ಹೊನ್ನಾವರ: ಕನಾ೯ಟಕ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಸಂಶೋಧನಾ ಅಭ್ಯಥಿ೯ಯಾದ ಡಿಂಪಲ್ ಜಗನ್ನಾಥ ಮೇಸ್ತ BA LLB(Hon), LLM, PhD ರವರು ಡಾ. ಆಯ್.ಶರತ್ ಬಾಬು ಮಾರ್ಗದರ್ಶದಲ್ಲಿ ಸಾದರಪಡಿಸಿದ “ಎ ಕ್ರಿಟಿಕಲ್ ಸ್ಟಡಿ ಇನ್ ಟು ದಿ ಆಸ್ಪೆಕ್ಟ್ಸ್ ಆಫ್ ರೈಟ್ ಟು ಲೈವ್ಲಿಹುಡ್ ಆಂಡ್ ಸೋಶಿಯಲ್ ವೆಲ್ಫೆರ್ ಪ್ರೊಟೆಕ್ಷನ್ ಫಾರ್ ದಿ ಫಾರೆಸ್ಟ್ ಪ್ರೊಡಕ್ಟ್ ಕಲೆಕ್ಷನ್ ವರ್ಕರ್ಸ್ – ಎ ಕೇಸ್ ಸ್ಟಡಿ ಇನ್ ಕೆನರಾ ಫಾರೆಸ್ಟ್ ರಿಜನ್, ಕನಾ೯ಟಕ” ಮಹಾಪ್ರಬಂಧಕ್ಕೆ ವಿಶ್ವವಿದ್ಯಾಲಯವು ಪಿ.ಎಚ್.ಡಿ ಪದವಿ ಫೋಷಿಸಿದೆ.
ಹೊನ್ನಾವರದ ನಗರದ ಬಾಂದೆಹಳ್ಳದ ಸಾಗರಾ-ಮನಾಥ ಮನೆಯ ದಿ. ಜಗನ್ನಾಥ ಮಂಜುನಾಥ ಮೇಸ್ತ ಹಾಗೂ ದಿ. ರಮಾಬಾಯಿ ಯವರ ಪುತ್ರಿ ಯಾಗಿದ್ದಾರೆ.
ಡಿಂಪಲ್ ಮೇಸ್ತಾರವರು ತಮ್ಮ ಪ್ರಾಥಮಿಕ ವಿಧ್ಯಾಭ್ಯಾಸ ವನ್ನು ನಗರದ ನೇಮೀ ಕನ್ನಡ ಶಾಲೆ, ಫೌಡ ಶಾಲಾ ಶಿಕ್ಷಣವನ್ನು ಸೇಂಟ್ ಥಾಮಸ್ ಹೈಸ್ಕೂಲ್ ಮತ್ತು ಪಿಯುಸಿ ಯನ್ನು ಎಸ್.ಡಿ.ಎಮ್ ಕಾಲೇಜಿನಲ್ಲಿ ಮುಗಿಸಿ, ಕನಾ೯ಟಕ ವಿಶ್ವವಿದ್ಯಾಲಯದ ಕಾನೂನು ಕಾಲೇಜಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಹೊಂದಿರುತ್ತಾರೆ.
Leave a Comment