ಹಳಿಯಾಳ :- ತಾಲೂಕಿನ ಮುರ್ಕವಾಡ ಗ್ರಾಮದಲ್ಲಿ ಗುಂಪು ಮಾಡಿಕೊಂಡು ಜೂಜಾಟ (ಅಂದರಬಾಹರ) ಆಡುತ್ತಿದ್ದವರ ಮೇಲೆ ದಾಳಿ ಮಾಡಿರುವ ಹಳಿಯಾಳ ಪೋಲಿಸರು 6 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಿಎಸ್ಐ ಆನಂದಮೂರ್ತಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಜೂಜಾಡುತ್ತಿದ್ದ ಸುನೀಲ್, ಸಂಜು, ಚಿದಾನಂದ, ಬಾಳು, ಪರಶುರಾಮ, ರೇಣುಕರಾಜ ಎಂಬುವವರನ್ನು ಬಂಧಿಸಿ 5530 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಬ್ಬದ ನೇಪ ಬೇಡ :- ದೀಪಾವಳಿ ಸಂದರ್ಭದಲ್ಲಿ ಹಬ್ಬದ ನೇಪವೊಡ್ಡಿ ಜೂಜಾಡುವವರ ಮೇಲೂ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಪಿಎಸ್ಐ ಆನಂದಮೂರ್ತಿ ಹಳಿಯಾಳ ಮಾಧ್ಯಮದವರಿಗೆ ಹೇಳಿದ್ದಾರೆ. ಹಿರಿಯ ಅಧಿಕಾರಿಗಳ ಖಡಕ್ ನಿರ್ದೇಶನದಂತೆ ಈಗಾಗಲೇ ಕ್ರಮ ಜರುಗಿಸಲಾಗಿದೆ ಎಂದು ಅವರು ತಿಳಿಸಿದರು.
Leave a Comment