ಹಳಿಯಾಳ :ಸದೃಡವಾದಆರೋಗ್ಯಕ್ಕೆ ಸುದರ್ಶನಕ್ರಿಯಾಯೋಗತುಂಬಾ ಸಹಾಯಕ, ಇಂದಿನ ಯಾಂತ್ರಿಕ ಬದುಕಿನಲ್ಲಿದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ನಾವು ಯೋಗದಕಡೆಗೆ ಸಾಗಬೇಕಾಗಿದೆ. ಇಡೀಜಗತ್ತುಇಂದುಯೋಗದಕಡೆ ಹೆಜ್ಜೆ ಹಾಕುತ್ತಿದೆ.ಅಶಾಂತಿಯ ಬದುಕಿನಲ್ಲಿಆನಂದವನ್ನುಅನುಭವಿಸಲು “ಆನಂದಅನುಭೂತಿ ” ಶಿಬಿರ ತುಂಬಾ ಸಹಕಾರಿಯಾಗಿದೆ. ಎಂದು ಹೈದರಾಬಾದಿನ ಕೃಷಿ ವಿಸ್ತರಣಾಕೇಂದ್ರದಡೆಪ್ಯೂಡಿಡೈರೆಕ್ಟ್ರ್ಯುವ ವಿಜ್ಞಾನಿ ಡಾ||ಮಹಾಂತೆಶ ಶಿರೂರ ಶಿಬಿರಾರ್ಥಿಗಳಿಗೆ ಕರೆ ನೀಡಿದರು.
ಅವರು ಪಟ್ಟಣದಆರ್ಸೆಟಿ ಸಭಾಭವನದಲ್ಲಿವಿಆರ್ಡಿಎಮ್ಟ್ರಸ್ಟ್(ರಿ) ಹಳಿಯಾಳ ಮತ್ತುಹೊಂಗಿರಣ ಸಂಸ್ಥೆ ಆಯೋಜಿಸಿದಎರಡು ದಿನಗಳ ಕಾಲ “ಆನಂದಅನುಭೂತಿ” ಶಿಬಿರದಲ್ಲಿ ಪಾಲ್ಗೊಂಡುಶಿಬಿರವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ರವಿಶಂಕರ್ಗುರುಜಿಯವರಆರ್ಟ್ಆಪ್ ಲಿವಿಂಗ್ನಅನುಭವವನ್ನು ಹಂಚಿಕೊಂಡು ಶಿಬಿರಾರ್ಥಿಗಳಿಗೆ ಸುದರ್ಶನಕ್ರೀಯಾಯೋಗ ಹಾಗೂ ವಿಶೇಷ ದ್ಯಾನವನ್ನು ವೈಜ್ಞಾನಿಕವಾಗಿವಿಭಿನ್ನಚಟುವಟಿಕೆಯ ಮೂಲಕ ಹೇಳಿಕೊಟ್ಟರು.
ಕಾರ್ಯಕ್ರಮದಲ್ಲಿ ವಿವಿಡಿ ಸ್ಕೂಲ್ಆಪ್ಎಕ್ಸ್ಲೆನ್ಸಿನ ಪ್ರಾಂಶುಪಾಲ ಸಿ ಬಿ ಪಾಟೀಲ್, ತಾಲೂಕಾ ಪ್ರೌಢಶಾಲಾ ಶಿಕ್ಷಕಕರ ಸಂಘದಅಧ್ಯಕ್ಷ ವಿಠ್ಠಲ್ ಬೋರೇಕರ, ಶಿಕ್ಷಣ ಸಂಯೋಜಕಅರುಣ ನಾಯ್ಕ. ಜನಗಾ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಶಿವಾನಂದ ಹಿರೇಮಠ ಮುಂತಾದವರು ಭಾಗವಹಿಸಿದ್ದರು.ಆರಂಭದಲ್ಲಿ ಸಂಗೀತ ಶಿಕ್ಷಕಿ ಗೀತಾ ಹೆಗಡೆ ಪ್ರಾರ್ಥಿಸಿದರು, ಶಿಕ್ಷಕ ಸಿದ್ದಪ್ಪ ಬಿರಾದಾರ ಸ್ವಾಗತಿಸಿ ವಂದಿಸಿದರು.ಎರಡು ದಿನದ ಶಿಬಿರದಲ್ಲಿ ಅರವತ್ತಕ್ಕೂ ಹೆಚ್ಚೂ ಜನ ಭಾಗವಹಿಸಿದ್ದರು.ವಿವಿಧ ಚಟುವಟಿಕೆಗಳ ಮೂಲಕ “ಆನಂದಅನುಭೂತಿ ” ಶಿಬಿರ ಯಶಸ್ವಿಯಾಯಿತು.
Leave a Comment