ಹಳಿಯಾಳ:-ಪಟ್ಟಣದ ಕಿಲ್ಲಾ ಪ್ರದೇಶದಲ್ಲಿ ಶ್ರೀ ಛತ್ರಪತಿ ಶೀವಾಜಿ ಮಹಾರಾಜರ ಅಶ್ವಾರೂಢ ಪುಥ್ಥಳಿ ಸ್ಥಾಪನೆಗೆ ಸಂಬಂಧಪಟ್ಟಂತೆ ಅಲ್ಲಿಯ ಜನರ ವಿರುದ್ದ ತಾಲೂಕಾಡಳಿತ, ಜಿಲ್ಲಾಡಳಿತ ಅಥವಾ ಪೋಲಿಸ್ ಇಲಾಖೆ ಏನಾದರೂ ರುಣಾತ್ಮಕ ಹೆಜ್ಜೆಯಿಟ್ಟು, ಸುಳ್ಳು ಪ್ರಕರಣಗಳನ್ನು ದಾಖಲಿಸಿ ಯಾರನ್ನಾದರೂ ಬಂಧಿಸಿದ್ದೇ ಆದರೇ ಗ್ರಾಮೀಣ ಭಾಗದಿಂದ ಹಿಡಿದು ಈಡಿ ಜಿಲ್ಲೆಯಾದ್ಯಂತ ಊಗ್ರ ಹೋರಾಟ ನಡೆಸಲಾಗುವುದೆಂದು ಬಿಜೆಪಿಯ ಮಾಜಿ ಶಾಸಕ ಹಾಗೂ ಹಿಂದೂ ಮುಖಂಡ ಸುನೀಲ್ ಹೆಗಡೆ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದಲ್ಲಿ ಬುಧವಾರ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಮಂಗಳವಾರ ರಾತ್ರಿ ಪಟ್ಟಣದ ದೇಸಾಯಿಗಲ್ಲಿ ಭಾಗದ ಕಿಲ್ಲಾ ಪ್ರದೇಶದ ವೃತ್ತದಲ್ಲಿ ಅಶ್ವಾರೂಢ ಪುಥ್ಥಳಿ ಸ್ಥಾಪನೆ ಮಾಡುವಾಗ ಪೋಲಿಸರು ಹಾಗೂ ಜನರ ಮಧ್ಯೆ ನಡೆದ ಮಾತಿನ ಚಕಮಕಿ, ನುಕಾಟ-ತಳ್ಳಾಟದ ಕುರಿತು ಮಾತನಾಡಿದರು.
ಹಿಂದೂ ಸಂಸ್ಕøತಿ ಉಳ್ಳ ಭಾರತ ದೇಶದಲ್ಲಿ ಅಪ್ರತಿಮ ವೀರ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರವಿದೆ. ಈ ಮಹಾನ್ ರಾಷ್ಟ್ರಪುರುಷನ ಪುಥ್ಥಳಿ ಸ್ಥಾಪನೆಗೆ ಕಳೆದ 5-6 ತಿಂಗಳ ಹಿಂದೆಯೇ ಅವಕಾಶ ಕೋರಿ ಸಂಬಂಧಪಟ್ಟ ಇಲಾಖೆಗಳೊಂದಿಗೆ ಪತ್ರ ವ್ಯವಹಾರ ನಡೆಸಲಾಗಿದೆ. ಅಲ್ಲದೇ ವೃತ್ತದಲ್ಲಿರುವ ಸಣ್ಣ ಜಾಗೆಯನ್ನು ಮಾರಿಕಾಂಬಾ ಟ್ರಸ್ಟ್ ಕಮೀಟಿಗೆ ನೀಡುವಂತೆಯೂ ಅದಕ್ಕಾಗಿ ಹಣವನ್ನು ಭರಣ ಮಾಡುವುದಾಗಿಯೂ ಕೊರಲಾಗಿತ್ತು. ಅದಾದ ಬಳಿಕ ಶಿವಾಜಿ ಪಿಠ ಸ್ಥಾಪನೆ ಹಾಗೂ ಸುತ್ತಲೂ ಕಂಪೌಂಡ ಗೋಡೆ ಕಟ್ಟಲಾಗಿದೆ ಈ ಎಲ್ಲ ಪ್ರಕ್ರಿಯೇಗಳು ನಡೆಯುವವರೆಗೂ ತಣ್ಣಗಿದ್ದವರು ಏಕಾಏಕಿ ಏಕೆ ಜನರ ಭಾವನೆ ಕೆರಳಿಸುವಂತೆ ಮಾಡಿದ್ದಾರೆಂದು ಪ್ರಶ್ನೀಸಿದರ ಸುನೀಲ್ ಹೆಗಡೆ ಕಳೆದ 4 ತಿಂಗಳ ಹಿಂದೆ ಹಳಿಯಾಳಕ್ಕೆ ಬಂದಿರುವ ಮೂರ್ತಿಯನ್ನು ಸ್ಥಾಪಿಸಲು ಅವಕಾಶ ನೀಡದೆ ಮಹಾನ್ ಪುರುಷನಿಗೆ ಅಗೌರವ ತೊರಿದ್ದಷ್ಠೆ ಅಲ್ಲದೇ ಸಂಬಂಧಪಟ್ಟ ಇಲಾಖೆಗಳವರು ಹಾಗೂ ಕೆಲವು ರಾಜಕೀಯ ಮುಖಂಡರು ಸಂಸ್ಕøತೀಗೆ ಅನ್ಯಾಯ ಮಾಡಿದ್ದಾರೆಂದು ಆರೋಪಿಸಿದರು.
ಇತ್ತೀಚೆಗೆ ನಡೆದ ಪುರಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದವರು ತಮ್ಮ ಅಭ್ಯರ್ಥಿಗೆ ಮತ ಹಾಕಿದರೇ ಮಾತ್ರ ಶಿವಾಜಿ ಪುಥ್ಥಳಿ ಸ್ಥಾಪನೆಗೆ ಅವಕಾಶ ನೀಡುವುದಾಗಿ ಹೇಳಿದ್ದನ್ನು ಸ್ಮರಿಸಿದ ಸುನೀಲ್ ಹೆಗಡೆ ಜನಶಕ್ತಿ ಮುಂದೆ ಏನು ನಡೆಯೊದಿಲ್ಲ ಎನ್ನುವುದನ್ನು ಶೀವಾಜಿ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಕಿಲ್ಲಾ ಪ್ರದೇಶದ ಜನರು ಸಾಬಿತು ಪಡಿಸಿದ್ದಾರೆ.
ಈ ಭಾಗದ ಜನರ ಆರಾಧ್ಯ ದೈವ ಶಿವಾಜಿ ಮಹಾರಾಜರಾಗಿದ್ದು ಈಗ ಮೂರ್ತಿ ಪ್ರತಿಷ್ಠಾಪನೆ ಆಗಿದೆ ಆದರೇ ಜಿಲ್ಲಾಡಳಿತ, ತಾಲೂಕಾಡಳಿತ ಹಾಗೂ ಪೋಲಿಸ್ ಇಲಾಖೆಗಳು ಕಾನೂನು ಕ್ರಮದ ನೆಪದಲ್ಲಿ ಸ್ಥಳೀಯ ಆಡಳಿತಾರೂಢ ರಾಜಕೀಯ ಕೈಗಳ ಪ್ರಲೋಭನೆಯಿಂದ ಏನಾದರೂ ಪ್ರಕರಣವನ್ನು ಗಂಭೀರ ಮಾಡಿ, ಅಮಾಯಕರನ್ನು ಬಂಧಿಸಲು ಮುಂದಾದರೇ ನಾವು ಸುಮ್ಮನೆ ಕೂರುವುದಿಲ್ಲ ಹಾಗೇನಾದರೂ ಆದರೇ ಮುಂದಿನ ದಿನಗಳಲ್ಲಿ ಯಾವ ಶಾಂತಿ ಸಭೆಗೂ ಹಿಂದೂಗಳು ಭಾಗವಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ ಸುನೀಲ್ ಹೆಗಡೆ ಬಿಜೆಪಿ ಪಕ್ಷ ಸಾರ್ವಜನೀಕರ ಪರವಾಗಿದೆ. ಸಾರ್ವಜನೀಕರ ಭಾವನೆಯನ್ನು ಅಧಿಕಾರಿಗಳು ಅರಿಯಬೇಕು ಯಾವುದೇ ಕಾರಣಕ್ಕೂ ದ್ವೇಷ ಭಾವನೆ ಸಾಧಿಸಬಾರದೆಂದು ಕಿವಿ ಮಾತು ಹೇಳಿದರು.
ಸುದ್ದಿಗೊಷ್ಠಿಯಲ್ಲಿ ಮುಖಂಡರಾದ ಅನಿಲ್ ಮುತ್ನಾಳ್, ಶಿವಾಜಿ ನರಸಾನಿ, ವಿಲಾಡ ಯಡವಿ, ಮಂಜುನಾಥ ಪಂಡಿತ, ವಿಜಯ ಬೋಬಾಟಿ, ಚಂದ್ರಕಾಂತ ಕಮ್ಮಾರ, ಉದಯ ಹೂಲಿ, ಸಂತಾನ ಸಾವಂತ, ವಾಸು ಪೂಜಾರಿ, ಸಂತೋಷ ಘಟಕಾಂಬಳೆ, ವಿಎಮ ಪಾಟೀಲ್, ಮಂಜುನಾಥ ಇತರರು ಇದ್ದರು.
Leave a Comment