ಹಳಿಯಾಳ :- ಅಧಿಕಾರ ದುರ್ಲಾಬ ಹಾಗೂ ಕಾನೂನು ವ್ಯಾಪ್ತಿ ಮೀರಿ ಮಾಡುವ ಕಾರ್ಯಗಳೆಲ್ಲ ಭ್ರಷ್ಟಾಚಾರವಾಗಿದೆ ಎಂದು ಎ.ಸಿ.ಬಿ ಇಲಾಖೆಯ ಡಿ.ವೈಎಸ್ಪಿ ಗಿರೀಶ್ ಹೇಳಿದ್ದಾರೆ.
ಪಟ್ಟಣದ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ವಿ.ಡಿ.ಹೆಗಡೆ ಪಿ.ಯು ಕಾಲೇಜಿನಲ್ಲಿ ಆಯೋಜಿಸಿದ ಭ್ರಷ್ಟಾಚಾರ ನಿಗ್ರಹ ಜಾಗೃತಿ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಭ್ರಷ್ಟಾಚಾರ ಸರ್ವೆ ಸಾಮಾನ್ಯವಾಗಿಬಿಟ್ಟಿದೆ ಎಂದು ಬೇಸರದಿಂದ ನುಡಿದ ಅವರು ಕಳೆದ ಮೂರು ವರ್ಷಗಳ ಅವಧಿಯಲ್ಲಿ ಎಸಿಬಿಯು ಜಿಲ್ಲೆಯಲ್ಲಿ 15 ಪ್ರಕರಣಗಳನ್ನು ದಾಖಲಿಸಿದ್ದು ತನಿಖೆ ನಡೆಸಲಾಗುತ್ತಿದೆ ಎಂದರು.
ನಾಗರಿಕ ಸಮಾಜಕ್ಕೆ ಮಾರಕವಾಗಿರುವ ಈ ಭ್ರಷ್ಟಾಚಾರ ನಿಯಂತ್ರಿಸಲು 2016ರಲ್ಲಿ ರಾಜ್ಯ ಸರ್ಕಾರ ಎ.ಸಿ.ಬಿ ಇಲಾಖೆಯನ್ನು ಆರಂಭಿಸಿದೆ ಎಂದು ಗಿರಿಶ ಹೇಳಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಪಟ್ಟಣದಲ್ಲಿ ವಿವಿಧ ಪ್ರೌಢಶಾಲೆಗಳ ಮಕ್ಕಳು ಭ್ರಷ್ಟಾಚಾರ ನಿಗ್ರಹದ ಕುರಿತು ಜಾಗೃತಿ ಜಾಥಾ ನಡೆಸಿದರು.
ಶಿಕ್ಷಣ ತಜ್ಞ ಡಾ.ಟಿ.ಸಿ ಮಲ್ಲಾಪೂರಮಠ ಉಪನ್ಯಾಸ ನೀಡಿದರು. ವಿ.ಡಿ.ಹೆಗಡೆ ಕಾಲೇಜ ಪ್ರಾಚಾರ್ಯ ರಾಜಶೇಖರ ಬಾಬರ, ಶಿಕ್ಷಣ ಸಂಯೋಜಕ ಅರುಣ ನಾಯ್ಕ, ಎ.ಸಿ.ಬಿ ಪಿಎಸೈ ರಮೇಶ ಖಾನಾಪುರ, ಹಳಿಯಾಳ ಪಿಎಸೈ ಆನಂದಮೂರ್ತಿ ಇದ್ದರು. ಭಾಗ್ಯಾ ಶೆರೆಕರ ಹಾಗೂ ರೇಣುಕಾ ಗುತ್ತೇಣ್ಣನವರ ಕಾರ್ಯಕ್ರಮ ನಿರ್ವಹಿಸಿದರು.
Leave a Comment