• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳ ಕಿಲ್ಲಾ ಪ್ರದೇಶದಲ್ಲಿ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಸಂಬಂಧ ವಿನಾಕಾರಣ ಕೇಸು ದಾಖಲಿಸಿದರೆ ಉಗ್ರ ಹೋರಾಟ ನಡೆಸಲಾಗುವುದು; ಮಾಜಿ ಶಾಸಕ ಸುನೀಲ್ ಹೆಗಡೆ

September 19, 2018 by Yogaraj SK Leave a Comment

watermarked sunil hegde

ಹಳಿಯಾಳ:-ಪಟ್ಟಣದ ಕಿಲ್ಲಾ ಪ್ರದೇಶದಲ್ಲಿ ಶ್ರೀ ಛತ್ರಪತಿ ಶೀವಾಜಿ ಮಹಾರಾಜರ ಅಶ್ವಾರೂಢ ಪುಥ್ಥಳಿ ಸ್ಥಾಪನೆಗೆ ಸಂಬಂಧಪಟ್ಟಂತೆ ಅಲ್ಲಿಯ ಜನರ ವಿರುದ್ದ ತಾಲೂಕಾಡಳಿತ, ಜಿಲ್ಲಾಡಳಿತ ಅಥವಾ ಪೋಲಿಸ್ ಇಲಾಖೆ ಏನಾದರೂ ರುಣಾತ್ಮಕ ಹೆಜ್ಜೆಯಿಟ್ಟು, ಸುಳ್ಳು ಪ್ರಕರಣಗಳನ್ನು ದಾಖಲಿಸಿ ಯಾರನ್ನಾದರೂ ಬಂಧಿಸಿದ್ದೇ ಆದರೇ ಗ್ರಾಮೀಣ ಭಾಗದಿಂದ ಹಿಡಿದು ಈಡಿ ಜಿಲ್ಲೆಯಾದ್ಯಂತ ಊಗ್ರ ಹೋರಾಟ ನಡೆಸಲಾಗುವುದೆಂದು ಬಿಜೆಪಿಯ ಮಾಜಿ ಶಾಸಕ ಹಾಗೂ ಹಿಂದೂ ಮುಖಂಡ ಸುನೀಲ್ ಹೆಗಡೆ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದಲ್ಲಿ ಬುಧವಾರ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಮಂಗಳವಾರ ರಾತ್ರಿ ಪಟ್ಟಣದ ದೇಸಾಯಿಗಲ್ಲಿ ಭಾಗದ ಕಿಲ್ಲಾ ಪ್ರದೇಶದ ವೃತ್ತದಲ್ಲಿ ಅಶ್ವಾರೂಢ ಪುಥ್ಥಳಿ ಸ್ಥಾಪನೆ ಮಾಡುವಾಗ ಪೋಲಿಸರು ಹಾಗೂ ಜನರ ಮಧ್ಯೆ ನಡೆದ ಮಾತಿನ ಚಕಮಕಿ, ನುಕಾಟ-ತಳ್ಳಾಟದ ಕುರಿತು ಮಾತನಾಡಿದರು.
ಹಿಂದೂ ಸಂಸ್ಕøತಿ ಉಳ್ಳ ಭಾರತ ದೇಶದಲ್ಲಿ ಅಪ್ರತಿಮ ವೀರ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರವಿದೆ. ಈ ಮಹಾನ್ ರಾಷ್ಟ್ರಪುರುಷನ ಪುಥ್ಥಳಿ ಸ್ಥಾಪನೆಗೆ ಕಳೆದ 5-6 ತಿಂಗಳ ಹಿಂದೆಯೇ ಅವಕಾಶ ಕೋರಿ ಸಂಬಂಧಪಟ್ಟ ಇಲಾಖೆಗಳೊಂದಿಗೆ ಪತ್ರ ವ್ಯವಹಾರ ನಡೆಸಲಾಗಿದೆ. ಅಲ್ಲದೇ ವೃತ್ತದಲ್ಲಿರುವ ಸಣ್ಣ ಜಾಗೆಯನ್ನು ಮಾರಿಕಾಂಬಾ ಟ್ರಸ್ಟ್ ಕಮೀಟಿಗೆ ನೀಡುವಂತೆಯೂ ಅದಕ್ಕಾಗಿ ಹಣವನ್ನು ಭರಣ ಮಾಡುವುದಾಗಿಯೂ ಕೊರಲಾಗಿತ್ತು. ಅದಾದ ಬಳಿಕ ಶಿವಾಜಿ ಪಿಠ ಸ್ಥಾಪನೆ ಹಾಗೂ ಸುತ್ತಲೂ ಕಂಪೌಂಡ ಗೋಡೆ ಕಟ್ಟಲಾಗಿದೆ ಈ ಎಲ್ಲ ಪ್ರಕ್ರಿಯೇಗಳು ನಡೆಯುವವರೆಗೂ ತಣ್ಣಗಿದ್ದವರು ಏಕಾಏಕಿ ಏಕೆ ಜನರ ಭಾವನೆ ಕೆರಳಿಸುವಂತೆ ಮಾಡಿದ್ದಾರೆಂದು ಪ್ರಶ್ನೀಸಿದರ ಸುನೀಲ್ ಹೆಗಡೆ ಕಳೆದ 4 ತಿಂಗಳ ಹಿಂದೆ ಹಳಿಯಾಳಕ್ಕೆ ಬಂದಿರುವ ಮೂರ್ತಿಯನ್ನು ಸ್ಥಾಪಿಸಲು ಅವಕಾಶ ನೀಡದೆ ಮಹಾನ್ ಪುರುಷನಿಗೆ ಅಗೌರವ ತೊರಿದ್ದಷ್ಠೆ ಅಲ್ಲದೇ ಸಂಬಂಧಪಟ್ಟ ಇಲಾಖೆಗಳವರು ಹಾಗೂ ಕೆಲವು ರಾಜಕೀಯ ಮುಖಂಡರು ಸಂಸ್ಕøತೀಗೆ ಅನ್ಯಾಯ ಮಾಡಿದ್ದಾರೆಂದು ಆರೋಪಿಸಿದರು.
ಇತ್ತೀಚೆಗೆ ನಡೆದ ಪುರಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದವರು ತಮ್ಮ ಅಭ್ಯರ್ಥಿಗೆ ಮತ ಹಾಕಿದರೇ ಮಾತ್ರ ಶಿವಾಜಿ ಪುಥ್ಥಳಿ ಸ್ಥಾಪನೆಗೆ ಅವಕಾಶ ನೀಡುವುದಾಗಿ ಹೇಳಿದ್ದನ್ನು ಸ್ಮರಿಸಿದ ಸುನೀಲ್ ಹೆಗಡೆ ಜನಶಕ್ತಿ ಮುಂದೆ ಏನು ನಡೆಯೊದಿಲ್ಲ ಎನ್ನುವುದನ್ನು ಶೀವಾಜಿ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಕಿಲ್ಲಾ ಪ್ರದೇಶದ ಜನರು ಸಾಬಿತು ಪಡಿಸಿದ್ದಾರೆ.
ಈ ಭಾಗದ ಜನರ ಆರಾಧ್ಯ ದೈವ ಶಿವಾಜಿ ಮಹಾರಾಜರಾಗಿದ್ದು ಈಗ ಮೂರ್ತಿ ಪ್ರತಿಷ್ಠಾಪನೆ ಆಗಿದೆ ಆದರೇ ಜಿಲ್ಲಾಡಳಿತ, ತಾಲೂಕಾಡಳಿತ ಹಾಗೂ ಪೋಲಿಸ್ ಇಲಾಖೆಗಳು ಕಾನೂನು ಕ್ರಮದ ನೆಪದಲ್ಲಿ ಸ್ಥಳೀಯ ಆಡಳಿತಾರೂಢ ರಾಜಕೀಯ ಕೈಗಳ ಪ್ರಲೋಭನೆಯಿಂದ ಏನಾದರೂ ಪ್ರಕರಣವನ್ನು ಗಂಭೀರ ಮಾಡಿ, ಅಮಾಯಕರನ್ನು ಬಂಧಿಸಲು ಮುಂದಾದರೇ ನಾವು ಸುಮ್ಮನೆ ಕೂರುವುದಿಲ್ಲ ಹಾಗೇನಾದರೂ ಆದರೇ ಮುಂದಿನ ದಿನಗಳಲ್ಲಿ ಯಾವ ಶಾಂತಿ ಸಭೆಗೂ ಹಿಂದೂಗಳು ಭಾಗವಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ ಸುನೀಲ್ ಹೆಗಡೆ ಬಿಜೆಪಿ ಪಕ್ಷ ಸಾರ್ವಜನೀಕರ ಪರವಾಗಿದೆ. ಸಾರ್ವಜನೀಕರ ಭಾವನೆಯನ್ನು ಅಧಿಕಾರಿಗಳು ಅರಿಯಬೇಕು ಯಾವುದೇ ಕಾರಣಕ್ಕೂ ದ್ವೇಷ ಭಾವನೆ ಸಾಧಿಸಬಾರದೆಂದು ಕಿವಿ ಮಾತು ಹೇಳಿದರು.
ಸುದ್ದಿಗೊಷ್ಠಿಯಲ್ಲಿ ಮುಖಂಡರಾದ ಅನಿಲ್ ಮುತ್ನಾಳ್, ಶಿವಾಜಿ ನರಸಾನಿ, ವಿಲಾಡ ಯಡವಿ, ಮಂಜುನಾಥ ಪಂಡಿತ, ವಿಜಯ ಬೋಬಾಟಿ, ಚಂದ್ರಕಾಂತ ಕಮ್ಮಾರ, ಉದಯ ಹೂಲಿ, ಸಂತಾನ ಸಾವಂತ, ವಾಸು ಪೂಜಾರಿ, ಸಂತೋಷ ಘಟಕಾಂಬಳೆ, ವಿಎಮ ಪಾಟೀಲ್, ಮಂಜುನಾಥ ಇತರರು ಇದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: ಉಗ್ರ ಹೋರಾಟ ನಡೆಸಲಾಗುವುದು, ಕಿಲ್ಲಾ ಪ್ರದೇಶ, ಛತ್ರಪತಿ ಶೀವಾಜಿ ಮಹಾರಾಜರ ಅಶ್ವಾರೂಢ ಪುಥ್ಥಳಿ, ಜನರ ಮಧ್ಯೆ ನಡೆದ, ನುಕಾಟ-ತಳ್ಳಾಟ, ಮಾಜಿ ಶಾಸಕ ಸುನೀಲ್ ಹೆಗಡೆ, ಮಾತಿನ ಚಕಮಕಿ, ಮಾರಿಕಾಂಬಾ ಟ್ರಸ್ಟ್ ಕಮೀಟಿ, ರುಣಾತ್ಮಕ ಹೆಜ್ಜೆಯಿಟ್ಟು, ವಿನಾಕಾರಣ ಕೇಸು ದಾಖಲಿಸಿದರೆ, ಶಿವಾಜಿ ಮೂರ್ತಿ ಪ್ರತಿಷ್ಠಾಪನೆ, ಸಂಬಂಧ, ಸುಳ್ಳು ಪ್ರಕರಣ, ಸ್ಥಳೀಯ ಆಡಳಿತಾರೂಢ ರಾಜಕೀಯ, ಹಳಿಯಾಳ ಜಿಲ್ಲಾ ಪ್ರದೇಶ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...