ಹಳಿಯಾಳ : ಪಟ್ಟಣದ ಬಸ್ ನಿಲ್ದಾಣದ ಎದುರಿನ ರಸ್ತೆಯಲ್ಲಿ ಬೃಹತ್ ಮರಗಳನ್ನು ನೆಲಕ್ಕುರುಳಿಸಿರುವ ಅರಣ್ಯ ಇಲಾಖೆಯವರು 10 ದಿನಗಳೇ ಕಳೆದರು ಆ ಮರದ ತುಂಡುಗಳನ್ನು ಸಾಗಿಸದೆ ಇರುವುದು ಸಾರ್ವಜನೀಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಾನವ ಅಭಿವೃದ್ದಿಯ ಹೆಸರಿನಲ್ಲಿ ಪರಿಸರ ನಾಶ ಮಾಡುತ್ತಿರುವುದು ಅದರಿಂದ ಪ್ರಕೃತೀಯ ವಿಕೋಪಕ್ಕೆ ಗುರಿಯಾಗುತ್ತಿರುವ ಘಟನೆಗಳನ್ನು ನಾವು ಕೇಳುತ್ತಲೇ ಇದ್ದೇವೆ. ಅಲ್ಲದೇ ಪರಿಸರ ನಾಶ ಮಾಡಬೇಡಿ ಮರಗಿಡಗಳನ್ನು ಬೆಳೆಸಿ ಎಂದು ಹೇಳುವ ಅರಣ್ಯ ಇಲಾಖೆ ಅಭಿವೃದ್ದಿಯ ಹೆಸರಿನಲ್ಲಿ ಬಸ್ ನಿಲ್ದಾಣದ ಎದುರಿನ ಸುಮಾರು 30 ವರ್ಷದಿಂದ ಇದ್ದ ಬೃಹತ್ 4 ಮರಗಳನ್ನು ಕಡಿಯಲು ಅನುಮತಿ ನೀಡಿತು ಆ ಮರಗಳು ನೆಲಕ್ಕುರುಳಿ ಇತಿಹಾಸವಾದವು.
ಆದರೇ ಕಡಿತವಾದ ಮರದ ತುಂಡುಗಳನ್ನು ಸಾಗಿಸದೆ ಹಾಗೂ ಅಲ್ಲಿ ಉಂಟಾಗಿರುವ ಅಸ್ವಚ್ಚ ವಾತಾವರಣವನ್ನು ಸ್ವಚ್ಚಗೊಳಿಸದೆ ಪ್ರತಿದಿನ ಸಾರ್ವಜನೀಕರಿಗೆ, ವ್ಯಾಪಾರಸ್ಥರಿಗೆ, ವಿದ್ಯಾರ್ಥಿಗಳಿಗೆ ಕಿರಿಕಿರಿ ಉಂಟಾಗುತ್ತಿದೆ. ಅಲ್ಲದೇ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಸಂಚರಿಸುವ ಈ ಸ್ಥಳದಲ್ಲಿ ಕಡಿತವಾದ ಮರದ ಬೃಹತ್ ತುಂಡುಗಳನ್ನು ನೋಡಿದರೇ ಸಂಬಂಧಿಸಿದ ಇಲಾಖೆಯವರು ಯಾವ ರೀತಿಯ ಜಾಗೃತಿ ಮೂಡಿಸುತ್ತಾರೆ ಎಂಬುದು ಜಯ ಕರ್ನಾಟಕ, ಕರ್ನಾಟಕ ರಕ್ಷಣಾ ವೇದಿಕೆಯವರ ಪ್ರಶ್ನೇಯಾಗಿದೆ. ಗುರುವಾರದ ಒಳಗೆ ಮರದ ತುಂಡುಗಳನ್ನು ಸಾಗಿಸಿ ಅಲ್ಲಿಯ ಪರಿಸರ ಸ್ವಚ್ಚಗೊಳಿಸದೆ ಇದ್ದರೇ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಸಂಘಟನೆಯವರು ತಿಳಿಸಿದ್ದಾರೆ.
Leave a Comment