ಹಳಿಯಾಳ:- ಹಳಿಯಾಳದ ಪ್ಯಾರಿ ಸಕ್ಕರೆ ಕಾರ್ಖಾನೆಯಲ್ಲಿ ಸ್ಥಳೀಯ ರೈತರ ಕಬ್ಬು ಕಟಾವು ಮಾಡಲು ಹಾಗೂ ಸ್ಥಳೀಯ ಯುವಕರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡುವಂತೆ ಜಯ ಕರ್ನಾಟಕ ಸಂಘಟನೆ ಹಳಿಯಾಳ ಘಟಕ ಆಗ್ರಹಿಸಿದೆ.
ಸಂಘಟನೆಯ ರಾಜ್ಯ ಅಧ್ಯಕ್ಷ ರಾಮಚಂದ್ರಪ್ಪ ನೇತೃತ್ವದಲ್ಲಿ ಸ್ಥಳೀಯ ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನಾ ಮೇರವಣ ಗೆಯಲ್ಲಿ ಕಾರ್ಖಾನೆಗೆ ಆಗಮಿಸಿದ ಅವರು ಕಂಪೆನಿ ಆಡಳಿತಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ರಾಮಚಂದ್ರಪ್ಪ ಹಳಿಯಾಳದ ರೈತರು ತಮ್ಮ ಜಮೀನುಗಳನ್ನು ತ್ಯಾಗ ಮಾಡಿದ್ದರಿಂದ ಸಕ್ಕರೆ ಕಾರ್ಖಾನೆ ಹಳಿಯಾಳದಲ್ಲಿ ನೆಲೆಗೊಂಡಿದೆ. ಆದರೆ ಕಾರ್ಖಾನೆ ಆಡಳಿತ ಮಂಡಳಿಯವರು ಪ್ರತಿ ವರ್ಷ ಇಲ್ಲಿಯ ರೈತರ ಕಬ್ಬನ್ನು ಮೊದಲು ಕಟಾವು ಮಾಡದೆ ಮೇ ತಿಂಗಳಿನ ಸಮೀಪ ಕಟಾವು ಮಾಡುತ್ತಿರುವುದರಿಂದ ಇಳುವರಿ ಹಾಗೂ ತೂಕದಲ್ಲಿ ಕಡಿಮೆಯಾಗಿ ರೈತರು ಸಾಕಷ್ಟು ನಷ್ಠ ಅನುಭವಿಸುತ್ತಿದ್ದಾರೆಂದು ಆರೋಪಿಸಿದರು.
ಇಲ್ಲಿಯ ವಾತಾವರಣದಂತೆ ನೀರಿನ ಕ್ಷಮತೆ ಅಷ್ಟು ದಿನ ಕೊಳವೆ ಬಾವಿ ಅಥವಾ ಕೆರೆ, ಹಳ್ಳಗಳಲ್ಲಿ ಇರುವದಿಲ್ಲ. ಇದರಿಂದ ಕೊನೆಯದಾಗಿ ಕಬ್ಬು ಕಳಿಸಿದ ರೈತರಿಗೆ ನೀರಿಲ್ಲದೆ ಮುಂದೆ ಕಬ್ಬು ಬೆಳಸಲು ತೊಂದರೆಯಾಗಿ ಅವರ ಜಮೀನಿನಲ್ಲಿಯ ಕಬ್ಬು ಇಳುವರಿ ಕಡಿಮೆಯಾಗಿ ಆ ರೈತರು ಆರ್ಥಿಕವಾಗಿ ಹಿಂದುಳಿಯುತ್ತಿದ್ದಾರೆಂದ ರಾಮಚಂದ್ರಪ್ಪ ಕಂಪೆನಿಯವರು ಜನೇವರಿ ತಿಂಗಳಿನ ಕೊನೆಯಲ್ಲಿಯೇ ಹಳಿಯಾಳ ಸುತ್ತಮುತ್ತಲಿನ ಸ್ಥಳೀಯ ರೈತರ ಕಬ್ಬು ಕಟಾವು ಮಾಡಬೇಕೆಂದು ಆಗ್ರಹಿಸಿದರು.
ಹಳಿಯಾಳದಲ್ಲಿ ಸಾಕಷ್ಟು ನಿರುದ್ಯೋಗಿಗಳಿದ್ದು ಸ್ಥಳಿಯವಾಗಿ ಕಾರ್ಖಾನೆ ಇದ್ದರು ಹೊರಗಿನವರಿಗೆ ಹೆಚ್ಚಿನ ಆದ್ಯತೆ ಕೊಡಲಾಗುತ್ತಿರುವುದು ಖಂಡನೀಯ ಎಂದ ಅವರು ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡದೆ ಇದ್ದರೇ ಮುಂದಿನ ದಿನಗಳಲ್ಲಿ ಊಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಅಲ್ಲದೇ ರೈತರ ಬಾಕಿ ಹಣ 305 ರೂ.ವನ್ನು ಕೂಡಲೇ ಅವರಿಗೆ ನೀಡುವಂತೆಯು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರಯ್ಯ, ಆನಂದ ರೆಡ್ಡಿ, ತಾಲೂಕಾಧ್ಯಕ್ಷ ವಿಲಾಸ ಕಣಗಲಿ, ಶಿರಾಜ ಮುನವಳ್ಳಿ, ಅನಿಸ ಪಿರವಾಲೆ, ಗೋಪಿ ಮೇತ್ರಿ, ಕಿರಣ ಕಮ್ಮಾರ, ದತ್ತಾ ಬಾಂದೆಕರ, ಶರತ ಶೆಟ್ಟಿ, ವಿನೋದ ಗಿಂಡೆ, ಯಲ್ಲಪ್ಪಾ ಮಾಲವನಕರ, ವಿಕ್ರಾಂತ ಶೆಟ್ಟಿ, ಸುಭಾಷ ಕೊಲಕರ, ದುರ್ಗಪ್ಪಾ ಚಲವಾದಿ, ಬಸವರಾಜ ತಳವಾರ, ಮಹೇಶ ಹುಲಕೊಪ್ಪ, ಗಣೇಶ ಗೊಸಪ್ಪನವರ ಇದ್ದರು.
Leave a Comment