• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹೊನ್ನಾವರ ತಾಲೂಕ ಪಂಚಾಯತಿ ಸಾಮನ್ಯ ಸಭೆ ಅಧಿಕಾರಿಗಳ ಚಿಕ್ಕ ನೀರಾವರಿ ಇಲಾಖೆಯ ಅಧಿಕಾರಿಗಳ ಮೇಲೆ ಸದಸ್ಯರ ಆಕ್ರೋಶ

October 11, 2018 by Vishwanath Shetty Leave a Comment

ಹೊನ್ನಾವರ:

ಗ್ರಾಮ ಮಟ್ಟದ ಪಂಚಾಯತಿಯಲ್ಲಿ ಹೆಸರಿಗೆ ಮಾತ್ರ ಸೀಮೀತವಾಯ್ತಾ ಸರ್ಕಾರದ ನೂರು ವಿವಿಧ ಸೇವೆ ? ಕಂದಾಯ ಇಲಾಖೆಯಲ್ಲಿ ಕಾಡುತ್ತಿದೆಯಾ ಭೃಷ್ಟಾಚಾರದ ಕೂಪ. ಪಸಲ್ ಭೀಮಾ ಯೋಜನೆಯು ಈ ಬಾರಿಯಾದರೂ ತಾಲೂಕಿನ ರೈತರಿಗೆ ಖುಷಿ ನೀಡಲಿದೆಯಾ ಇದು ತಾಲೂಕ ಪಂಚಾಯತ ಸಾಮನ್ಯ ಸಭೆಯಲ್ಲಿ ಸದಸ್ಯರು ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ ರೀತಿಯಾಗಿದೆ.
ಹೊನ್ನಾವರ ತಾಲೂಕ ಪಂಚಾಯತಿ ಸಭಾಭವನದಲ್ಲಿ ಅಧ್ಯಕ್ಷ ಉಲ್ಲಾಸ ನಾಯ್ಕ ಅಧ್ಯಕ್ಷತೆಯಲ್ಲಿ ಸಾಮನ್ಯಸಭೆ ನಡೆಯಿತು.
ಸಭೆ ಆರಂಭದಲ್ಲಿ ಪ್ರತಿ ಸಭೆಯ ಆರಂಭದ ರಾಗವೇ ಮುಂದುವರೆದಿದ್ದು ಅಧಿಕಾರಿಗಳು ಪಾಲನಾ ವರದಿಯು ನೀಡದೇ ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ಮುಂದಿನ ಸಭೆಗೆ ಕಡ್ಡಾಯವಾಗಿ ಇಲಾಖೆಯಿಂದ ನೀಡುವಂತೆ ಅಧ್ಯಕ್ಷರು ಆದೇಶಿಸಿದರು. ಪಾಲನ ವರದಿ ನೀಡದ ಅಧಿಕಾರಿಗಳು ಪ್ರತಿ ಬಾರಿಯಂತೆ ಈ ಬಾರಿಯು ಬಿಸುವ ದೊಣ್ಣೆಯಿಂದ ತಪ್ಪಿಸಿಕೊಂಡು 2 ತಿಂಗಳು ಬಚಾವಾದರು. ನಂತರ ಸಭೆ ಆರಂಭದಲ್ಲಿ ಚಿಕ್ಕನೀರಾವರಿ ಇಲಾಖೆಯ ಅಧಿಕಾರಿಗಳು ಸಭೆಗೆ ಬರದೆ ಇರುವುದನ್ನು ಸದಸ್ಯರಾದ ಅಣ್ಣಯ್ಯ ನಾಯ್ಕ ಪ್ರಶ್ನಿಸಿ ಕೆಲಸ ನಡೆಯುವ ಸ್ಥಳದಲ್ಲಿ ಹೋಗಿ ಮಾಹಿತಿ ಕೇಳಿದರೆ ಅದರ ಬಗ್ಗೆ ಮಾಹಿತಿ ನೀಡುವುದಿಲ್ಲ ನಮಗೆ ಧಮ್ಕಿ ಹಾಕಿ ಕೆಲಸ ಬೇರೆಡೆಗೆ ಕಳುಹಿಸುತ್ತೇವೆ ಎನ್ನುತ್ತಾರೆ ಇತ್ತ ಒಂದೆ ಒಂದು ಸಭೆಗೆ ಬರುವುದಿಲ್ಲ ಈ ಇಲಾಖೆಯ ಮೇಲೆ ಏನು ಕ್ರಮ ಎಂದು ಅಧ್ಯಕ್ಷರ ಬಳಿ ಪ್ರಶ್ನಿಸಿದಾಗ ಈ ಇಳಾಖೆಯು ಇದ್ದು ಇಲ್ಲದಂತಾಗಿದೆ. ಯಾವುದೇ ಕೆಲಸ ಮಾಡಿದರೂ ಬಿಲ್ ಪಾಸು ಆಗುವುದಿಲ್ಲ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುತ್ತೇನೆ ಎಂದರು. ಇದಕ್ಕೆ ಕೆಂಡಮಂಡಲರಾದ ಸದಸ್ಯರು ಕಳೆದ 5 ಸಬೆಯಿಂದ ಅದೇ ಮಾಡುತ್ತಾ ಬಂದಿದ್ದಿರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡೊಣ ಎಂದು ಒತ್ತಾಯಿಸಿದಾಗ ಒರ್ವ ಸದಸ್ಯರು ಖರ್ಚು ವೆಚ್ಚ ನನ್ನದು ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ತುಕಾರಾಂ ನಾಯ್ಕ ಆ ಇಲಾಖೆಯವರು ಸಚಿವರ ಸಭೆಗೆ ಹಾಜರಾಗುವುದಿಲ್ಲ. ಇನ್ನು ಈ ಸಭೆಗೆ ಬರುತ್ತಾರಾ ನೀವು ಮುಖ್ಯಮಂತ್ರಿಗಳಿಗೆ ಪತ್ರ ಬರೆಯಿರಿ ಎಂದು ಸಲಹೆ ನೀಡಿದರು.
ನಂತರ ವಿವಿಧ ಇಲಾಖೆವಾರು ಚರ್ಚೆಗೆ ಸಭೆ ಸಾಕ್ಷಿಯಾಯಿತು. ಅರೋಗ್ಯ ಇಲಾಖೆಗೆ ಸಂಭದಿಸಿದ ಚರ್ಚೆಯಲ್ಲಿ ಇಲಖಾವಾರು ಸೌಲಭ್ಯ ಹಾಗೂ ಮಂಗನ ಖಾಯಿಲೆ ತಡೆಗಟ್ಟಲು ತೆಗೆದುಕೊಂಡ ಕ್ರಮದ ಕುರಿತು ಅಧಿಕಾರಿಗಳು ವಿವರಿಸಿದರು. ನಮ್ಮ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಬಿಲ್ಡಿಂಗ್ ಮೇಲ್ಚಾವಣೆ ಸಂಪೂರ್ಣ ಹಾಳಾಗಿದೆ ದುರಸ್ತಿ ಮಾಡಿಸಿಕೊಡುವಂತೆ ಕೇಳಿಕೊಂಡರು. ಶಿಕ್ಷಣ ಇಲಾಖೆಯ ಚರ್ಚೆಯಲ್ಲಿ ಶಿಕ್ಷಣಾಧಿಕಾರಿಗಳು ಪಾಲ್ಗೊಂಡು ಸೌಲಭ್ಯಗಳ ವಿವರಿಸಿ ಇನ್ನೂ ಕೆಲವೇ ದಿನದಲ್ಲಿ ಸೈಕಲ್ ವಿತರಣೆ ಯಾಗಲಿದೆ ಎಂದು ಭರವಸೆ ನೀಡಿದರು. ಶಿಕ್ಷಕರ ಕೊರತೆ ಹಾಗೂ ಕೆಲವು ಶಾಲೆಯಲ್ಲಿ ಶಿಕ್ಷಕರೆ ಇಲ್ಲದೆ ಅತಿಥಿ ಶಿಕ್ಷಕರಿಂದಲೇ ಕೂಡಿರುವ ಬಗ್ಗೆ ಸದಸ್ಯರು ಬೇಸರ ವ್ಯಕ್ತಪಡಿಸಿದರು.
ತೋಟಗಾರಿಕಾ ಇಲಖೆಯ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಸದಸ್ಯ ಆರ್.ಪಿ.ನಾಯ್ಕ ಈ ಬಾರಿ ಮಳೆ ವಾಡಿಕೆಗಿಂತ ಹೆಚ್ಚಾಗಿದೆ. ಬೆಳೆ ನಷ್ಟದಿಂದ ಉಂಟಾದ ಫಸಲ್ ವಿಮಾ ಪರಿಹಾರ ಈ ಬಾರಿಯಾದರೂ ಕಂಪನಿಯಿಂದ ಸಿಗುತ್ತದೆಯಾ ಎಂದು ಪ್ರಶ್ನಿಸಿದಾಗ ಮುಂದಿನ ಅಗಸ್ಟ ಒಳಗೆ ಸಿಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು. ಕಂದಾಯ ಇಲಾಖೆಯ ಅಧಿಕಾರಿಗಳ ಕಚೇರಿಯಿಂದ ಆಗಮಿಸಿದ ಅಧಿಕಾರಿಗಳನ್ನು ಅಧ್ಯಕ್ಷರೇ ಪ್ರಶ್ನಿಸಿ ಎತ್ತ ಸಾಗುತ್ತಿದೆ ಇಲಾಖೆ ಎಂದು ಏರು ಧ್ವನಿಯಲ್ಲಿ ಕೇಳಿದರು. ಪಡಿತರ ವ್ಯವಸ್ಥೆಯ ಹೆಸರು ತೆಗೆಯಲು 2 ರಿಂದ 3 ಸಾವಿರ ಕೇಳುತ್ತಾರೆ ಎಂಬ ದೂರನ್ನು ಪ್ರಶ್ನಿಸಿ ಮುಂದೆ ಇಂತಹ ಪ್ರಕರಣ ಕೇಳಿದರೆ ಶಿಸ್ತು ಕ್ರಮ ಕೈಗೊಳ್ಳಲು ಸೂಚಿಸುದಾಗಿ ಎಚ್ಚರಿಸಿದರು. ಹೊಸ ಪಡಿತರ ಚೀಟಿಯನ್ನು ನವೆಂಬರ 1ರ ಬಳಿಕ ವಿತರಿಸಲಾಗುವುದು ಎಂದರು. ಆಧಾರ ತಿದ್ದುಪಡಿ, ಪಹಣೆ ಪತ್ರಿಕೆ ಪಡೆಯಲು ತಾಲೂಕ ಕೇಂದ್ರದತ್ತ ಮುಖ ಮಾಡುತ್ತಿರುವುದಕ್ಕೆ ಸದಸ್ಯರು ಆಕ್ಷೇಪಿಸಿ ಗ್ರಾಮ ಪಂಚಾಯತಿ ಹೆಸರಿಗೆ ಮಾತ್ರವಾ ಎಂದು ಪ್ರಶ್ನಿಸಿದರು. ತಾಲೂಕ ಕಾರ್ಯನಿರ್ವಹಣಾಧಿಕಾರಿಗಳು ಸ್ಪಷ್ಟನೆ ನೀಡಿ ಪಂಚಾಯತಿಯಲ್ಲಿ ಅವಕಾಶವಿದೆ ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದು ಭರವಸೆ ನೀಡಿದರು. ಭಾವನ ವಾಹಿನಿಯಲ್ಲಿ ಇತ್ತಿಚಿಗೆ ಪ್ರಸಾರವಾದ ಬಾಳಗದ್ದೆ ತಿರುವಿನ ರಸ್ತೆ ಬಗ್ಗೆ ಸುರಕ್ಷತಾ ಕ್ರಮ ಕೈಗೊಳ್ಳುವ ಕುರಿತು ಬಿಸಿ ಬಿಸಿ ಚರ್ಚೆಗೆ ಸಭೆ ಕಾರಣವಾಯಿತು, ಸದಸ್ಯ ಆರ್.ಪಿ.ನಾಯ್ಕ ಮಾತನಾಡಿ ನಾನು 8 ತಿಂಗಳ ಹಿಂದೆಯೇ ಈ ಬಗ್ಗೆ ಹೇಳಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇಲ್ಲಿ ಅನಾಹುತ ಸಂಭವಿಸುತ್ತಲೆ ಇದೆ ಎಂದು ಹೆದ್ದಾರಿ ವಿಭಾಗದ ಅಧಿಕಾರಿಯ ವಿರುದ್ದ ಅಸಮಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮುಂದಿನ ಸಭೆಯ ಒಳಗೆ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುದಾಗಿ ತಿಳಿಸಿದರು. ಸಮಾಜಕಲ್ಯಾಣ, ಅರಣ್ಯ, ಬಂದರು, ಕೃಷಿ, ಪಶು ಇಲಾಖೆ ಸೇರಿದಂತೆ ವಿವಿಧ ಅಧಿಕಾರಿಗಳು ಇಲಾಖವಾರು ಪ್ರಗತಿಯ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಲಲಿತಾ ನಾಯ್ಕ, ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾದ, ಖಾಜಿ ಅಮ್ಮದ್ ಇಲಷಾದ್, ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ ತಾಲೂಕ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: ಅಧಿಕಾರಿಗಳ ಚಿಕ್ಕ ನೀರಾವರಿ, ಅರೋಗ್ಯ ಇಲಾಖೆಗೆ ಸಂಭದಿಸಿದ ಚರ್ಚೆ, ಇಲಾಖೆಯ ಅಧಿಕಾರಿಗಳ ಮೇಲೆ, ಚಿಕ್ಕನೀರಾವರಿ ಇಲಾಖೆ, ತೋಟಗಾರಿಕಾ ಇಲಖೆ, ಪಸಲ್ ಭೀಮಾ ಯೋಜನೆ, ಫಸಲ್ ವಿಮಾ ಪರಿಹಾರ, ಬಿಲ್ಡಿಂಗ್ ಮೇಲ್ಚಾವಣೆ, ಬಿಸುವ ದೊಣ್ಣೆ, ಭೃಷ್ಟಾಚಾರದ ಕೂಪ, ಮಳೆ ವಾಡಿಕೆಗಿಂತ ಹೆಚ್ಚಾಗಿದೆ. ಬೆಳೆ ನಷ್ಟ, ಸದಸ್ಯರ ಆಕ್ರೋಶ, ಸಾಮನ್ಯ ಸಭೆ, ಹೊನ್ನಾವರ ತಾಲೂಕ ಪಂಚಾಯತಿ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar