ಹೊನ್ನಾವರ: ಕನ್ನಡ ಅಭಿಮಾನಿ ಸಂಘದ ವತಿಯಿಂದ 24ನೇ ವರ್ಷದ ಕನ್ನಡ ರಾಜ್ಯೋತ್ಸವದ `ಕನ್ನಡ ಹಬ್ಬ’ ಆಚರಣೆಯ ಅಂಗವಾಗಿ ಮಕ್ಕಳಿಗಾಗಿ ಹಮ್ಮಿಕೊಂಡ ಕನ್ನಡ ಚಲನಚಿತ್ರಗೀತೆ ಹಾಡುವ ಸ್ಪರ್ಧೆ `ಕರಾವಳಿ ಕನ್ನಡ ಕೋಗಿಲೆ-2018’ನ್ನು ಜಿಲ್ಲೆಯ ಐದು ತಾಲೂಕುಗಳಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.
ಜಿಲ್ಲಾ ಮಟ್ಟದ ಚಲನಚಿತ್ರ ಗೀತೆ ಹಾಡುವ ಧ್ವನಿ ಪರೀಕ್ಷೆಯಲ್ಲಿ ದ್ವಿತೀಯ ಸುತ್ತಿಗೆ 30 ಸ್ಪರ್ಧಾಳುಗಳು ಆಯ್ಕೆಗೊಂಡಿದ್ದಾರೆ. ಹೊನ್ನಾವರದಿಂದ ಅನನ್ಯ ಶಂಭು ಭಟ್ಟ, ನಿಹಾರಿಕಾ ಶ್ರೀಧರ ಭಟ್ಟ, ಪ್ರತೀಕ್ಷಾ ಆಚಾರಿ, ರಮ್ಯಾ ಗೌಡ, ರಿಶಿ ಸಾಯಿದಾಸ, ವಿಶಾಲ್ ವಾಸುದೇವ ಕೋಡಿಯಾ, ಪೂಷ್ಕರ ಯುವರಾಜ ಪಟವರ್ದನ್, ಭಟ್ಟಳದಿಂದ ಅದಿತಿ ಪೈ, ವಿದ್ಯಾ ವಿ.ದೈಮನೆ, ಪೂರ್ವಿ ಮಾಧವ ಭಟ್ಟಳ, ಅನಂತ ಎಸ್. ಭಟ್ಟ, ಸುಮುಖ ಜಿ.ಹೆಗಡೆ, ಕಾರವಾರದಿಂದ ಶ್ರೀರಕ್ಷಾ ಗೋಳಿಕಟ್ಟಿ, ಶಿವಶ್ರೀ ಬಲೆಗಾರ, ಆರ್ಯಾ ಏಸ್ ಖಾರ್ವಿ, ಸಿ.ಪಿ ಭೂಮಿಕಾ, ಅಭಿಷೆಕ ಗುನುಗಾ, ವಿಕ್ರಮ ಡಿ ಶಾನಭಾಗ, ಪ್ರಥಮ ಆರ್ .ಕಳಸ, ಅಂಕೋಲಾದ ವರ್ಷಿಣಿ ಪ್ರಶಾಂತ ಶೆಟ್ಟಿ, ಪ್ರತಿಭಾ ಶೈಲೇಶ ಆಗೇರ್, ಕೆ.ಎಸ್ ಸಾಹಿತ್ಯ ಅಭಿಷೆಕ ಆರ್.ನಾಯಕ, ಕುಮಟಾ ತಾಲೂಕಿನ ಉನ್ನತಿ ಆರ್ ನಾಯ್ಕ, ರಕ್ಷಾ ಆರ್ ಶಾನಭಾಗ, ತೇಜಸ್ವಿ ಕೆ ಶಾನಭಾಗ, ಶೃದ್ಧಾ ಎಸ್.ಎನ್, ಶ್ರೀಶ ವಿ. ಹೆಗಡೆ,ಸೂರಜ್ ವಾಯ್ ಹರಿಕಾಂತ, ಅನಂತ ಕೆ ಶಾನಭಾಗ ಆಯ್ಕೆಗೊಂಡಿದ್ದಾರೆ. ಈ ಎಲ್ಲಾ ಧ್ವನಿ ಆಯ್ಕೆ ಪರಿಕ್ಷೆಯು ಕುಮಟಾದ ಸ್ವರಾತ್ಮಿಕಾ ಮಲೋಡಿಯಸ್ ವಾಯ್ಸ್ನ ತಂಡ ನಡೆಸಿ ಕೊಟ್ಟಿದ್ದು ಮುಂದಿನ 2ನೇ ಸುತ್ತಿಗೆ ಧ್ವನಿ ಪರಿಕ್ಷೆಯು ಕುಮಟಾದ ವರದಾ ಹೊಟೇಲ್ ನಲ್ಲಿ 24ರ ಬೆಳ್ಳಿಗ್ಗೆ 9.30ಕ್ಕೆ ನಡೆಯಲಿದೆ ಎಂದು ಕನ್ನಡ ಅಭಿಮಾನಿ ಸಂಘದ ಅಧ್ಯಕ್ಷ ಸತ್ಯ ಜಾವಗಲ್ ತಿಳಿಸಿದ್ದಾರೆ.
Leave a Comment