ಹಳಿಯಾಳ:- ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದ ಕಿಲ್ಲಾ ಪ್ರದೇಶದ ವೃತ್ತದಲ್ಲಿ ಸಾರ್ವಜನೀಕರಿಂದ ಶೀವಾಜಿ ಮೂರ್ತಿ ಪ್ರತಿಷ್ಠಾಪಿಸಿದ ಪ್ರಕರಣದಲ್ಲಿ ಹಳಿಯಾಳದ ಪುರಸಭೆ, ಕಂದಾಯ ಇಲಾಖೆಯವರ ತಪ್ಪಿದ್ದು ಅದನ್ನು ಮರೆಮಾಚಲು ಇಂದು ಅಮಾಯಕರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಗಂಭಿರ ಆರೋಪ ಮಾಡಿದರು.
ಪಟ್ಟಣದಲ್ಲಿ ಸೋಮವಾರ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಹಿಂದವಿ ಸ್ವರಾಜ್ಯ ಸಂಸ್ಥಾಪಕ, ರಾಷ್ಟ್ರಪುರುಷನ ಮೂರ್ತಿ ಪ್ರತಿಷ್ಠಾಪನೆ ಭಾವನಾತ್ಮಕ ವಿಷಯವಾಗಿದ್ದು ಅದನ್ನು ಇಂದು ದೊಡ್ಡ ಅಪರಾಧವೆಂಬಂತೆ ಬಿಂಬಿಸಲಾಗುತ್ತಿರುವುದು ದುರ್ದೈವದ ಸಂಗತಿಯಾಗಿದೆ ಅಲ್ಲದೇ ಶಿವಾಜಿ ಮೂರ್ತಿಯನ್ನು ಹಿಂದೂಸ್ಥಾನದಲ್ಲಿ ಅಲ್ಲದೇ ಪಾಕಿಸ್ತಾನದಲ್ಲಿ ಪ್ರತಿಷ್ಠಾಪಿಸಬೇಕಿತ್ತೆ ನಾವು ಪಾಕಿಸ್ತಾನದಲ್ಲಿ ಇದ್ದೇವೆಯೇ ಎಂದು ಪ್ರಶ್ನೀಸಿದರು.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಶಿವಾಜಿ ಮೂರ್ತಿ ತರಲು ಸಚಿವ ಆರ್.ವಿ.ದೇಶಪಾಂಡೆ, ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಅವರನ್ನು ಆ ಭಾಗದ ಜನರು ಕೇಳಿದಾಗ ಸಮ್ಮತಿ ಸೂಚಿಸಿದ್ದ ಅವರು ಹಾಗೂ ಆ ಸಂದರ್ಭದಲ್ಲಿ ಪುರಸಭೆಯವರು ಅಲ್ಲಿ ಮೂರ್ತಿ ಪ್ರತಿಷ್ಠಾಪನೆಯ ಪಿಠ, ಕಟ್ಟೆ, ಕಂಪೌಂಡ ಗೋಡೆ ನಿರ್ಮಿಸಲು ಪರವಾನಿಗೆ ನೀಡಿದ್ದೇ ಇಂದು ಈ ಎಲ್ಲ ಘಟನೆಗೆ ಕಾರಣವಾಗಿದ್ದು ಅಮಾಯಕ ಹಿಂದೂಗಳು, ಮರಾಠರನ್ನು ಪ್ರಕರಣದಲ್ಲಿ ಸಿಲುಕಿಸಿ ಅಲೆದಾಡುವ ಪರಿಸ್ಥಿತಿ ನಿರ್ಮಾಣ ಮಾಡಿರುವುದು ದುರ್ದೈವದ ಸಂಗತಿ ಎಂದರು.
ಹಳಿಯಾಳದಲ್ಲಿ ಬಹುತೇಕ ಎಲ್ಲ ಇಲಾಖೆಯವರು ಕಾಂಗ್ರೇಸ್ ಪಕ್ಷದ ಕೈಗೊಂಬೆಯಂತೆ ಏಕಪಕ್ಷೀಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಅಲ್ಲದೇ ಅಮಾಯಕ ಹಿಂದೂ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರ ಮೇಲೆ ವಿನಾಃಕಾರಣ ಕೋಮು ಗಲಭೆ ಪ್ರಚೋದನೆ ಇತ್ಯಾದಿ ಸುಳ್ಳು ಪ್ರಕರಣಗಳನ್ನು ಹಾಕಿ ಅವರ ಮನೋಸ್ಥೈರ್ಯ ಕುಗ್ಗಿಸುವ ಪ್ರಯತ್ನ ನಡೆದಿರುವುದು ಖಂಡನೀಯ ಎಂದರು.
ಹಳಿಯಾಳದ ಧಾರವಾಡ ರಸ್ತೆಯಲ್ಲಿ ಮರಾಠಾ ಸಮಾಜಕ್ಕೆ ಸೇರಿದ ಭೂಮಿಯನ್ನು ಪ್ರಭಾವಿ ಮರಾಠಾ ಮುಖಂಡ ಅತಿಕ್ರಮಣ ಮಾಡಿದ್ದಾರೆ. ಪಟ್ಟಣದಲ್ಲಿ ಕೆಲವೆಡೆ ಎನ್.ಎ. ಆಗದ ಭೂಮಿಯಲ್ಲಿ ಅನ್ಯ ಧರ್ಮಿಯರ ಪ್ರಾರ್ಥನಾ ಮಂದಿರ ಕಟ್ಟಿಕೊಂಡಿದ್ದರು ಈವರೆಗೆ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ ಅಲ್ಲದೇ ಪಟ್ಟಣದ ಬಸ್ ನಿಲ್ದಾಣದ ಎದುರು ಗಟಾರನ್ನು ಅತಿಕ್ರಮಿಸಿಕೊಂಡು ರಸ್ತೆಗೆ ತಾಗಿ ಸರ್ಕಾರದ ಎಲ್ಲ ನಿಯಮಾವಳಿಗಳನ್ನು ಗಾಳಿಗೆ ತೂರಿ ಪುರಸಭೆಯವರೇ 14 ಅಂಗಡಿಗಳನ್ನು ನಿರ್ಮಿಸುತ್ತಿರುವುದು ಇವರಿಗೆ ಯಾವುದೇ ಕಾನೂನು ಅನ್ವಯವಾಗುವುದಿಲ್ಲವೇ ಕೇವಲ ಹಿಂದೂಗಳಿಗೆ ಮಾತ್ರ ಕಾನೂನು ಅನ್ವಯವಾಗುತ್ತದೆಯೇ ? ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಇಷ್ಟು ದೊಡ್ಡ ಅಪರಾಧವೇ ಎಂದು ಪ್ರಶ್ನೇಗಳ ಹಾಗೂ ಆರೋಪಗಳ ಸುರಿಮಳೆಗೈದ ಸುನೀಲ್ ಹೆಗಡೆ ಜಾತ್ಯಾತಿತತೇಯ ಸೋಗು ಹಾಕಿರುವ ಕಾಂಗ್ರೇಸ್ಸಿಗರ ಮಾತು ಕೇಳಿ ಹಿಂದೂಗಳ ಮೇಲೆ ಅಧಿಕಾರಿಗಳು ನಡೆಸುತ್ತಿರುವ ದಬ್ಬಾಳಿಕೆಯ ವಿರುದ್ದ ಜನಶಕ್ತಿ ಒಂದಾಗಲಿದೆ ಎಂದರು.
ಈಗಾಗಲೇ ಮೂರ್ತಿ ಪ್ರತಿಷ್ಠಾಪನೆ ವಿಚಾರದಲ್ಲಿ ಪುರಸಭೆ ಅಧಿಕಾರಿ, ಸಿಪಿಐ ಅವರು ಪ್ರತ್ಯೇಕ 2 ಪ್ರಕರಣ ದಾಖಲಿಸಿ 25,11 ಜನರ ಮೇಲೆ ಹಾಗೂ ತಹಶೀಲ್ದಾರ್ ಅವರು 107-108 ಕಲಂನಡಿ 25 ಜನರ ಮೇಲೆ ಅಲ್ಲದೇ ಅಸಿಸ್ಟಂಟ್ ಕಮೀಷನರ್ ಬಳಿ ತಮ್ಮನ್ನು ಸೇರಿಸಿ ಬಿಜೆಪಿಯ 6 ಜನರ ಮೇಲೆ ಕೋಮು ಪ್ರಚೋದನೆ ಸಂದಂಧಿಸಿ ಪ್ರಕರಣ ದಾಖಲಿಸಿದ್ದನ್ನು ವಿವರಿಸಿದ ಹೆಗಡೆ ನಮ್ಮ ಮೇಲೆ ಬೇಕಾದಷ್ಟು ಕೇಸು ಹಾಕಿ ಜೈಲಿಗೆ ಅಟ್ಟಿ ಆದರೇ ರಾಷ್ಟ್ರ, ಧರ್ಮದ ವಿಚಾರದಲ್ಲಿ ನಾವು ಎಲ್ಲದ್ದಕ್ಕೂ ಸಿದ್ದವಾಗಿದ್ದೇವೆ ಎಂದರು.
ಪ್ರಕರಣದಲ್ಲಿ ಸ್ಥಳದಲ್ಲಿ ಇರದವರ ಮೇಲೆ , ಪಾಶ್ರ್ವವಾಯು ಪಿಡಿತರ ಹಾಗೂ ಬಾಣಂತಿಯ ಮೇಲೆ ಪ್ರಕರಣ ದಾಖಲಿಸಿರುವ ಆಡಳಿತಾರೂಢ ಕಾಂಗ್ರೆಸ್ಸಿಗರ ಕೈಗೊಂಬೆಯಂತೆ ವರ್ತಿಸುತ್ತಿರುವ ಸ್ಥಳೀಯ ಅಧಿಕಾರಿಗಳು ದಿನಗಳು ಹೀಗೆ ಇರುತ್ತದೆ ಎಂದು ಅಂದುಕೊಳ್ಳಬೇಡಿ ನಿಷ್ಪಕ್ಷಪಾತವಾಗಿ ಸರ್ಕಾರದ ಕೆಲಸ ನಿರ್ವಹಿಸಿ ಎಂದು ಎಚ್ಚರಿಕೆ ನೀಡಿದರು ಹಾಗೂ ಪ್ರಕರಣದ ತನಿಖೆಯನ್ನು ಬೆರೆ ಅಧಿಕಾರಿಗಳಿಗೆ ನೀಡುವಂತೆ ಆಗ್ರಹಿಸಿದರು.
ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ ವಿಷಯ ಮತ್ತು ಆ ಭೂಮಿಯ ಸಮಸ್ಯೆಯನ್ನು ಬಗೆಹರಿಸಿ ಪ್ರಕರಣಗಳನ್ನು ಹಿಂಪಡೆದು ಪ್ರಕರಣದ ಸುಖಾಂತ್ಯಕ್ಕೆ ಮುಂದಾಗಿ ಇಲ್ಲವೇ ಮುಂದಿನ ದಿನಗಳಲ್ಲಿ ಈ ವಿಷಯ ಮಾರಕವಾಗಿ ಪರಿಣಮಿಸಲಿದೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ಸುದ್ದಿಗೊಷ್ಠಿಯಲ್ಲಿ ಮುಖಂಡರಾದ ಸಂತೋಷ ಘಟಕಾಂಬಳೆ, ವಿಜಯ ಬೋಬಾಟಿ, ಅನಿಲ ಮುತ್ನಾಳ್, ಚಂದ್ರು ಕಮ್ಮಾರ, ಉದಯ ಹೂಲಿ, ಅಜೋಬಾ ಕರಂಜೆಕರ, ವಿಲಾಸ ಯಡವಿ, ಶಿವಾಜಿ ನರಸಾನಿ, ಬಾಬಿ ತೊರ್ಲೆಕರ, ವಾಸು ಪೂಜಾರಿ ಇತರರು ಇದ್ದರು.
Leave a Comment