ಹಳಿಯಾಳ:- ಮಹಾತ್ಮಾ ಗಾಂಧಿಯವರ 150ನೇ ವರ್ಷಾಚರಣೆ ಅಂಗವಾಗಿ ಗಾಂಧಿಜಿ-150 ಅಭಿಯಾನ ರಥ ಸೋಮವಾರ ಹಳಿಯಾಳ ಪಟ್ಟಣಕ್ಕೆ ಆಗಮಿಸಿತು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ, ತಹಶೀಲ್ದಾರ್ ವಿದ್ಯಾಧರ ಗುಳಗುಳಿ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ ಮೊದಲಾದವರು ಅಭಿಯಾನ ರಥವನ್ನು ಬರಮಾಡಿಕೊಂಡರು.
ರಾಜ್ಯದ 30 ಜಿಲ್ಲೆಗಳ ಆಯ್ದ ತಾಲೂಕುಗಳಲ್ಲಿ ಈ ಅಭಿಯಾನ ನಡೆಯುತ್ತಿದ್ದು. ಅಕ್ಟೊಬರ್ 20ರಂದು ಸಾಗರ ಮೂಲಕ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರಕ್ಕೆ ಆಗಮಿಸಿದ ರಥ ಜಿಲ್ಲೆಯ ಆಯ್ದ ಪ್ರಮುಖ ತಾಲೂಕುಗಳಲ್ಲಿ ಸಂಚರಿಸಿದ ರಥ ಸೋಮವಾರ ಬೆಳಿಗ್ಗೆ ದಾಂಡೇಲಿಗೆ ಭೇಟಿ ನೀಡಿ ಸಾಯಂಕಾಲ ಹಳಿಯಾಳಕ್ಕೆ ಆಗಮಿಸಿತು. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಸೇರಿದಂತೆ ಪ್ರಮುಖ ಗಣ್ಯರು ರಥವನ್ನು ಬರಮಾಡಿಕೊಂಡು ಗಾಂಧಿಜೀಯವರ ಪುಥ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಅಭಿಯಾನ ರಥ ಮುಂದೆ ಸಾಗಿತು.
Leave a Comment