಗೂ ಬಳಿಕ ಬುಧವಾರ ಪ್ರಕರಣ ದಾಖಲಾಗಿರುವ ವಿಷಯ ಹಳಿಯಾಳದಲ್ಲಿ ತೀವೃ ಚರ್ಚೆಗೆ ಗ್ರಾಸವಾಗಿದ್ದು. ಮುನ್ನೆಚ್ಚರಿಕೆ ಕ್ರಮವಾಗಿ ಹಳಿಯಾಳದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ ಏರ್ಪಡಿಸಲಾಗಿದೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: 5-6 ತಿಂಗಳಿನಿಂದ ಮೂರ್ತಿ ಸ್ಥಾಪನೆ, Killa, shivaji statue pratistapane, ಅಶ್ವಾರೂಢ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ, ಕಿಲ್ಲಾ ಪ್ರದೇಶ, ತಾಲೂಕ ಕೇಂದ್ರ ಹಳಿಯಾಳ ಪಟ್ಟಣದ, ನಾವು. ಜೈಲಿಗೆ ಹೋಗಲು ಸಿದ್ಧ, ನೂಕಾಟ ತಳ್ಳಾಟವು, ಪೋಲಿಸರೊಂದಿಗೆ ಮಾತಿನ ಚಕಮಕಿ, ಮಹಿಳೆಯರು, ಮೂರ್ತಿ, ಮೂರ್ತಿ ಸ್ಥಾಪಿಸುವ ಸಂದರ್ಭ, ಯಡೋಗಾ ರಸ್ತೆ, ರಾತ್ರಿ ಒಮ್ಮೆಲೆ ಸಭೆ ಸೇರಿ, ಶೀವಾಜಿ ಪಿಠದಲ್ಲಿ ಸ್ಥಾಪಿಸಿಯೇ ಬಿಟ್ಟರು, ಸರ್ಕಾರಿ ಜಾಗೆಯಲ್ಲಿ ಅತಿಕ್ರಮ ಪ್ರವೇಶ, ಸಾರ್ವಜನಿಕರ ಹೇಳಿಕೆ, ಸಾರ್ವಜನೀಕರು, ಸುಮಾರು 800 ಕೆಜಿ ಭಾರದ, ಹಳಿಯಾಳ ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ, ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶೀವಾಜಿ, ಹೊತ್ತು

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Comments

  1. Manjunath Pawar says

    September 21, 2018 at 9:33 am

    Jai shivaji
    Jai Bhavani
    Ene barli vagat erali

    Reply

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...