ಹೊನ್ನಾವರ: ತಾಲೂಕಿನ ಗುಡ್ಡೇಬಾಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಕ್ಷಿ ಶಿಕ್ಷಕರ ಬಳಗದ ವತಿಯಿಂದ ನಡೆದ ‘ಚಿಲುಮೆ’ ರಜೆ ಶಿಬಿರವು ಮಕ್ಕಳಿಗೆ ಬೇರೆ ಬೇರೆ ಚಟುವಟಿಕೆಗಳ ಮೂಲಕ ಖುಷಿಯ ಅನುಭವ ನೀಡಿತು. ಎರಡು ದಿನಗಳ ಕಾಲ ನಡೆದ ಶಿಬಿರದಲ್ಲಿ ಮಕ್ಕಳು ಚಿತ್ರಕಲೆ, ಪೇಪರ್ ಕ್ರಾಪ್ಟ್, ಹಾಡು, ಅಭಿನಯ, ಆಟಗಳ ಮೂಲಕ ತರಗತಿಯ ಕಲಿಕೆಗೆ ಹೊರತಾದ ಮುಕ್ತವಾದ ವಾತಾವರಣದಲ್ಲಿ ಖುಷಿಯಿಂದ ಪಾಲ್ಗೊಂಡರು.
ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿರವರು ರಜೆಯಲ್ಲು ಮಕ್ಕಳಿಗಾಗಿ ಇಂತಹ ಶಿಬಿರವನ್ನು ಅಯೋಜಿಸುವ ಬಳಗದ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಶಾಲೆಯಲ್ಲಿ ಶಿಬಿರ ಸಂಘಟಿಸಿದ್ದಕ್ಕಾಗಿ ಮುಖ್ಯಾಧ್ಯಾಪಕಿ ನೇತ್ರಾವತಿ ಭಟ್ ರವರನ್ನು ಪುಸ್ತಕ ನೀಡಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ಸಂಘದ ಎನ್.ಎಸ್.ನಾಯ್ಕ, ಐ.ಆರ್.ಭಟ್, ಪ್ರತಿಮಾ ಹೆಗಡೆ, ವಿ.ಜಿ.ಹೆಗಡೆ, ಬಿ.ಆರ್.ಪಿ ಸತೀಶ ನಾಯ್ಕ ಉಪಸ್ಥಿತರಿದ್ದರು. ಎಸ್.ಡಿ.ಎಮ್.ಸಿ ಅಧ್ಯಕ್ಷ ಶ್ರೀಪಾದ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಶಿಧರ ದೇವಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರೆ ಶ್ರೀಮತಿ ಮಂಗಲಾ ಹೆಗಡೆ ನಿರ್ವಹಿಸಿದರು. ಕುಮಾರಿ ಕೃಪಾ ಮುದ್ದಾಗಿ ಸ್ವಾಗತಿಸಿದರೆ ಕುಮಾರಿ ಶರೋನ್ ಎಲ್ಲರನ್ನೂ ವಂದಿಸಿದಳು.
ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕರಾದ ವಿ.ಜಿ.ನಾಯ್ಕ, ಕೃಷ್ಣ ಅಂಬಿಗ, ಎಮ್.ಎಸ್.ಹೆಗಡೆ, ರಮೇಶ ಮಲ್ಲಪ್ಪ, ನಾಗರಾಜ ಅಂಬಿಗ, ಸುಧಾ ಭಂಡಾರಿ, ಹರಿಶ್ಚಂದ್ರ ನಾಯ್ಕ, ವಿಮಲಾ ಅಂಬಿಗ, ಎಮ್.ಪಿ.ಭಟ್, ಶೇಖರ ನಾಯ್ಕ, ಪ್ರಕಾಶ ಹೆಗಡೆ , ಹೊನ್ನಿ ಮುಕ್ರಿ, ರೋಹಿದಾಸ ನಾಯ್ಕ, ಚೇತನಾ ಹೆಗಡೆ, ಶ್ರೀಮತಿ ಕಲಾ, ಪದ್ಮಾವತಿ ನಾಯ್ಕ, ಜನಾರ್ದನ ನಾಯ್ಕ ಮೊದಲಾದವರು ಪಾಲ್ಗೊಂಡರು. ಶ್ರೀಮತಿ ಶಾರದಾ ನಾಯ್ಕ ಮಕ್ಕಳಿಗೆ ಪೆನ್ನು ನೀಡಿ ಪ್ರೋತ್ಸಾಹಿಸಿದರು.
ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಕ್ಷೇತ್ರ ಸಮನ್ವಯಾಧಿಕಾರಿ ಶ್ರೀಧರ ದುರ್ಗಾಕೇರಿ, ಶಿಕ್ಷಣ ಸಂಯೋಜಕಿ ಶ್ರೀಮತಿ ದೀಪಾ ಶೆಟ್ಟಿ ಶಿಬಿರಕ್ಕೆ ಭೇಟಿ ನೀಡಿ ಮಕ್ಕಳನ್ನು ಪ್ರೋತ್ಸಾಹಿಸಿದರು.
Leave a Comment