ಹಳಿಯಾಳ:- ಕಳೆದ 2 ದಶಕಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಹಳಿಯಾಳದ ಉದ್ಯಮಿ ಶ್ರೀಪತಿ ಭಟ್ ಅವರನ್ನು ವಿಶ್ವ ಹಿಂದೂ ಪರಿಷತ್ ಹಳಿಯಾಳ ತಾಲೂಕಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಮೂಲತಃ ಉಡುಪಿಯವರಾದ ಭಟ್ ಅವರು ಹಳಿಯಾಳದಲ್ಲಿ ನೆಲೆ ಕಂಡಿದ್ದು ಈ ಹಿಂದೆ ಹಳಿಯಾಳ ಅರ್ಬನ್ ಬ್ಯಾಂಕ್ ನಿರ್ದೇಶಕರಾಗಿ, ಹೊಟೆಲ್ ಮಾಲಿಕರ ಸಂಘದ ಕಾರ್ಯದರ್ಶಿಯಾಗಿ, ಶಿವಾಜಿ ಮಹಾವಿದ್ಯಾಲಯದ ಎಸ್ಡಿಎಮ್ಸಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇನ್ನೂ 15 ವರ್ಷದಿಂದ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ನಿರ್ದೇಶಕರಾಗಿ, ಅಳ್ನಾವರ ಉದ್ದಿಮೆದಾರರ, ಟಿಂಬರ್ ಮರ್ಚಂಟ್ ಸಂಘದ ಅಧ್ಯಕ್ಷರಾಗಿ ಹಾಗೂ ಹಳಿಯಾಳದ ಶ್ರೀಮಾರುತಿ ಸೌಹಾರ್ದ ಸಹಕಾರಿ ನಿಯಮಿತದ ಸಂಸ್ಥಾಪಕ ಅಧ್ಯಕ್ಷರಾಗಿದ್ದು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು ಇತ್ತೀಚೆಗೆ ದಾಂಡೇಲಿಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಬೈಠಕ್ನಲ್ಲಿ ಪರಿಷತ್ನ ಪ್ರಾಂತ ಸಂಘಟನಾ ಕಾರ್ಯದರ್ಶಿ ಮಹಾಬಲೇಶ್ವರ ಹೆಗಡೆ ಶ್ರೀಪತಿ ಭಟ್ ಅವರನ್ನು ಹಳಿಯಾಳ ತಾಲೂಕಾ ನೂತನ ಅಧ್ಯಕ್ಷರನ್ನಾಗಿ ಘೊಷಿಸಿದರು.
ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ತಮಗೆ ಹಿಂದೂ ಸಂಘಟನೆಯಲ್ಲಿ ಉನ್ನತ ಸ್ಥಾನವನ್ನು ನೀಡಿ ಸಮಾಜದ ಸಂಘಟನೆಗೆ ಅವಕಾಶ ಮಾಡಿಕೊಟ್ಟಿರುವುದು ಸಂತಸ ತಂದಿದ್ದು ಹಳಿಯಾಳ ಭಾಗದಲ್ಲಿ ಹಿಂದೂ ಸಂಘಟನೆಗೆ ಹೆಚ್ಚಿನ ಒತ್ತೂ ನೀಡಲಾಗುವುದು ಎಂದು ಶ್ರೀಪತಿ ಭಟ್ ಹೇಳಿದರು.
Leave a Comment