ಹಳಿಯಾಳ:- ಮುಂದಿನ 15 ದಿನಗಳ ಒಳಗೆ ಹಳಿಯಾಳ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಇತ್ಯರ್ಥ ಪಡಿಸುವುದಾಗಿ ಬೆಂಗಳೂರಿನಲ್ಲಿ ಸಕ್ಕರೆ ಆಯುಕ್ತರು ಭರವಸೆ ನೀಡಿದ್ದಾರೆಂದು ಹಳಿಯಾಳ ಕಬ್ಬು ಬೆಳೆಗಾರರ ಸಂಘದವರು ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಶಂಕರ ಕಾಜಗಾರ ದಿ.18ರಂದು ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಬ್ಬು ಬೆಳೆಗಾರ ಸಂಘದವರು ಹಳಿಯಾಳ ಸಕ್ಕರೆ ಕಾರ್ಖಾನೆಯವರು ತಮಗೆ ಕಬ್ಬು ಪೂರೈಸಿದ ರೈತರಿಗೆ ನೀಡುವುದಾಗಿ ಹೇಳಿದ ಬಾಕಿ ಹಣ ಪ್ರತಿ ಟನ್ಗೆ 350ರೂ ಈವರೆಗೂ ನೀಡದೆ ರೈತರಿಗೆ ಮೊಸ ಮಾಡಿದ್ದು ತಿಂಗಳು ಗಟ್ಟಲೇ ಮಳೆ,ಗಾಳಿ, ಬಿಸಿಲನ್ನು ಲೆಕ್ಕಿಸದೆ ಕಾರ್ಖಾನೆ ಎದುರು ಧರಣಿ ಸತ್ಯಾಗ್ರಹ ನಡೆಸಿ ಒಂದು ದಿನ ಹಳಿಯಾಳ ಬಂದ್ ಮಾಡಿ ಪ್ರತಿಭಟಿಸಿದ್ದರು ರೈತರಿಗೆ ನ್ಯಾಯ ದೊರೆತಿಲ್ಲ ಎಂದು ಆಯುಕ್ತರ ಬಳಿ ತಿಳಿಸಲಾಗಿದೆ ಎಂದರು.
ಈ ಕುರಿತು ಮಾಹಿತಿ ಪಡೆದ ಆಯುಕ್ತರು ಮುಂದಿನ 15 ದಿನಗಳಲ್ಲಿ ಕಾರ್ಖಾನೆಯವರೊಂದಿಗೆ ಚರ್ಚಿಸಿ ರೈತರಿಗೆ ನ್ಯಾಯ ಒದಗಿಸುವ ಭರವಸೆ ನಿಡಿದ್ದಾರೆಂದು ಕಾಜಗಾರ ಹೇಳಿದರು.
ಸುದ್ದಿಗೊಷ್ಠಿಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಎಂವಿ ಘಾಡಿ, ಕಾರ್ಯದರ್ಶಿ ಅಶೋಕ ಮೇಟಿ, ಮುಖಂಡರಾದ ಯುಕೆ ಬೋಬಾಟಿ, ಎಸ್.ಕೆ.ಗೌಡಾ, ಜೀವಪ್ಪಾ ಭಂಡಾರಿ, ಜಯರಾಮ, ಮಂಜುನಾಥ ಇದ್ದರು.
Leave a Comment