ಹಳಿಯಾಳ :- ಹುಬ್ಬಳ್ಳಿಯ ಖ್ಯಾತ ದಿನಪತ್ರಿಕೆ ‘ ಸಂಯುಕ್ತ ಕರ್ನಾಟಕ’ ಪತ್ರಿಕೆಗೆ ಕಳೆದ 14 ವರ್ಷಗಳಿಂದ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹಳಿಯಾಳದ ಅರುಣಕುಮಾರ ಕಾಶೀನಾಥ ನಾಯ್ಕ (51) ಇಹಲೋಕ ತ್ಯಜಿಸಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಧಾರವಾಡದ ಎಸ್.ಡಿ.ಎಮ್.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ನಿಧನ ಹೊಂದಿದ್ದಾರೆ.
ಹಳಿಯಾಳದ ಹಿರಿಯ ಪತ್ರಕರ್ತರಾಗಿದ್ದ ಅರುಣ ತಮ್ಮ ಹಾಸ್ಯ ಪ್ರವೃತ್ತಿಗಾಗಿ ಖ್ಯಾತರಾಗಿದ್ದರು. ಎಲ್ಲರನ್ನು ನಗಿಸುತ್ತಾ ಇರುತ್ತಿದ್ದ ಅರುಣ ವೃದ್ಧ ತಾಯಿ, 2 ವಿವಾಹಿತ ತಂಗಿಯಂದಿರು ಹಾಗೂ ಒಬ್ಬ ತಮ್ಮ ಮತ್ತು ಅಪಾರ ಬಂಧು ಬಳಗ ಅಗಲಿದ್ದಾರೆ. ಅವರ ಅಕಾಲಿಕ ನಿಧನಕ್ಕಾಗಿ ಸಚಿವ ಆರ್.ವಿ ದೇಶಪಾಂಡೆ, ಎಮ್.ಎಲ್.ಸಿ ಎಸ್.ಎಲ್ ಘೋಟ್ನೇಕರ, ಮಾಜಿ ಶಾಸಕ ಸುನಿಲ ಹೆಗಡೆ, ಮಾಜಿ ಎಮ್.ಎಲ್.ಸಿ ವಿಡಿ. ಹೆಗಡೆ, ಬ್ಲಾಕ ಕಾಂಗ್ರೆಸ್ ಅದ್ಯಕ್ಷ ಸುಭಾಷ ಕೊರ್ವೆಕರ, ಬಿಜೆಪಿ ಮುಖಂಡ ಮಂಗೇಶ ದೇಶಪಾಂಡೆ, ಹಿಂದೂ ಮುಖಂಡ ರಾಜು ಧೂಳಿ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಶಿಕ್ಷಕರ ಸಂಘದವರು, ವರ್ತಕರು, ಹೋಟೆಲ್ ಸಂಘದವರು, ಅಧಿಕಾರಿ ವರ್ಗದವರು, ಪುರಸಭೆ ಸದಸ್ಯರು, ಹಳಿಯಾಳ ಪತ್ರಕರ್ತರ ಸಂಘದ ಸದಸ್ಯರು ಕಂಬನಿ ಮಿಡಿದಿದ್ದು ಸಂತಾಪ ಸೂಚಿಸಿದ್ದಾರೆ.
Leave a Comment