ಹಳಿಯಾಳ:- ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮತ್ತು ಹಳಿಯಾಳ ತಾಲೂಕಿನಾದ್ಯಂತ ಇರುವ ಸಾವಿರಾರು ಅತಿಕ್ರಮಣದಾರ ರೈತರ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಲು ದಿ.14 ರಂದು ರಾಜಧಾನಿ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿ (ಕೆಂಪುಸೇನೆ) ಉತ್ತರ ಕರ್ನಾಟಕ ಅಧ್ಯಕ್ಷರ ವಿ.ಬಿ.ರಾಮಚಂದ್ರ ಹೇಳಿದ್ದಾರೆ.
ಪಟ್ಟಣದ ಅಂಬೇಡ್ಕರ ಭವನದಲ್ಲಿ ಸಮೀತಿಯಿಂದ ಆಯೋಜಿಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮತ್ತು ಹಳಿಯಾಳ ತಾಲೂಕಿನಾದ್ಯಂತ ಸಾವಿರಾರು ರೈತರು ತಮ್ಮ ತಮ್ಮ ಹೊಟ್ಟೆಪಾಡಿಗಾಗಿ ಅರಣ್ಯ ಜಮೀನುಗಳನ್ನು ಅತಿಕ್ರಮಣ ಮಾಡಿ ಸಾಗುವಳಿ ಮಾಡಿಕೊಂಡು ಬಂದಿದ್ದಾರಲ್ಲದೇ ಈ ಜಮೀನುಗಳನ್ನು ಖಾಯಂ ಮಂಜೂರಿ ಆಗುವುದಗೋಸ್ಕರ ಸಾವಿರಾರು ಅರ್ಜಿಗಳನ್ನು ಸಲ್ಲಿಸಿದ್ದಾರೆಂದರು.
ಅಲ್ಲದೇ ಈ ಜಮೀನುಗಳನ್ನು ಅಭಿವೃದ್ಧಿ ಪಡಿಸುವುದಕ್ಕಾಗಿ ಸಾಕಷ್ಟು ಹಣ ಮತ್ತು ಶ್ರಮ ವಿನಿಯೋಗಿಸಿದ್ದಾರೆ. ಸನ್ 2014 ರಲ್ಲಿ ಅರಣ್ಯ ಇಲಾಖೆಯವರು ಮತ್ತು ಕಂದಾಯ ಇಲಾಖೆಯವರು ಜಂಟಿಯಾಗಿ ಸರ್ವೆ ಮಾಡಿದ್ದು, ಜಿ.ಪಿ.ಎಸ್. ನಕ್ಷೆಯನ್ನು ತಯಾರಿಸಿದ್ದಾರೆಂದು ಹೇಳಿದ ರಾಮಚಂದ್ರ ಈ ಜಮೀನು ಮಂಜೂರಿ ಮಾಡಲು ಗ್ರಾಮಸಭೆಯ ಮುಖಾಂತರ ಗ್ರಾಮ ಅರಣ್ಯ ಹಕ್ಕು ಸಮಿತಿಯ ಶಿಫಾರಸ್ಸಿನ ಮೇರೆಗೆ ಮಂಜೂರಿಗಾಗಿ ವಿಭಾಗಮಟ್ಟದ ಸಮಿತಿ ಕಾರವಾರರವರಿಗೆ ಮುಂದಿನ ಕ್ರಮಕ್ಕಾಗಿ ಕಳಿಸಿದ್ದರು ಈವರೆಗೆ ಯಾವುದೇ ಕ್ರಮವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಉಪ ವಿಭಾಗಮಟ್ಟ ಕಾರವಾರರವರು ರೈತರಿಗೆ 75 ವರ್ಷಗಳ ಹಿಂದಿನ ದಾಖಲಾತಿಗಳು ಕೇಳುತ್ತಿದ್ದಾರೆ. ಒಂದಾನುವೇಳೆ 75 ವರ್ಷದ ಹಿಂದಿನ ದಾಖಲಾತಿ ನೀಡದಿದ್ದಲ್ಲಿ ಅವರ ಅರ್ಜಿಯನ್ನು ತಿರಸ್ಕರಿಸಲಾಗುವುದು ಎಂದು ಹೇಳಿ ರೈತರ ಅರ್ಜಿಯನ್ನು ತಿರಸ್ಕರಿಸಿ ರೈತರು ಬೀದಿಪಾಲಾಗುವಂತೆ ಮಾಡುತ್ತಿದ್ದಾರೆಂದು ಆರೋಪಿಸಿದರು.
ಅಧಿಕಾರಿಗಳ ಈ ಕ್ರಮ ಖಂಡಿಸಿ ದಿ.26-12-2017 ರಿಂದ 30-12-2017 ರವರೆಗೆ ಹಳಿಯಾಳದಿಂದ ಕಾರವಾರವರೆಗೆ ಪಾದಯಾತ್ರೆ ಮಾಡಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗಿದ್ದರೂ ಈವರೆಗೆ ಯಾವುದೇ ಪ್ರತಿಕ್ರೀಯೆ ಜಿಲ್ಲಾಡಳಿತದಿಂದ ಬಂದಿಲ್ಲ ಹೀಗಾಗಿ ಅನಿವಾರ್ಯವಾಗಿ ಕೆಂಪು ಸೆನೆಯು ದಿ.13-11-2018 ರಂದು ಹಳಿಯಾಳ ಹಾಗೂ ರಾಜ್ಯಾದ್ಯಂತ ಅತಿಕ್ರಮಣದಾರ ರೈತರೊಂದಿಗೆ ಬೆಂಗಳೂರು ಚಲೋ ನಡೆಸಿ ರಾಜಧಾನಿಗೆ ತಲುಪಿ ದಿ:14 ರಂದು ನೇರವಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಲಾಗುವುದು ಎಂದರು.
ಸುದ್ದಿಗೊಷ್ಠಿಯಲ್ಲಿ ತಾಲೂಕಾ ಕಾರ್ಯದರ್ಶಿ ರಾಜು ಕುರುಬುರ, ಸತ್ತಾರ ಬೇಟಗೇರಿ ಸಲಹೆಗಾರರು, ಅಶೋಕ ಕೇಸರೆಕರ, ನಾಗೇಂದ್ರ ಗೌಡಾ, ಸುಭಾಸ ಜಾಧವ, ಅಣ್ಣಪ್ಪಾ ಮಿರಾಶಿ, ಆನಂದ ಮುಗುದ, ಸುಧಾಸ ಧಾಮನೇಕರ, ಉಲ್ಲಾಸ ವಡ್ಡರ, ನಾಗೇಂದ್ರ ಮೇತ್ರಿ, ಮುಕುಂದ ಕಿಣಗೇಕರ, ಮಿನಾಕ್ಷಿ ಇರ್ಲಾ,ರವಿ ಇರ್ಲಾ ಇದ್ದರು.
Leave a Comment