ಹಳಿಯಾಳ: ಎಲ್ಲಕ್ಕಿಂತ ರಾಷ್ಟ್ರ ದೊಡ್ಡದು, ನಾಡಿನ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನ ಇರಬೇಕು. ರಾಜಕಾರಣ ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕು. ರಾಷ್ಟ್ರದ ಐಕ್ಯತೆ ವಿಚಾರ ಬಂದಾಗ ಎಲ್ಲರೂ ಒಂದಾಗಬೇಕು ಎಂದು ಕಂದಾಯ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು.
ಸಚಿವರು ತಮ್ಮ ಸ್ನೇಹಿತ ಸಂಸದರು, ರಾಜ್ಯ ಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಹಾಗೂ ವಿವಿಧ ಕಂಪೆನಿಗಳ ಸಿಎಸ್ಆರ್ ಅನುದಾನಗಳಿಂದ ಸುಮಾರು 2 ಕೋಟಿ 40 ಲಕ್ಷ ರೂ. ವೆಚ್ಚದಲ್ಲಿ ಹಳಿಯಾಳ ಪಟ್ಟಣದ ಧಾರವಾಡ ರಸ್ತೆಯ ಸ್ವಾಗತ ಕಮಾನಿನ ಬಳಿ ನಿರ್ಮಿಸಲಾಗಿರುವ ಒಳಾಂಗಣ ಕ್ರೀಡಾಂಗಣ ಕಟ್ಟಡವನ್ನು ಲೋಕಾರ್ಪಣೆ ಮಾಡಿ ನಡೆದ ಸಮಾರಂಭವನ್ನು ಉಧ್ಟಾಟಿಸಿ ಬಳಿಕ ದೇಶದ ಮೊಲದ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ ಅಂಗವಾಗಿ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ರಾಷ್ಟ್ರೀಯ ಏಕತಾ ದಿವಸ ಅಂಗವಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿ ಮಾತನಾಡಿದರು.
ಹರಿದು ಹಂಚಿಹೊಂಗಿದ್ದ 565 ಸಂಸ್ಥಾನಗಳನ್ನು ಒಗ್ಗೂಡಿಸಿ ಅಖಂಡ ಭಾರತ ನಿರ್ಮಾಣ ಮಾಡಿದ ಶ್ರೇಯ ವಲ್ಲಭಭಾಯಿ ಅವರಿಗೆ ಸಲ್ಲುತ್ತದೆ. ಅಭಿವೃದ್ದಿ ವಿಚಾರದಲ್ಲಿ ಅವರ ದೂರದೃಷ್ಠಿಕೊನ, ಆಡಳಿತದ ವೈಖರಿ ಎಲ್ಲರಿಗೂ ಮಾದರಿಯಾಗಿದೆ ಎಂದ ದೇಶಪಾಂಡೆ ಸರ್ದಾರ ಎನ್ನುವುದು ದೇಶದ ಜನತೆ ಅವರಿಗೆ ಕೊಟ್ಟ ಗೌರವ ಎಂದರು. ಹಾಗೆಯೇ ಮಾಜಿ ಪ್ರಧಾನಿ ಇಂದಿರಾಗಾಂಧಿಯವರನ್ನು ನಾವು ಮರೆಯಬಾರದು ದೇಶಕ್ಕೆ ಅವರ ಕೊಡುಗೆಯು ಅಪಾರವಾಗಿದೆ ಎಂದರು.
ನೂತನ ಒಳಾಂಗಣ ಕ್ರೀಡಾಂಗಣದ ಸದ್ಬಳಕೆಯಾಗಬೇಕು, ನೂತನ ಕಟ್ಟಡವನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು. ಇಲ್ಲಿ ಯಾವುದು ಉಚಿತವಿಲ್ಲ ನಿರ್ವಹಣೆಯ ದೃಷ್ಠಿಯಿಂದ ಸದಸ್ಯತ್ವ ಪಡೆದು ನಿಗದಿಪಡಿಸಿದ ಫೀ ತುಂಬಿ ಸೌಕರ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದ ದೇಶಪಾಂಡೆ ಪ್ರತಿಯೊಬ್ಬರು ವ್ಯಕ್ತಿಗತ ಶಿಸ್ತು ಹೊಂದಿದರೇ ಮಾತ್ರ ಸಮಾಜದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣವಾಗಲು ಸಾಧ್ಯವೆಂದರು. ಇನ್ನೂ ಸಿಎಸ್ಆರ್ ಅನುದಾನದಡಿಯಲ್ಲಿ ಹಳಿಯಾಳ ಹಾಗೂ ಜೋಯಿಡಾ ಭಾಗದಲ್ಲಿ ನೂತನ ತಲಾ 10 ಬಸ್ ಶೆಲ್ಟರ್ ಮತ್ತು ಶೌಚಾಲಯಗಳನ್ನು ನಿರ್ಮಿಸಲು ಅನುದಾನ ಬಿಡುಗಡೆಯಾಗಿದೆ ಎಂದರು.
ಟೋಯೋಟಾ ಕಿರ್ಲೊಸ್ಕರ ಮೋಟರ್ಸ್ ಪ್ರೇ.ಲಿ.ಬೆಂಗಳೂರಿನ ಜನರಲ್ ಮ್ಯಾನೇಜರ್ ರಾಜೇಂದ್ರ ಹೆಗ್ಡೆ ಮಾತನಾಡಿ ರಾಜ್ಯದಲ್ಲಿರುವ ಹಲವಾರು ಕಂಪೆನಿಗಳಿಂದ ಸಿಎಸ್ಆರ್ ಅನುದಾನವನ್ನು ಪಡೆದು ಅಭಿವೃದ್ದಿ ಕಾರ್ಯಗಳನ್ನು ಮಾಡಿಸಿಕೊಳ್ಳುವಲ್ಲಿ ಸಚಿವ ಆರ್.ವಿ.ದೇಶಪಾಂಡೆಯವರು ವಿಶೇಷ ಸಾಧನೆ ಮಾಡಿದ್ದಾರೆ ಇದು ಬೇರೆ ಯಾರಿಂದಲೂ ಸಾಧ್ಯವಿಲ್ಲ ಎಂದು ಸಚಿವರನ್ನು ಹೋಗಳಿದ ಅವರು ಸಾಮಾಜಿಕ ಅಭಿವೃದ್ದಿ ಕಾರ್ಯಗಳಿಗೆ ಕಂಪೆನಿಯಿಂದ ಹಿಗೆಯೇ ಸಹಾಯ-ಸಹಕಾರ ದೊರೆಯಲಿದೆ. ಯುವ ಪ್ರತಿಭೆಗಳು ಈ ಸುಸಜ್ಜಿತ ಹೈಟೆಕ್ ಒಳಾಂಗಣ ಕ್ರೀಡಾಂಗಣದ ಸದುಪಯೋಗ ಪಡೆದು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲೆಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಹಲವಾರು ಯುವಕ ಸಂಘಗಳಿಗೆ ಕ್ರೀಡಾ ಸಾಮಗ್ರಿಯ ಕಿಟ್ಗಳನ್ನು ವಿತರಿಸಲಾಯಿತು. ಕ್ರೀಡಾಂಗಣ ಉಧ್ಘಾಟಿದ ಸಚಿವ ದೇಶಪಾಂಡೆಯವರು ಚೆಸ್, ಶೆಟಲ್ ಬ್ಯಾಡಮಿಂಟನ್ ಆಡಿದರು ಹಾಗೂ ಜಿಮ್ ಕಸರತ್ತು ಮಾಡಿ ಎಲ್ಲರ ಹುಬ್ಬೆರಿಸುವಂತೆ ಮಾಡಿದರು.
ವೇದಿಕೆಯಲ್ಲಿ ಟೋಯೋಟಾ ಕಿರ್ಲೊಸ್ಕರ ಮೋಟರ್ಸ್ ಪ್ರೇ.ಲಿ.ಬೆಂಗಳೂರಿನ ವೈಸ್ಚೇರಮನ್ ಹಾಗೂ ಪೂರ್ಣಕಾಲಿಕ ನಿರ್ದೇಶಕ ಶೇಖರ ವಿಶ್ವನಾಥನ್, ಮಂಗಳೂರಿನ ಎಮ್ಆರ್ಪಿಎಲ್ನ ರಾಮಸುಬ್ರಮಣಿಯನ್, ಡಿಎಫ್ಓ ಯತೀಶಕುಮಾರ, ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಪಿಡಬ್ಲೂಡಿ ಅಧಿಕಾರಿ ಆರ್.ಎಚ್ ಕುಲಕರ್ಣಿ ಸೇರಿದಂತೆ ಜನಪ್ರತಿನಿಧಿಗಳು ಅಧಿಕಾರಿಗಳು ಇದ್ದರು.
Leave a Comment