ಹೊನ್ನಾವರ: ಇಲ್ಲಿನ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ 2017-18 ನೇ ಸಾಲಿನಲ್ಲಿಯ ಉತ್ತಮ ಕಾರ್ಯಸಾಧನೆಗಾಗಿ ಸತತ 6ನೇ ಬಾರಿಗೆ `ಜಿಲ್ಲಾ ಅತ್ಯುತ್ತಮ ಬ್ಯಾಂಕ್’ ಪ್ರಶಸ್ತಿಗೆ ಭಾಜನವಾಗಿದೆ.
ಬ್ಯಾಂಕ್ನ ಕಾರ್ಯಸಾಧನೆಗಾಗಿ ಹೊನ್ನಾವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ನ್ನು ಜಿಲ್ಲೆಯ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ಗಳ ಪೈಕಿ ಅತ್ಯುತ್ತಮ ಬ್ಯಾಂಕ್ ಎಂದು ಗುರುತಿಸಿ ಸಿರಸಿಯ ಕೆಡಿಸಿಸಿ ಬ್ಯಾಂಕ್ ಪ್ರಶಸ್ತಿ ಪತ್ರದೊಂದಿಗೆ ಬಹುಮಾನ ನೀಡಿ ಗೌರವಿಸಿದೆ. ಬ್ಯಾಂಕಿನ ಸದೃಢ ಹಾಗೂ ಗುಣಮಟ್ಟದ ಆರ್ಥಿಕ ಮಾನದಂಡಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದ್ದು, ಶಿರಸಿಯ ಸುಂದರರಾವ್ ಪಂಡಿತ ಸ್ಮಾರಕ ಸಭಾಭವನದಲ್ಲಿ ಗುರುವಾರ ನಡೆದ ಕೆಡಿಸಿಸಿ ಬ್ಯಾಂಕಿನ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ಹೊನ್ನಾವರ ಅರ್ಬನ್ ಬ್ಯಾಂಕಿನ ಹಿರಿಯ ನಿರ್ದೇಶಕ ವಸಂತ ಹನುಮಂತ ಕರ್ಕಿಕರ ಹಾಗೂ ಪ್ರಧಾನ ವ್ಯವಸ್ಥಾಪಕ ರಾಜೀವ ಗೋವಿಂದ ಶ್ಯಾನಭಾಗ ಇವರು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ಸ್ವೀಕರಿಸಿದರು. ಪ್ರಶಸ್ತಿಯು ಬ್ಯಾಂಕಿನ ಗುಣಮಟ್ಟ ಹಾಗೂ ಕಾರ್ಯಸಾಧನೆಗೆ ಸಂದ ಗೌರವವಾಗಿದ್ದು, ಈ ಎಲ್ಲ ಸಾಧನೆಗಳಿಗೆ ನಿರ್ದೇಶಕ ಮಂಡಲದ ಸಮಯೋಚಿತ ನಿರ್ಧಾರಗಳು, ಸಿಬ್ಬಂದಿಗಳ ಪರಿಶ್ರಮ, ಶೇರುದಾರರ ಹಾಗೂ ಗ್ರಾಹಕರ ಸಹಕಾರವೇ ಕಾರಣವಾಗಿದೆ ಎಂದು ಬ್ಯಾಂಕ್ನ ಅಧ್ಯಕ್ಷ ರಾಘವ ಬಾಳೇರಿ ಹಾಗೂ ಸಿಬ್ಬಂದಿ ವರ್ಗದವರು ಪ್ರತಿಕ್ರಿಯಿಸಿದ್ದಾರೆ.
Leave a Comment