ಹೊನ್ನಾವರ , ಗಾಂಧಿ ಜಯಂತಿಯ ನಿಮಿತ್ತ ಸ್ವಚ್ಚ ಭಾರತ ಪಕೋಡಾ ಕಾರ್ಯಕ್ರಮದ ಸಪ್ತಾಹದ ಅಂಗವಾಗಿ ಸರಕಾರಿ ಫ್ರೌಢಶಾಲೆ ಗೇರುಸೊಪ್ಪಾದ ಸೇವಾದಳ ಹಾಗೂ ಸ್ಕೌಟ್ ವಿದ್ಯಾರ್ಥಿಗಳು ಗೇರುಸೊಪ್ಪಾದ ವಿವಿಧ ಬೀದಿಗಳನ್ನು ಹೊಂಡಗಳನ್ನು ಮುಚ್ಚಿ ಸರಿಪಡಿಸಿದರು ಮತ್ತು ಬಂಗಾರಮಕ್ಕಿ ಬಸ್ ಸ್ಟ್ಯಾಂಡಿನಿಂದ ಆರಂಭಿಸಿ ಪೇಟೆಯಲ್ಲಿರುವ ಟೆಂಪೋಚಾಲಕರ ಕಛೇರಿಯವರೆಗೆ ಬೀದಿಯ ಬದಿಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲಿಗಳನ್ನು, ಚೀಲಗಳನ್ನು ಸಂಗ್ರಹಿಸಿದರು ಹಾಗೂ ಪಾರ್ಥೇನಿಯಂ ಗಿಡಗಳನ್ನು ಕಿತ್ತು ಸ್ವಚ್ಚಗೊಳಿಸಿದರು. ಮುಖ್ಯಾಧ್ಯಾಪಕ ನಾಗರಾಜ ಈಶ್ವರ ಹೆಗಡೆ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಜ್ಯೋತಿಪ್ರಭಾ ನಾಯಕತ್ವ ವಹಿಸಿದರು. ಉಳಿದ ಶಿಕ್ಷಕರು ಸಹಕರಿಸಿದರು.
Leave a Comment