ಹೊನ್ನಾವರ :
ಸ್ವಾರ್ಥಕ್ಕಾಗಿ ಜಗತ್ತಿನಾದ್ಯಂತ ಇಂದು ಅಶಾಂತಿ, ಹಿಂಸೆ ತಾಂಡವಾಡುತ್ತಿದ್ದು, ನಾಡಿನ ಯುವಕರಿಗೆ ಗಾಂಧೀಜಿಯ ಬದುಕು ಸ್ಪೂರ್ತಿಯಾಗಬೇಕಾಗಿದೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಹೇಳಿದರು. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಏರ್ಪಡಿಸಿದ 150ನೇ ಗಾಂಧಿಜಯಂತಿಯ ಆಚರಣೆಯ ಸಂದರ್ಭದಲ್ಲಿ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಗಾಂಧೀಜಿ ತಮ್ಮ ಬದುಕಿನುದ್ದಕ್ಕೂ ಮೈಮೇಲೆ ಬಟ್ಟೆ ಇಲ್ಲದೇ ಬ್ರಿಟಿಷರ ವಿರುದ್ಧ ಶಾಂತಿಯ ಮಾರ್ಗದಲ್ಲಿ ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾ ಮಾನವತಾವಾದಿಯಾಗಿದ್ದರು. ಪ್ರಪಂಚದಲ್ಲಿ ಸೂರ್ಯ ಚಂದ್ರ ಇರುವವರೆಗೂ ಗಾಂಧಿಜೀಯ ತತ್ವ, ಸಿದ್ಧಾಂತ, ಆದರ್ಶ ಜೀವಂತವಾಗಿರಲಿ ಎಂದು ಪ್ರಾರ್ಥಿಸಿದರು.
ಹೊನ್ನಾವರ ಪಟ್ಟಣ ಪಂಚಾಯತ ಅಧ್ಯಕ್ಷೇ ಶ್ರೀಮತಿ ರಾಜಶ್ರೀ ಬಾಲಚಂದ್ರ ನಾಯ್ಕ ಮಾತನಾಡಿ ಗಾಂಧಿಜೀಯವರು ಮಹಿಳೆಯರ ಬಗ್ಗೆ ಅಪಾರ ಭಕ್ತಿ ಹೊಂದಿದ್ದರು. ಮಧ್ಯರಾತ್ರಿಯಲ್ಲಿಯೂ ಕೂಡ ಯಾವ ಭಯ ಭೀತಿ ಇಲ್ಲದೇ ಭಾರತದ ಬೀದಿಯಲ್ಲಿ ಮಹಿಳೆ ಏಕಾಂಗಿಯಾಗಿ ಸಂಚರಿಸುವ ದಿನ ಬರಬೇಕೆಂದು ಆಶಿಸಿದ್ದರು ಎಂದರು.
ನಂತರ ಕಾಂಗ್ರೇಸ್ ಕಾರ್ಯಕರ್ತರು ಗಾಂಧಿಜೀಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಹಾತ್ಮನ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷದ ಮೌನಾಚರಣೆ ನಡೆಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಆಗ್ನೇಲ್ ಡಾಯಸ್, ವಿನಾಯಕ ಶೇಟ್, ದಾಮೋದರ ನಾಯ್ಕ, ಲಂಬೋದರ ನಾಯ್ಕ, ಕುಪ್ಪು ಗೌಡ ಮಲ್ಲಾಪುರ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ನಾಯ್ಕ, ರವಿ ಮೊಗೇರ, ಮೋಹನ ಮೇಸ್ತ, ನಾಗರಾಜ ಮೇಸ್ತ, ನೆಲ್ಸನ್ ರೊಡ್ರಗಿಸ್, ಮಾಜಿ ಪ.ಪಂ. ಅಧ್ಯಕ್ಷೆ ಜೋಸ್ಪಿನ್ ಡಾಯಸ್, ರವೀಂದ್ರ ನಾಯ್ಕ, ಪ.ಪಂ. ಸದಸ್ಯ ಜಮೀಲಾ ಮುನಾಫ್, ಸುರೇಶ ಮೇಸ್ತ, ಬಾಲು ನಾಯ್ಕ, ಮುಸಾ ಅಣ್ಣಿಗೇರಿ, ರಾಮನಾಥ ನಾಯ್ಕ ಕರ್ಕಿ, ಗಣೇಶ ನಾಯ್ಕ ಮುಗ್ವಾ ಇನ್ನೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
Leave a Comment