ಹೊನ್ನಾವರ: ತಾಲೂಕಿನ ಅರೆಅಂಗಡಿ ಸಿರಿ ಬಿ.ಎಸ್.ಡಬ್ಲ್ಯೂ ಕಾಲೇಜು ವಿದ್ಯಾರ್ಥಿಗಳಿಂದ ಕವಲಕ್ಕಿಯ ಸುತ್ತ-ಮುತ್ತಲ ಪ್ರದೇಶಗಳಲ್ಲಿ À ಬೀದಿ ನಾಟಕ ಮತ್ತು ಸ್ವಚ್ಚತಾ ಕಾರ್ಯಕ್ರಮ ನಡೆಯಿತು.
ಕನಾಟಕ ವಿಶ್ವ ವಿದ್ಯಾಲಯ ಧಾರವಾಡ, ಸರಕಾರಿ ಮಾದರಿ ಹಿರಿಯ ಪಾರ್ಥಮಿಕ ಶಾಲೆ ನಂಬರ್-1 ಸಂಯುಕ್ತಾಶ್ರಯದಲ್ಲಿ ಸಿರಿ ಬಿ.ಎಸ್.ಡಬ್ಲ್ಯೂ ಮಹಾವಿದ್ಯಾಲಯ ಅರೆಅಂಗಡಿ ಇವರು ನಡೆಸುವ ಗ್ರಾಮೀಣ ಸಮಾಜ ಕಾರ್ಯ ತರಬೇತಿ ಶಿಬಿರ ನಡೆಯುತ್ತಿದೆ. ಈ ನಿಮಿತ್ತವಾಗಿ ಕವಲಕ್ಕಿಯ ಸುತ್ತ-ಮುತ್ತಲ ಪ್ರದೇಶಗಳಲ್ಲಿ ಬೀದಿ ನಾಟಕ ಮತ್ತು ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಜನನೀಬಿಡ ಪ್ರದೇಶದಲ್ಲಿ ಸ್ವಚ್ಚತೆಯ ಕುರಿತು ಬೀದಿ ನಾಟಕ ನಡೆಸಿ ಪ್ಲಾಸ್ಟಿಕ್ ಬಳಕೆಯ ಪರಿಣಾಮ ಹಾಗೂ ಹಸಿಕಸ,ಓಣಕಸದ ಬಗ್ಗೆ ಅರಿವು ಮೂಡಿಸಿ ಪರಿಸರ ಕಾಳಜಿಯ ಬಗ್ಗೆ ಮನದಟ್ಟು ಮಾಡಿದರು. ಅಂಗಡಿಮುಂಗಟ್ಟುಗಳ ಎದುರಿನ ಕಸಗಳನ್ನು ತೆಗೆದು ಹಸಿಕಸ ಒಣಕಸ ಬೆರ್ಪಡಿಸಿ ಸ್ವಚ್ಚತೆ ಕುರಿತ ಘೋಷಣಾ ಫಲಕಗಳನ್ನು ಹಿಡಿದು ಜಾಥಾ ನಡೆಸಿದರು. ವಿದ್ಯಾರ್ಥಿಗಳ ಜೊತೆಗೆ ಅದ್ಯಾಪಕ ವೃಂದದವರು ಸ್ವಚ್ಚತಾ ಕಾರ್ಯಕ್ರಮಕ್ಕೆ ಕೈಜೊಡಿಸಿದ್ದು ವಿಷೇಶವಾಗಿತ್ತು.
ಈ ಸಂಧರ್ಬದಲ್ಲಿ ಕಾಲೇಜಿನ ಶಿಕ್ಷಕ ವೃಂದದವರಾದ ಯಶೋಧಾ ನಾಯ್ಕ,ಸಚಿನ್ ನಾಯ್ಕ, ಬಾಬು ನಾಯ್ಕ ಕಾಲೇಜಿನ ಪ್ರಥಮ,ದ್ವಿತಿಯ,ತೃತಿಯ ವರ್ಷದ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
“ಸಮಾಜ ಕಾರ್ಯ ಶಿಬಿರದ ಮೂಲಕ ಸಮಾಜದಲ್ಲಿರುವ ಕೆಲವೊಂದು ಪರಿಣಾಮಕಾರಿಯಾದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಅದರ ದುಷ್ಪರಿಣಾಮಗಳ ಬಗ್ಗೆ ಬೀದಿ ನಾಟಕ,ಜಾಥಾ ಸೆರಿದಂತೆ ಇನ್ನಿತರ ರೀತಿಯಲ್ಲಿ ಜಾಗೃತಿ ಮೂಡಿಸಿ ಸಮಾಜಕ್ಕೆ ಒಂದು ಉತ್ತಮ ಸಂದೇಶ ರವಾನಿಸುವುದಾಗಿದೆ. ಸಿರಿ ಬಿ.ಎಸ್.ಡಬ್ಲ್ಯೂ ಕಾಲೇಜಿನ 5ನೇ ಸೆಮಿಸ್ಟರ್ ಪಠ್ಯಕ್ರಮದಂತೆ ಈ ಕಾರ್ಯಕ್ರಮ ನಡೆಯುತ್ತು.
Leave a Comment