ಹೊನ್ನಾವರ : ಅದ್ಭುತ ಶಕ್ತಿಯಾಗಿದ್ದ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಜಗತ್ತು ಕಂಡ ದಿಟ್ಟ ಮಹಿಳೆಯಾಗಿ ಹೊರಹೊಮ್ಮಿದ್ದರು ಎಂದು ಮಾಜಿ ಶಾಸಕಿ ಶಾರದಾ ಶೆಟ್ಟಿ ಅಭಿಪ್ರಾಯ ಪಟ್ಟರು.
ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರ ಪಣ್ಯ ತಿಥಿ ಮತ್ತು ದೇಶದ ಪ್ರಥಮ ಗೃಹಮಂತ್ರಿ ಸರದಾರ್ ವಲ್ಲಭಾಯಿ ಪಟೇಲ್ರವರ ಜನ್ಮ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ತಮ್ಮ ಜೀವನದುದ್ದಕ್ಕೂ ದೇಶದ ಐಕ್ಯತೆ, ಸಮಗ್ರತೆಗೆ ಹೋರಾಡಿ, ಕೊನೆಗೂ ಹಂತಕರ ಗುಂಡಿಗೆ ಬಲಿಯಾದ ನಾಯಕಿ ಇಂದಿರಾಗಾಂಧಿ ಎಂದು ಸ್ಮರಿಶಿದರು. ಸುಮಾರು 17 ವರ್ಷಗಳಿಗೂ ಹೆಚ್ಚಿನ ಅವಧಿ ಭಾರತ ದೇಶವನ್ನು ಪ್ರಧಾನ ಮಂತ್ರಿಯಾಗಿ ಮುನ್ನಡೆಸಿ ‘ಗರಿಬಿ ಹಟಾವ್’, ‘ಹಸಿರು ಕಾಂತ್ರಿ’, ಬ್ಯಾಂಕ್ ರಾಷ್ಟ್ರೀಕರಣದ ಮೂಲಕ ಬಡವರ ಕಣ್ಮಣಿಯಾಗಿ ಹೊರಹೊಮ್ಮಿದ್ದರು ಎಂದರು.
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಮಾತನಾಡಿ ದೇಶ ಕಂಡ ಮಹಾನ ನಾಯಕರಾದ ಸರದಾರ್ ವಲ್ಲಬಾಯಿ ಪಟೇಲ್ ಮತ್ತು ಇಂದಿರಾಗಾಂಧಿ ಇಂದಿನ ಯುವ ಪೀಳಿಗೆÉಗೆ ಆದರ್ಶರಾಗಿದ್ದಾರೆ ಎಂದರು. 1947 ರಲ್ಲಿ ಭಾರತದ ಪ್ರಥಮ ಗೃಹ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸರದಾರ ವಲ್ಲಭಬಾಯಿ ಪಟೇಲ್ ಅನೇಕ ದಿಟ್ಟ ನಿರ್ಣಯ ಕೈಗೊಂಡಿದ್ದರು. ಸ್ವತಂತ್ರ ಭಾರತದ ಶಿಲ್ಪಿ ಎಂದೇ ಹೆಸರಾಗಿದ್ದ ಅವರು, ರಾಜನ ಆಳ್ವಿಕೆಯಲ್ಲಿದ್ದ 550 ಪ್ರಾಂತ್ಯಗಳನ್ನು ಒಗ್ಗೂಡಿಸಿ ಅಖಂಡ ಭಾರತಕ್ಕೆ ಭದ್ರ ಬುನಾದಿ ಹಾಕಿದ್ದರು ಎಂದು ಪಟೇಲ್ರ ಆಡಳಿತವನ್ನು ಶ್ಲಾಘೀಸಿದರು.
ಕಾರ್ಯಕ್ರಮದಲ್ಲಿ ಸೇರಿದ ಪಕ್ಷದ ಕಾರ್ಯಕರ್ತರು, ಮುಖಂಡರು ಮಾಜಿ ಪ್ರಧಾನಿ ಇಂದಿರಾಗಾಂಧಿ ಮತ್ತು ದೇಶದ ಪ್ರಥಮ ಗೃಹಮಂತ್ರಿ ಸರದಾರ ವಲ್ಲಬಾಯಿ ಪಟೇಲ್ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಒಂದು ನಿಮಿಷದ ಮೌನ ಆಚರಿಸಿ ಗೌರ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷೆ ರಾಜಶ್ರೀ ನಾಯ್ಕ, ಮಾಜಿ ಅಧ್ಯಕ್ಷೆ ಜೊಸ್ಪೀನ್ ಡಾಯಸ್, ಸದಸ್ಯರುಗಳಾದ ಮಂಜುನಾಥ ಖಾರ್ವಿ, ಸುರೇಶ ಮೇಸ್ತ, ಜಮೀಲಾ ಮುನಾಫ್, ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಆಗ್ನೇಲ್ ಡಾಯಸ್, ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ. ಎಲ್. ನಾಯ್ಕ, ಮಾಜಿ ಬಿ.ಸಿ.ಸಿ. ಅಧ್ಯಕ್ಷ ರಾಮನಾಥ ನಾಯ್ಕ, ಪಕ್ಷದ ಮುಖಂಡರಾದ ನೆಲ್ಸನ್ ರೊಡ್ರಗಿಸ್, ಮುಸಾ ಅಣ್ಣಿಗೇರಿ, ಲೊಲಾಸ ಪುಡ್ತಾದೊ, ಜಕ್ರಿಯಾ ಜೋಗಮಠ, ಇಸ್ಮಾಯಿಲ್ ಕವಲಕ್ಕಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಾಮೋದರ ನಾಯ್ಕ, ಬಾಲು ನಾಯ್ಕ, ಕೃಷ್ಣ ಹರಿಜನ, ನಳಿನಾಕ್ಷಿ ಹೆಗಡೆ, ಎಂ.ಎಸ್. ಹೆಗಡೆ, ಸುಬ್ರಹ್ಮಣ್ಯ ಭಟ್ಟ. ಅಣ್ಣಪ್ಪ ಆಚಾರಿ, ಮಂಜುನಾಥ ಶಾನಭಾಗ ಇನ್ನೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಬಿ.ಸಿ.ಸಿ. ಕಾರ್ಯದರ್ಶಿ ಲಂಬೋಧರ ನಾಯ್ಕ ಎಲ್ಲರನ್ನೂ ಸ್ವಾಗತಿಸಿದರು. ನಗರ ಘಟಕದ ಅಧ್ಯಕ್ಷ ಕೇಶವ ಮೇಸ್ತ ವಂದಿಸಿದರು.
Leave a Comment