ಹಳಿಯಾಳ: ಧರ್ಮ ರಕ್ಷಣೆಯ ಮತ್ತು ರಾಷ್ಟ್ರ ಪ್ರೇಮದ ಜಾಗರಣೆಯ ಸಲುವಾಗಿ ನವರಾತ್ರಿ ಹಬ್ಬದ ಪ್ರಯುಕ್ತ 9 ದಿನಗಳ ಕಾಲ ನಡೆಯುವ ದುರ್ಗಾದೌಡ ಧಾರ್ಮಿಕ ನಡಿಗೆ ಕಾರ್ಯಕ್ರಮ ಅಂಗವಾಗಿ ಹಳಿಯಾಳದಲ್ಲಿ ಬೃಹತ್ ಬೈಕ್ ಜಾಥಾ ನಡೆಯಿತು.
ವಿಜೃಂಭಣೆಯಿಂದ ನಡೆಯಲಿರುವ ದುರ್ಗಾದೌಡ ಅಂಗವಾಗಿ ಹಿಂದೂ ಸಮಾಜ ಬಾಂಧವರು, ವಿವಿಧ ಹಿಂದೂ ಸಂಘಟನೆಯವರು ನೂರಾರು ಸಂಖ್ಯೆಯ ಬೈಕ್ಗಳಲ್ಲಿ ಆಗಮಿಸಿದ ಮಹಿಳೆಯರು, ಯುವತಿಯರು ಹಾಗೂ ಯುವಕರು ಭಗವಾ ಧ್ವಜಗಳೊಂದಿಗೆ ಶ್ರೀ ಗಣೇಶ ದೇವಸ್ಥಾನದ ಎದುರು ಸೇರಿ ಶ್ರೀ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ ರ್ಯಾಲಿ ಪ್ರಾರಂಭಿಸಿ ಪಟ್ಟಣದ ಪ್ರಮುಖ ಎಲ್ಲಾ ಬೀದಿಗಳಲ್ಲಿ ಯಶಸ್ವಿಯಾಗಿ ಬೈಕ್ ಜಾಥಾ ನಡೆಸಿದರು.
ಪ್ರಮುಖರಾದ ರಾಜು ಧೂಳಿ, ಪ್ರಸಾದ ಹುನ್ಸವಾಡಕರ, ಸಂತೋಷ ಘಟಕಾಂಬಳೆ, ಸತ್ಯಜೀತ ಗಿರಿ, ಮಂಗಲಾ ಕಶೀಲಕರ, ಶಾಂತಾ ಹಿರೇಕರ, ಭಾರತಿ ಬಿರ್ಜೆ, ವಿಜಯ ಬೋಬಾಟಿ, ಅನಿಲ ಮುತ್ನಾಳ್, ಮಂಜು ಪಂಡಿತ, ವಿಲಾಸ ಯಡವಿ, ಶ್ರೀನಿವಾಸ ದೊಡ್ಮನಿ, ಮಂಜು, ಅಪ್ಪು ಚರಂತಿಮಠ, ಸಿದ್ದು ಶೆಟ್ಟಿ ಮೊದಲಾದವರು ಇದ್ದರು.
Leave a Comment