ಹಳಿಯಾಳ:- ಖಾಸಗಿ ಶಾಲೆಗಳಿಗೆ ಆದ್ಯತೆ ನೀಡುವ ಮೂಲಕ ಸರ್ಕಾರ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು ಖಂಡನೀಯ ಸಂಗತಿಯಾಗಿದ್ದು ಮತ್ತೇ ಸರ್ಕಾರಿ ಶಾಲೆಗಳನ್ನು ಬಂದ್(ಮುಚ್ಚಲು) ಮಾಡಲು ಹೊರಟರೇ ಜಯ ಕರ್ನಾಟಕ ಸಂಘಟನೆ ರಾಜ್ಯಾದ್ಯಂತ ಊಗ್ರ ಹೋರಾಟ ನಡೆಸಲಿದೆ ಎಂದು ಸಂಘಟನೆ ರಾಜ್ಯಾಧ್ಯಕ್ಷ ಆರ್ ಚಂದ್ರಪ್ಪ ಎಚ್ಚರಿಕೆ ನೀಡಿದರು.
63ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಜಯ ಕರ್ನಾಟಕ ಸಂಘಟನೆ ಹಳಿಯಾಳ ಘಟಕದ 7ನೇ ವಾರ್ಷಿಕೋತ್ಸವ ಅಂಗವಾಗಿ ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ನಡೆದ ಕನ್ನಡ ರಸಮಂಜರಿ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಅವರು ಹಳಿಯಾಳ ಪಟ್ಟಣದಲ್ಲಿ ನಿಂತಿರುವ ದೊಡ್ಡ ಸಂಗೋಳ್ಳಿ ರಾಯಣ್ಣ ಹಾಗೂ ಕಿತ್ತೂರು ರಾಣ ಚೆನ್ನಮ್ಮ ಪ್ರತಿಮೆ ಸ್ಥಾಪನೆ ಮಾಡಲೆಬೇಕೆಂದು ಆಗ್ರಹಿಸಿದರು.
ಸಂಘಟನೆಯಲ್ಲಿ 40 ಲಕ್ಷ ಸದಸ್ಯರಿದ್ದು ಸಮಾಜ ಸೇವೆಯೇ ಸಂಘಟನೆಯ ಪ್ರಮುಖ ಉದ್ದೇಶವಾಗಿದೆ. ಯುವಕರು ದುಶ್ಚಟಗಳಿಂದ ದೂರವಿರಬೇಕು ಮಾತ್ರವಲ್ಲದೇ ಮೊಬೈಲ್ಗಳನ್ನು ಕಡಿಮೆ ಬಳಕೆ ಮಾಡಿ ಎಂದು ಕರೆ ನೀಡಿದರು.
ಅನ್ನದಾತನಾದ ರೈತ ಇಂದು ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾನೆ. ರೈತನಿಗೆ ಬೆನ್ನೆಲುಬಾಗಿ ನಾವು ನಿಲ್ಲಬೇಕಿದೆ ಎಂದ ಚಂದ್ರಪ್ಪಾ ರೈತರಿಗೆ ಸಕಾಲದಲ್ಲಿ ಅವರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಿ ರೈತರಿಗೆ ಪ್ರೋತ್ಸಾಹ ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಸ್ಥಳೀಯ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುತ್ತಿಲ್ಲ, ರೈತರ ಬಾಕಿ ಹಣ ನೀಡುತ್ತಿಲ್ಲ ಮಾತ್ರವಲ್ಲದೇ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡದೆ ಅನ್ಯಾಯವೆಸಗುತ್ತಿರುವ ಕುರಿತು ಕಿಡಿಕಾರಿದ ರಾಜ್ಯಾಧ್ಯಕ್ಷರು ಕಂಪೆನಿ ಕೂಡಲೇ ತನ್ನ ವರಸೆ ಬದಲಿಸಿ ರೈತರಿಗೆ ಸಹಕರಿಸದೆ ಇದ್ದರೇ ಇಂತಹ ಇತರ ಕಂಪೆನಿಗಳ ವಿರುದ್ದವು ರಾಜ್ಯದ್ಯಂತ ಏಕಕಾಲದಲ್ಲಿ ಊಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಸಮಂಜರಿ ಕಾರ್ಯಕ್ರಮಕ್ಕೂ ಮುನ್ನ ಸಂಘಟನೆಯ ಹಳಿಯಾಳ ಘಟಕದವರು ಚಂದ್ರಪ್ಪನವರನ್ನು ತೆರೆದ ವಾಹನದಲ್ಲಿ ಬೈಕ್ ರ್ಯಾಲಿಯ ಮೂಲಕ ಭವ್ಯ ಸ್ವಾಗತ ಕೊರಿದರು. ಬಸವೇಶ್ವರ, ಶಿವಾಜಿ ಮಹಾರಾಜರು, ಸಂಗೋಳ್ಳಿ ರಾಯಣ್ಣ ಪುಥ್ಥಳಿಗಳಿಗೆ ಹಾಗೂ ಕನ್ನಡಾಂಬೆಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಹಳಿಯಾಳದ ಆದಿಶಕ್ತಿಮಠದ ಕೃಷ್ಣಾನಂದ ಭಾರತಿ ಸ್ವಾಮಿಗಳು ಹಾಗೂ ಮಿಲಾಗ್ರಿಸ್ ಚರ್ಚನ ಫಾದರ್ ಜ್ಞಾನಪ್ರಕಾಶರಾವ ಅವರು ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಹಳಿಯಾಳ ಹಿರಿಯ ಪತ್ರಕರ್ತ ದಿ.ಅರುಣ ಕಾಶೀನಾಥ ನಾಯ್ಕ ಹಾಗೂ ಮಾಜಿ ಪ್ರಧಾನಿ ಅಟಲ್ಬಿಹಾರಿ ವಾಜಪೇಯಿ ಅವರಿಗೆ ಮೌನಾಚರಣೆ ಮಾಡುವ ಮೂಲಕ ಶೃದ್ದಾಂಜಲಿ ಸಲ್ಲಿಸಲಾಯಿತು. ಸುಮಾರು 3 ಗಂಟೆಗಳ ಕಾಲ ಕನ್ನಡ ರಸಮಂಜರಿ ಕಾರ್ಯಕ್ರಮ ವಿಜೃಂಭನೆಯಿಂದ ನಡೆದು ಸ್ಪರ್ದಾಳುಗಳಿಗೆ ಪ್ರಶಸ್ತಿ, ನೆನಪಿನ ಕಾಣ ಕೆ ನೀಡಿ ಪ್ರೋತ್ಸಾಹಿಸಲಾಯಿತು.
ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರಯ್ಯ, ಆನಂದ ರೆಡ್ಡಿ, ತಾಲೂಕಾಧ್ಯಕ್ಷ ವಿಲಾಸ ಕಣಗಲಿ, ಮುಂಡಗೊಡದ ಪಾಂಡುರಂಗ ಪವಾರ, ಯಲ್ಲಾಪೂರದ ವಿಲ್ಸನ್ ಫರ್ನಾಂಡಿಸ್, ಪ್ರಮುಖರಾದ ಶಿರಾಜ ಮುನವಳ್ಳಿ, ಸಂಪತ ಬೆಣಚೆಕರ, ಪಾಂಡುರಂಗ, ಮಂಜುನಾಥ ಕಲಕುಂಬಿ, ಅನಿಸ ಪಿರವಾಲೆ, ಗೋಪಿ ಮೇತ್ರಿ, ಕಿರಣ ಕಮ್ಮಾರ, ದತ್ತಾ ಬಾಂದೆಕರ, ಯಲ್ಲಪ್ಪಾ ಮಾಲವನಕರ, ವಿಕ್ರಾಂತ ಶೆಟ್ಟಿ, ಸುಭಾಷ ಕೊಲಕರ, ದುರ್ಗಪ್ಪಾ ಚಲವಾದಿ, ಬಸವರಾಜ ತಳವಾರ, ಮಹೇಶ ಹುಲಕೊಪ್ಪ, ಗಣೇಶ ಗೊಸಪ್ಪನವರ, ಮಹಾದೇವ ಮೊದಲಾದವರು ವೇದಿಕೆಯ ಮೇಲಿದ್ದರು.
Leave a Comment